ಅಪರೂಪದ ಕಾಯಿಲೆ: ಬಾಲಕಿಯ ಚಿಕಿತ್ಸೆಗೆ ಸಹಕರಿಸಲು ಮನವಿ
Team Udayavani, Jul 17, 2018, 11:45 AM IST
ಪುಣೆ: ಫ್ಯಾನ್ಕೋನಿ ಎನೀಮೀಯಾ ಎಂಬ ಅಪರೂಪದ ಕಾಯಿಲೆಯಿಂದಾಗಿ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗೆ ಸಹಕರಿಸುವಂತೆ ಕೋರಲಾಗಿದೆ. ಪುಣೆಯಲ್ಲಿ ಹೊಟೇಲ್ ಉದ್ಯೋಗಿಯಾಗಿರುವ ಕುಂದಾಪುರ ಹಾಲಾಡಿ ಗ್ರಾಮದ ಕುಚ್ಚಾಳ್ ನಿವಾಸಿಯಾಗಿರುವ ರತ್ನಾಕರ ಶೆಟ್ಟಿ ಅವರ ಪುತ್ರಿ ಚೈತ್ರಾ ಶೆಟ್ಟಿ (18) ಅವರು ಫ್ಯಾನ್ಕೋನಿ ಎನೀಮೀಯಾ ಖಾಯಿಲೆಯಿಂದ ಬಳಲುತ್ತಿರುವ ದುರ್ದೈವಿಯಾಗಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಯದ ಹೆಲ್ತ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿರುವ ರತ್ನಾಕರ ಶೆಟ್ಟಿ ಈಗಾಗಲೇ ಪುತ್ರಿಯ ಚಿಕಿಕ್ಸೆಗಾಗಿ ಲಕ್ಷಾಂತರ ರೂ. ಗಳನ್ನು ವ್ಯಯಿಸಿದ್ದಾರೆ. ಎರಡು ವರ್ಷದ ಮಗುವಾಗಿದ್ದಾಗಲೇ ರೋಗದ ಲಕ್ಷಣ ಕಂಡುಬಂದಿದ್ದು, ಹೊಟೇಲ್ ಉದ್ಯೋಗಿಯಾಗಿರುವ ರತ್ನಾಕರ ಶೆಟ್ಟಿ ಮತ್ತು ದಿನಕೂಲಿ ಕೆಲಸ ಮಾಡುವ ಅವರ ಪತ್ನಿ ಚಂದ್ರಾವತಿ ಶೆಟ್ಟಿ ಅವರು ಪುತ್ರಿಯ ಚಿಕಿತ್ರೆಗೆ ಹಣವಿಲ್ಲದೆ ದಿಕ್ಕು ತೋಚದಂತಾಗಿದ್ದಾರೆ. ಕಳೆದ 16 ವರ್ಷಗಳಿಂದ ಮಗಳ ಚಿಕಿತ್ಸೆಗೋಸ್ಕರ ಜೀವನವನ್ನೇ ಮುಡಿಪಾಗಿರಿಸಿದ್ದಾರೆ.
ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ನಾರಾಯಣ ಹೃದಯಾಲಯದ ಹೆಲ್ತ… ಸಿಟಿ ಆಸ್ಪತ್ರೆಯ ಡಾ| ಸುನಿಲ್ ಭಟ್ ಅವರು, ಬೋನ್ ಮ್ಯಾರೋ ಟ್ರಾನ್ಸ್ಪ್ಲೆಂಟ್ಗೆ ಸೂಚಿಸಿದ್ದು, 27 ಲಕ್ಷ ರೂ. ವೆಚ್ಚ ತಗಲಬಹುದು ಎಂದು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ದಂಪತಿಯು ಇಷ್ಟೊಂದು ಮೊತ್ತದ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೆ ಏಕೈಕ ಪುತ್ರಿಯನ್ನು ಉಳಿಸಿಕೊಳ್ಳಲು ಸಹೃದಯ ದಾನಿಗಳಿಂದ ಸಹಾಯ ಸಹಕಾರವನ್ನು ಕೋರಿದ್ದಾರೆ. ಸಹಕಾರ ನಿಡಬಯಸುವವರು ವಿಜಯ ಬ್ಯಾಂಕ್, ಹಾಲಾಡಿ ಶಾಖೆ,
ಖಾತೆ ಸಂಖ್ಯೆ 107301010009079, IFSC CODE VIJB 0001073 ಇಲ್ಲಿಗೆ ಜಮಾವಣೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಚೈತ್ರಾ ಅರ್. ಶೆಟ್ಟಿ, D/O ರತ್ನಾಕರ ಶೆಟ್ಟಿ, ಕುಚ್ಚಾಳ್, ಅಂಚೆ ಹಾಲಾಡಿ 76, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಅಥವಾ 8861934198 ಈ ನಂಬರನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್