ಘಾಟ್ಕೋಪರ್ ಶ್ರೀ ಮೂಕಾಂಬಿಕಾ, ಕಾಲಭೈರವ ಮಂದಿರ: ವಾರ್ಷಿಕ ಮಹಾಪೂಜೆ
Team Udayavani, Feb 8, 2021, 9:04 PM IST
ಮುಂಬಯಿ: ಘಾಟ್ಕೋಪರ್ ಪಂತ್ ನಗರದ ಶ್ರೀ ಮೂಕಾಂಬಿಕಾ ಹಾಗೂ ಕಾಲಭೈರವ ಮಂದಿರದ 50ನೇ ವಾರ್ಷಿಕ ಮಹಾಪೂಜೆಯು ಜ. 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಕಲಶ ಪ್ರತಿಷ್ಠಾಪನೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪ್ರಸಾದ ವಿತರಣೆ, ರಾತ್ರಿ ಖಾರ್ಪೂರ್ವದ ಶನಿಮಹಾತ್ಮ ಸೇವಾ ಸಮಿತಿಯ ಕಾರ್ಯಕರ್ತರು ಹಾಗೂ ಮೀರಾರೋಡ್ ಮಹಿಳಾ ಭಕ್ತರಿಂದ ಭಜನೆ, ರಾತ್ರಿ ಕಾಲಭೈರವ ಮಂದಿರದಲ್ಲಿ ಮಹಾ ಮಂಗಳಾರತಿ ನಡೆಯಿತು.
ಇದನ್ನೂ ಓದಿ:ಮಾರ್ಚ್ನಲ್ಲಿ ಭಾರತಕ್ಕೆ ಬರಲಿವೆ 17 ರಫೇಲ್ ವಿಮಾನಗಳು : ರಕ್ಷಣಾ ಸಚಿವ
ಈ ಸಂದರ್ಭ ಕಳೆದ 50 ವರ್ಷಗಳಿಂದ ಮಂದಿರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂದಿರದ ಕಾರ್ಯಕರ್ತರನ್ನು, ಗಣ್ಯರು ಹಾಗೂ ವಿವಿಧ ಸಂಘ – ಸಂಸ್ಥೆಗಳಾದ ಶನಿಮಹಾತ್ಮಾ ಸೇವಾ ಸಮಿತಿ ಟ್ರಸ್ಟ್ ಖಾರ್ಪೂರ್ವ, ಶ್ರೀ ದುರ್ಗಾಪರಮೇಶ್ವರೀ ಮಂದಿರ ಘಾಟ್ಕೋಪರ್, ಶನಿಮಂದಿರ ಡೊಂಬಿವಲಿ, ಶ್ರೀ ಜೈಭವಾನಿ ಶನೀಶ್ವರ ಸೇವಾ ಸಮಿತಿ ಘಾಟ್ಕೋಪರ್, ವೆಸ್ಟರ್ನ್ ಇಂಡಿಯಾ ಶನಿಮಹಾತ್ಮ ಪೂಜಾ ಸಮಿತಿ, ಫೋರ್ಟ್ ಮುಂಬಯಿ, ಅಯ್ಯಪ್ಪ ಸ್ವಾಮಿ ಮಂದಿರ ಘಾಟ್ಕೋಪರ್ ಸಂಸ್ಥೆಗಳ ಪದಾಧಿಕಾರಿಗಳನ್ನು ಹಾಗೂ ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಂದಿರದ ಸ್ಥಾಪಕರಾದ ದಿ| ಸುಂದರ ಸಾಲ್ಯಾನ್ ಅವರ ಪತ್ನಿ ಮೀನಾಕ್ಷಿ ಸುಂದರ್ ಸಾಲ್ಯಾನ್, ತಾರಾನಾಥ್ ಸುಂದರ್ ಸಾಲ್ಯಾನ್, ಕಾರ್ಯಕರ್ತರನ್ನು ಸ್ಮರಣಿಕೆ, ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ