ನನ್ನ ಮದುವೆಯಿಂದ ನೀವು ಜೈಲಿಗೆ ಹೋಗಿದ್ರಾ?
Team Udayavani, Nov 14, 2019, 12:43 AM IST
ವಿಜಯವಾಡ: ಪವನ್ ಕಲ್ಯಾಣ್ ಅವರೇ ನಿಮ್ಮ ಮೂವರು ಹೆಂಡತಿಯರ ಮಕ್ಕಳು ಯಾವ ಮಾಧ್ಯಮದಲ್ಲಿ ಓದಿದ್ದಾರೆ ಎಂಬ ಆಂಧ್ರಪ್ರದೇಶ ಸಿಎಂ ಜಗನ್ಮೋಹನ ರೆಡ್ಡಿ ಪ್ರಶ್ನೆಗೆ ನಟ ಪವನ್ ಕಲ್ಯಾಣ್ ಬುಧವಾರ ತಿರುಗೇಟು ನೀಡಿದ್ದಾರೆ.
‘ನಾನು ಮೂರು ಮದುವೆ ಆದ ಕಾರಣ ನೀವು ಜೈಲಿಗೆ ಹೋದದ್ದಾ’ ಎಂದು ಪ್ರಶ್ನೆ ಮಾಡಿದ್ದಾರೆ. ಶಿಕ್ಷಕರಿಗೆ ತರಬೇತಿ ನೀಡದೆ 1-6ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಜಾರಿ ಮಾಡಿದರೆ ಪರಿಸ್ಥಿತಿ ಏನಾದೀತು ಎಂದು ಜನಸೇನಾ ಪಕ್ಷದ ನಾಯಕ ಪ್ರಶ್ನೆ ಮಾಡಿದ್ದಾರೆ.