ಬಿಲ್ಲವ ಭವನದಲ್ಲಿ ಉಚಿತ ರೇಶನ್ ಕಿಟ್ಗಳ ವಿತರಣೆ
Team Udayavani, Jun 11, 2021, 12:50 PM IST
ಮುಂಬಯಿ: ತುಳು ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕೇಂದ್ರ ಕಚೇರಿ ಬಿಲ್ಲವ ಭವನದಲ್ಲಿ ಖಾನಾ ಚಾಹಿಯೇ ಫೌಂಡೇಶನ್ ಸಹಯೋಗದೊಂದಿಗೆ ಉಚಿತ ರೇಶನ್ ಕಿಟ್ಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಖಾನಾ ಚಾಹಿಯೇ ಫೌಂಡೇಶನ್ನ ರುಬಿನ್ ಮಸ್ಕರೇನಸ್, ನೀರಜ್ ಶೇಟೆÂ ಉಪಸ್ಥಿತರಿದ್ದು ಬಿಲ್ಲವರ ಅಸೋಸಿಯೇಶನ್ನ ಶಿಸ್ತುಬದ್ಧವಾದ ಹಾಗೂ ಸಮಾಜದ ಹಿತದೃಷ್ಟಿಯಿಂದ ಮಾಡುವ ಕಾರ್ಯ ಶ್ಲಾಘನೀಯ, ವಿದ್ಯಾಕ್ಷೇತ್ರದಲ್ಲಿ ಶಾಲೆಗಳನ್ನು ನಡೆಸುತ್ತಿರುವುದು ತಿಳಿದು ಸಂತೋಷವಾಗಿದೆ. ಅನ್ನದಾನದೊಂದಿಗೆ ವಿದ್ಯಾದಾನ ಮಾಡುತ್ತಿರುವ ಈ ಎಲ್ಲ ಕಾರ್ಯಗಳಲ್ಲಿ ತಮ್ಮ ಸಹಯೋಗವನ್ನು ಸಂತೋಷದಿಂದ ವ್ಯಕ್ತಪಡಿಸಿದರು.
ಡಾ| ಪ್ರಕಾಶ್ ಮೂಡುಬಿದ್ರೆ ಮಾತನಾಡಿ, ಅಸೋಸಿಯೇಶನ್ ಜನಸೇವೆಯನ್ನು ಜನಾರ್ದನ ಸೇವೆ ಎಂದು ಮಾಡುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈಯುತ್ತಿರುವ ಅಸೋಸಿ ಯೇಶನ್ಗೆ ತಮ್ಮ ಸಂಪೂರ್ಣ ಸಹಕಾರವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷರು ಡಾ| ಪ್ರಕಾಶ್ ಮೂಡುಬಿದ್ರೆ, ಭಾಸ್ಕರ್ ಎಂ. ಸಾಲ್ಯಾನ್, ಎನ್. ಟಿ. ಪೂಜಾರಿ, ಸುರೇಶ್ ಅಂಚನ್, ಕಿರಣ್ ಪೂಜಾರಿ, ಸುರೇಶ್ ಸುವರ್ಣ ಅವರನ್ನು ಪುಷ್ಪಗುತ್ಛನೀಡಿ ಗೌರವಿಸಿದರು.
ಅಸೋಸಿಯೇಶನ್ನ ಉಪಾಧ್ಯಕ್ಷರಾದ ಶಂಕರ್ ಡಿ. ಪೂಜಾರಿ, ಶ್ರೀನಿವಾಸ್ ಆರ್. ಕರ್ಕೇರ, ದಯಾನಂದ್ ಆರ್. ಪೂಜಾರಿ, ಜಯಂತಿ ವರದ ಉಳ್ಳಾಲ್. ರಾಜೇಶ್ ಜೆ. ಬಂಗೇರ ಉಪಸ್ಥಿತರಿದ್ದರು.ಉಚಿತ ಆಹಾರ ಧಾನ್ಯ ವಿತರಣೆಕಾರ್ಯಕ್ರ ಮದಲ್ಲಿ ಸುಮಾರು 200 ಕುಟುಂಬಗಳು ಜಾತಿ-ಮತ ಭೇದವಿಲ್ಲದೆ ಪಾಲ್ಗೊಂಡು ಪ್ರಯೋಜ ನವನ್ನು ಪಡೆದು ಕೊಂಡರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಜತೆ ಕಾರ್ಯದರ್ಶಿ ಕೇಶವ್ ಕೆ. ಕೋಟ್ಯಾನ್ ವಂದಿಸಿದರು. ಅಸೋಸಿಯೇಶನ್ನ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.