ಬಣ್ಣದ ರಂಗು…ಸಂಸ್ಕಾರದ ಮೆರುಗು ಬೇಸಗೆ ಶಿಬಿರ ಸಂಪನ್ನ
ವಿದ್ಯೆಯ ಜತೆಗೆ ಸಂಸ್ಕಾರ ಗುಣಗಳೂ ಅವಶ್ಯ: ಗೋಪಾಲ ತ್ರಾಸಿ
Team Udayavani, May 21, 2019, 3:26 PM IST
ಮುಂಬಯಿ: ಮಯೂರ ಸ್ಕೂಲ್ ಆಫ್ ಆರ್ಟ್ಸ್ ಮತ್ತು ವಿವೇಕ ಶಿಕ್ಷಣ ವಾಹಿನಿ ಮಂಡ್ಯ ಇವರ ವತಿಯಿಂದ ಜರಗಿದ “ಬಣ್ಣದ ರಂಗು…ಸಂಸ್ಕಾರದ ಮೆರುಗು’ ವಿಶೇಷ ಬೇಸಿಗೆ ಶಿಬಿರಕ್ಕೆ ರವಿವಾರ ತೆರೆಬಿದ್ದಿದೆ. ಕಿನಾರ ಕಡಲ ತೀರ, ಕುಂದಾಪುರ ಇಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ “ನೀರು ಉಳಿಸಿ, ಕಾಡು ಬೆಳೆಸಿ’ ಎಂಬ ಸಂದೇಶ ಸಾರುವ ಮರಳು ಶಿಲ್ಪ ರಚನೆಯೊಂದಿಗೆ ವಿಶೇಷವಾಗಿ ಶಿಬಿರವನ್ನು ಸಂಪನ್ನಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಪ್ರಬಂಧಕ ಮತ್ತು ಲೇಖಕ, ಕವಿ ಗೋಪಾಲ್ ತ್ರಾಸಿ, ಅತಿಥಿ ಅಭ್ಯಾಗತರಾಗಿ ಶಿಕ್ಷಕಿ ಮತ್ತು ಲೇಖಕಿ ನಾಗರತ್ನ ಜಿ.ಹೆಳೆì, ವಿವೇಕ ಶಿಕ್ಷಣ ವಾಹಿನಿ ಮಂಡ್ಯ ಇದರ ಸದಸ್ಯರು ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ವೈಷ್ಣವಿ ಪೆರ್ಡೂರು, ಕ್ಲೀನ್ ಕುಂದಾಪುರ ಯೋಜನೆಯ ಡಾ| ಕೆ.ರಶ್ಮೀ ಹಾಗೂ ಮಯೂರ ಸ್ಕೂಲ್ ಆಫ್ ಆರ್ಟ್ಸ್ನ ಸಂಸ್ಥಾಪಕ, ಶಿಬಿರದ ಆಯೋ ಜಕ ವಕ್ವಾಡಿ ಮಹೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಗೋಪಾಲ್ ತ್ರಾಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲೆ ಮೊದಲ ಬಾರಿ ನಡೆಯುತ್ತಿರುವ ಈ ಶಿಬಿರದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಕೇವಲ ವಿದ್ಯಾಜ್ಞಾನ ಒಂದಿದ್ದರೆ ಸಾಲದು, ಅದರೊಂದಿಗೆ ಭಾರತೀಯ ಸಂಸ್ಕಾರ ಗುಣಗಳು ಕೂಡ ಜೀವನದ ಅತೀ ಮುಖ್ಯ ಅಂಗ. ಇನ್ನಷ್ಟು ಇಂತಹ ಅನೇಕ ಕಾರ್ಯಕ್ರಮಗಳನ್ನು ಈ ಸಂಸ್ಥೆ ನಡೆಸುವಂತಾಗಲೆಂದು ಹಾರೈಸಿದರು.
ನಾಗರತ್ನ ಹೆಳೆì ಮಾತನಾಡಿ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರಾದರೂ ಮಹೇಂದ್ರ ಆಚಾರ್ಯ ಯವರಿಗೊಂದು ಉತ್ತಮ ಆರಂಭದ ಅಗತ್ಯ ವಿದೆ, ಅನೇಕ ಸವಾಲುಗಳಿದ್ದರೂ ಅವುಗಳನ್ನು ಮೆಟ್ಟಿ ನಿಂತು ಒಂದು ಉತ್ತಮ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಆಯೋಜಕರಿಗೆ ಧನ್ಯ ವಾದಗಳು. ಪೋಷಕರು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಿಗೆ ಹೆಚ್ಚೆಚ್ಚು ಕಳುಹಿಸಬೇಕು ಎಂದು ಮನವಿ ಮಾಡಿದರು.
ಡಾ| ರಶ್ಮೀ ಮಾತನಾಡಿ ಕಡಲು ಮಾಲಿನ್ಯದಿಂದ ಉಂಟಾಗುತ್ತಿರುವ ಹಾನಿ, ಅದನ್ನು ತಡೆಗಟ್ಟಲು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕ ಕ್ರಮಗಳ ಕುರಿತು ನೆರೆದವರಿಗೆ ತಿಳಿಸಿದರು. ಶಿಬಿರಾರ್ಥಿಯ ಪೋಷಕರಾದ ನಿಮಿತಾ ಅವರು ಶಿಬಿರ ಕುರಿತು ತಮ್ಮ ಅಭಿಪ್ರಾಯ ಮತ್ತು ಮಕ್ಕಳಿಗೆ ಶಿಬಿರದಿಂದ ದೊರೆತ ಉತ್ತಮ ವಿಚಾರಗಳನ್ನು ನೆರೆದವರಲ್ಲಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಗೋಪಾಲ್ ತ್ರಾಸಿ ಮತ್ತು ನಾಗರತ್ನ ಹೆಳೆì ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ವೈಷ್ಣವಿ ಪೆರ್ಡೂರು ಹಾಡು ಹಾಡಿ ರಂಜಿಸಿದರು. ಎಸ್.ನಿರೀûಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದು, ವಕ್ವಾಡಿ ಮಹೇಂದ್ರ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಶಿವಪ್ರಸಾದ್ ವಕ್ವಾಡಿ ನಿರೂ ಪಿಸಿದರು. ವಿಶ್ರುತಾ ಹೇಳೆì ವಂದಿಸಿದರು.
ಚಿತ್ರ, ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ