ಪಂಜಾಬ್ ಆತಿಥ್ಯದಲ್ಲಿ ವಿಶ್ವ ಕಬಡ್ಡಿ ಕಪ್
Team Udayavani, Nov 14, 2019, 12:06 AM IST
ಚಂಡೀಗಢ: ಪಂಜಾಬ್ ಸರಕಾರ 2019ನೇ ಸಾಲಿನ “ವಿಶ್ವ ಕಬಡ್ಡಿ ಕಪ್’ ಪಂದ್ಯಾವಳಿಯನ್ನು ಆಯೋಜಿಸಲಿದ್ದು, ಮುಂದಿನ ಡಿ. ಒಂದರಿಂದ 9ರ ತನಕ ಈ ಕೂಟ ನಡೆಯಲಿದೆ ಎಂದು ರಾಜ್ಯ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಹೇಳಿದರು. ಈ ಕೂಟವನ್ನು ಸಿಕ್ಖ್ ಧರ್ಮಗುರು ಗುರುನಾನಕ್ ಅವರಿಗೆ ಅರ್ಪಿಸಲಾಗುವುದು ಎಂದೂ ಅವರು ಹೇಳಿದರು. ಇದು ಗುರುನಾನಕ್ ಅವರ 550ನೇ ಜನ್ಮ ದಿನಾಚರಣೆಯ ವರ್ಷವಾಗಿದೆ.
ಈ ಪಂದ್ಯಾವಳಿಯಲ್ಲಿ ಭಾರತ ಸೇರಿದಂತೆ 9 ದೇಶಗಳು ಪಾಲ್ಗೊಳ್ಳಲಿವೆ. ಉಳಿದ ತಂಡಗಳೆಂದರೆ ಅಮೆರಿಕ, ಆಸ್ಟ್ರೇಲಿಯ, ಇಂಗ್ಲೆಂಡ್, ಶ್ರೀಲಂಕಾ, ಕೀನ್ಯಾ, ನ್ಯೂಜಿಲ್ಯಾಂಡ್, ಪಾಕಿಸ್ಥಾನ ಮತ್ತು ಕೆನಡಾ. ಇವುಗಳಲ್ಲಿ ಪಾಕಿಸ್ಥಾನ ಮತ್ತು ಕೆನಡಾಕ್ಕೆ ಕೇಂದ್ರ ಸರಕಾರದಿಂದ ನಿರಾಕ್ಷೇಪಣಾ ಪತ್ರ ಲಭಿಸಬೇಕಷ್ಟೇ.
ಡಿ. ಒಂದರಂದು ಸುಲ್ತಾನ್ಪುರ್ ಲೋಧಿಯ “ಗುರುನಾನಕ್ ಸ್ಟೇಡಿಯಂ’ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಂದು 4 ಪಂದ್ಯಗಳನ್ನು ಆಡಲಾಗುವುದು. ಡೇರ ಬಾಬಾ ನಾನಕ್ನ “ಶಹೀದ್ ಭಗತ್ ಸಿಂಗ್ ನ್ಪೋರ್ಟ್ಸ್ ಸ್ಟೇಡಿಯಂ’ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಮೃತಸರ, ಫಿರೋಜ್ಪುರ್, ಪಟಿಯಾಲಾದಲ್ಲಿ ಲೀಗ್ ಪಂದ್ಯಗಳು, ಶ್ರೀ ಆನಂದ್ಪುರ್ ಸಾಹಿಬ್ನಲ್ಲಿ ಸೆಮಿಫೈನಲ್ ಪಂದ್ಯಗಳನ್ನು ಆಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ