BJP ಸೇರಿದ್ದಕ್ಕೆ ರಾಮ್ ಕೃಪಾಲ್ ಕೈಕಟ್ ಮಾಡಲು ಬಯಸಿದ್ದೆ: ಮೀಸಾ
Team Udayavani, Jan 19, 2019, 10:35 AM IST
ಪಟ್ನಾ : ‘ಭಾರತೀಯ ಜನತಾ ಪಕ್ಷ ಸೇರಿದ್ದಕ್ಕೆ ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ಅವರ ಕೈಗಳನ್ನು ಅಂದೇ ಕತ್ತರಿಸಿ ಹಾಕಲು ಬಯಸಿದ್ದೆ’ ಎಂದು ಕ್ರೌರ್ಯ ಹಾಗೂ ಸೇಡಿನ ಮಾತನ್ನಾಡಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮೀಸಾ ಭಾರತಿ ಅವರು ವಿವಾದದ ಜೇನುಗೂಡಿಗೆ ಕೈಹಾಕಿದ್ದಾರೆ.
‘ನಮ್ಮದೇ ಪಕ್ಷದವರಾಗಿದ್ದ ರಾಮ್ ಕೃಪಾಲ್ ಅವರ ಬಗ್ಗೆ ನಮಗೆ ಅಪಾರ ಗೌರವಿತ್ತು. ಆದರೆ ಅವರು ಸುಶೀಲ್ ಕುಮಾರ್ ಮೋದಿ ಅವರೊಂದಿಗೆ ಕೈಜೋಡಿಸಲು ಮುಂದಾದಾಗ ನಮಗೆ ಅವರ ಮೇಲಿನ ಗೌರವವೆಲ್ಲ ನಾಶವಾಯಿತು. ಆ ಸಮಯದಲ್ಲಿ ನಾನು ಅವರ ಕೈಗಳನ್ನೇ ಕತ್ತರಿಸಿ ಹಾಕಲು ಬಯಸಿದ್ದೆ’ ಎಂದು ಪಟ್ನಾದ ಬಿಕ್ರಮ್ ಪ್ರದೇಶದಲ್ಲಿ ಏರ್ಪಟ್ಟಿದ್ದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಆರ್ಜೆಡಿ ಮುಖ್ಯಸ್ಥ ಲಾಲು ಮತ್ತು ಅವರ ಹಿರಿಯ ಪುತ್ರಿ ಭಾರತಿ ಅವರು ರಾಮ್ ಕೃಪಾಲ್ ಅವರನ್ನು ಚಾಚಾ ಎಂದೇ ಕರೆಯುತ್ತಿದ್ದರು. ಕೃಪಾಲ್ ಗೆ ಪಾಟಲೀಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡದಿದ್ದ ಕಾರಣಕ್ಕೆ, ಕೃಪಾಲ್ ಆರ್ಜೆಡಿಯಿಂದ ದೂರವಾಗಿದ್ದರು. 2014ರ ಲೋಕಸಭಾ ಚುನಾವಣೆಯನ್ನು ಪಾಟಲೀಪುತ್ರ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲ್ಲುವಲ್ಲಿ ಕೃಪಾಲ್ ಅವರು ಮೀಸಾ ಭಾರತಿಯನ್ನು ಸೋಲಿಸಿದ್ದರು.
61ರ ಹರೆಯದ ಕೃಪಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಾರತವು ಭಾರೀ ನಿರೀಕ್ಷೆ ಇಟ್ಟಿರುವ ಜನನಾಯಕ’ ಎಂದೇ ಬಣ್ಣಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ