ಜರ್ಮನಿ ಏರ್ಪೋರ್ಟ್ನಲ್ಲಿ ಕನ್ನಡತಿಯನ್ನು ವಿವಸ್ತ್ರಗೊಳಿಸಿ ತಪಾಸಣೆ!
Team Udayavani, Apr 2, 2017, 11:29 AM IST
ಹೊಸದಿಲ್ಲಿ: ಭದ್ರತಾ ಪರಿಶೀಲನೆ ಹೆಸರಲ್ಲಿ ಜರ್ಮನಿಯ ಪ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಕನ್ನಡತಿ ಮಹಿಳೆಯೊಬ್ಬರನ್ನು ಭದ್ರತಾ ಸಿಬಂದಿಗಳು ವಿವಸ್ತ್ರಗೊಳಿಸಿ ತಪಾಸಣೆ
ನಡೆಸಿದ ಅಮಾನವೀಯ ಘಟನೆ ನಡೆದಿದೆ. ಈ ಬಗ್ಗೆ ತಕ್ಷಣ ವಿವರ ನೀಡುವಂತೆ ವಿದೇಶಾಂಗ
ಸಚಿವೆ ಸುಷ್ಮಾ ಸ್ವರಾಜ್ ಅವರು ಭಾರತೀಯ ರಾಯಭಾರಿಗೆ ನಿರ್ದೇಶಿಸಿದ್ದಾರೆ.
ಉದರ ಚಿಕಿತ್ಸೆಗೆಂದು ಜರ್ಮನಿಗೆ ತೆರಳಿದ್ದ ಕನ್ನಡತಿ ಶೃತಿ ಬಸಪ್ಪ ಹೀನಾಯವಾಗಿ ಪರಿಶೀಲನೆಗೊಳಗಾದವರು. ಶೃತಿ ಫೇಸ್ಬುಕ್ನಲ್ಲಿ ತನಗಾದ ಅವಮಾನವನ್ನು ಬಹಿರಂಗಪಡಿಸಿದ್ದರು. ದೇಹದ ಸ್ಕ್ಯಾನ್ ಆದ ಬಳಿಕವೂ ತನ್ನನ್ನು ಯಾವ ದಾಖಲೆಗಳನ್ನು ತೋರಿಸಿದರೂ ಬಿಡದ ಭದ್ರತಾ ಸಿಬಂದಿಗಳು ಕೋಣೆಯೊಂದಕ್ಕೆ ಕರೆದೊಯ್ದು,ಮಗಳ ಎದುರೇ ವಿವಸ್ತ್ರಗೊಳಿಸಿ ತಪಾಸಣೆ ನಡೆಸಿರುವುದಾಗಿ ಬರೆದಿದ್ದರು.
ನನ್ನನ್ನು ಒಬ್ಬಳನ್ನೇ ಜನಾಂಗೀಯವಾಗಿ ಗುರುತಿಸಿ ಒಳಗೆ ಕರೊದೊಯ್ದು ಪರಿಶೀಲನೆ ನಡೆಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ನನ್ನ ಪತಿಯನ್ನು ಒಳಗೆ ಕರೆಯಲೂ ಅವಕಾಶ ನೀಡಲಿಲ್ಲ ಎಂದಿದ್ದಾರೆ.
ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಸುದ್ದಿಯನ್ನು ಟ್ಯಾಗ್ ಮಾಡಿ ರಾಯಭಾರಿ ಜನರಲ್ ರವೀಶ್ ಕುಮಾರ್ಗೆ ಟ್ವೀಟ್ ಮಾಡಿ ದಯವಿಟ್ಟು ಈ ಬಗ್ಗೆ ನನಗೆ ವರದಿ ನೀಡುವಂತೆ ಕೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು