ಉಪರಾಷ್ಟ್ರಪತಿಗೂ ಮೋಸಮಾಡಿದ್ದ ಸುಳ್ಳು ಜಾಹೀರಾತು!
Team Udayavani, Dec 30, 2017, 1:04 PM IST
ನವದೆಹಲಿ: ಸುಳ್ಳು ಜಾಹೀರಾತುಗಳಿಂದ ಉಪ ರಾಷ್ಟ್ರಪತಿಯೇ ಮೋಸ ಹೋಗಿದ್ದಾರೆ! ಅಚ್ಚರಿಯಾದರೂ ಇದು ಸತ್ಯ. ಖುದ್ದು ವೆಂಕಯ್ಯ ನಾಯ್ಡು ಅವರೇ ರಾಜ್ಯಸಭೆಯಲ್ಲಿ ಈ ವಿಚಾರ ತಿಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಉಪರಾಷ್ಟ್ರಪತಿಯಾದ ಹೊಸತರಲ್ಲಿ
ತೂಕ ಇಳಿಸುವ ಮಾತ್ರೆಗಳ ಜಾಹೀರಾತೊಂದನ್ನು ನೋಡಿದ್ದರಂತೆ. ತಕ್ಷಣವೇ ಅವನ್ನು ಕೊಳ್ಳಲು ಮುಂದಾದ ಅವರು, ಅವುಗಳಿಗೆ ನಿಗದಿಗೊಳಿಸಲಾಗಿದ್ದ 1000 ರೂ.ಗಳನ್ನು ಪಾವತಿಸಿದರಂತೆ. ಕೆಲವೇ ದಿನಗಳಲ್ಲಿ ಅವರಿಗೆ ಇ-ಮೇಲ್ ಕಳುಹಿಸಿದ ಆ ಕಂಪನಿಯು, ತೂಕವನ್ನು ಕೆಲವೇ ದಿನಗಳಲ್ಲಿ ಇಳಿಸುವ ಮ್ಯಾಜಿಕ್ ಮಾತ್ರೆಗಳೂ ಇದ್ದು ಅವಕ್ಕೆ ಮತ್ತೆ 1000 ರೂ. ಪಾವತಿಸಬೇಕು.
ಮ್ಯಾಜಿಕ್ ಮಾತ್ರೆಗಳಿಗೆ ಹಣ ಪಾವತಿಸಿದರೆ ಮಾತ್ರ ಈ ಹಿಂದೆ ಆರ್ಡರ್ ಮಾಡಿರುವ ಮಾತ್ರೆಗಳನ್ನು ಕಳುಹಿಸಲಾಗುವುದು ಎಂದು ಬರೆದಿತ್ತಂತೆ. ಇದರಿಂದ ಅನುಮಾನಗೊಂಡ ನಾಯ್ಡು, ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿದ್ದರಂತೆ. ಆಗ, ನಡೆದ ತನಿಖೆಯಲ್ಲಿ ಆ ಕಂಪನಿ ಭಾರತದ್ದಾಗಿರದೇ ಅಮೆರಿಕದ್ದು ಎಂದು ಗೊತ್ತಾಯಿತಂತೆ! ಇದನ್ನು ಹೇಳಿದ ನಾಯ್ಡು, ಇಂಥ ಸುಳ್ಳು ಜಾಹೀರಾತುಗಳನ್ನು ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು