ಕೊಲೆ ಮಾಡುವ ನಿರೀಕ್ಷೆ ಇರಲೇ ಇಲ್ಲ
Team Udayavani, Dec 10, 2017, 7:15 AM IST
ಹೊಸದಿಲ್ಲಿ: ರಾಜಸ್ಥಾನದ ರಾಜ್ಸಮಂದ್ನಲ್ಲಿ ಮುಸ್ಲಿಂ ಕೂಲಿಯಾಳನ್ನು ಬರ್ಬರವಾಗಿ ಹತ್ಯೆ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಶಂಭುಲಾಲ್ ಬಗ್ಗೆ ಆತನ ಸಂಬಂಧಿಗಳು ಈ ಘಟನೆಗೆ ಕಾರಣವಾಗಿರಬಹುದಾದ ಪ್ರತ್ಯೇಕ ಹಿನ್ನೆಲೆಯೊಂದನ್ನು ಬಹಿರಂಗಪಡಿಸಿದ್ದಾರೆ.
ಅವರ ಪ್ರಕಾರ, ಕೆಲ ವರ್ಷಗಳ ಹಿಂದೆ ರಾಜ್ಸಮಂದ್ನಲ್ಲಿ ಮುಸ್ಲಿಂ ಮಹಿಳೆಯೊಬ್ಬಳ ಮಗಳನ್ನು ಶಂಭು, ತನ್ನ ಸಹೋದರಿಯೆಂದು ಭಾರೀ ಹಚ್ಚಿಕೊಂಡಿದ್ದ. ಆಕೆ ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಯುವಕನ ಪ್ರೇಮಪಾಶದಲ್ಲಿ ಬಿದ್ದು ಆತನನ್ನೇ ಮದುವೆಯಾಗಿ ಹೋಗಿದ್ದಳು. ಆದರೆ, ಆಕೆಗೆ ಅಲ್ಲಿ ಕೊಡಬಾರದ ಚಿತ್ರಹಿಂಸೆ ನೀಡಲಾಗಿತ್ತು.
ಆಕೆಯನ್ನು ಅಲ್ಲಿಂದ ಪಾರು ಮಾಡಲು ಶಂಭು ಯತ್ನಿಸಿದಾಗ ಆತನಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ಈ ಕಹಿಯು ಪಶ್ಚಿಮ ಬಂಗಾಳದ ಮುಸ್ಲಿಮರ ಮೇಲೆ ದ್ವೇಷದ ಭಾವನೆ ಶಂಭುವಿನಲ್ಲಿ ಬೇರೂರಲು ಕಾರಣವಾಗಿತ್ತು.
ಇತ್ತೀಚೆಗೆ ಆತನಿಂದ ಹತ್ಯೆಗೊಳಗಾದ ಮೊಹಮ್ಮದ್ ಅಫÅಜುಲ್ ಕೂಡ ರಾಜ್ಸಮಂದ್ನಲ್ಲಿ ಹಿಂದೂ ಮಹಿಳೆಯೊಂದಿಗೆ ಸಂಬಂಧ ಇರಿಸಿಕೊಂಡಿ ದ್ದರಿಂದ ಇದನ್ನೂ ಲವ್ ಜಿಹಾದ್ ಎಂದು ತಿಳಿದ ಶಂಭು ಹಿಂದಿನ ಕಹಿ ಘಟನೆಯಿಂದ ಪ್ರೇರಿತನಾಗಿ ಕೊಲೆ ಮಾಡಿರಬಹುದೆಂದು ಆತನ ಸಂಬಂಧಿಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು