ಶಶಿಧರ ಶೆಟ್ಟಿ ಸ್ವರ್ಣ ಸಂಭ್ರಮ ಅಭಿನಂದನ ಸಮಾರಂಭಕ್ಕೆ ಚಾಲನೆ
Team Udayavani, Aug 7, 2019, 1:40 PM IST
ಮುಂಬಯಿ, ಆ. 6: ರಾಷ್ಟ್ರದ ಪ್ರತಿಷ್ಠಿತ ಕ್ಯಾಟರಿಂಗ್ ಸರ್ವಿಸ್ಗಳಲ್ಲಿ ಒಂದೆಣಿಸಿದ ಶಶಿ ಕ್ಯಾಟರಿಂಗ್ ಸರ್ವಿಸ್ನ ಮಾಲಕ, ಉದ್ಯಮಿ, ಕೊಡುಗೈದಾನಿ, ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ. ಶೆಟ್ಟಿ ಇವರ ಅಭಿಮಾನಿ ಬಳಗವು ಇಂದಿಲ್ಲಿ ಸಂಜೆ ಗುಜರಾತ್ನ ಬರೋಡಾ ಶಕ್ತಿ ಗ್ರೀನ್ಸ್ ಸಭಾಗೃಹದಲ್ಲಿ ಶಶಿಧರ ಬಿ. ಶೆಟ್ಟಿ ಸ್ವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಿತ್ತು.
ಮುಖ್ಯ ಅತಿಥಿಯಾಗಿದ್ದ ಆರ್ಎಸ್ಎಸ್ಧುರೀಣ, ಶ್ರೀ ರಾಮ ವಿದ್ಯಾ ಕೇಂದ್ರ ಟ್ರಸ್ಟ್ ಕಲ್ಲಡ್ಕ ಇದರ ಸಂಚಾಲಕ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಾಗರ್ ರತ್ನ ಹೊಟೇಲ್ ಸಮೂಹದ ಪ್ರವರ್ತಕ ಬಿಲ್ಲವ ಅಸೋಸಿಯೇಶನ್ ದೆಹಲಿ ಅಧ್ಯಕ್ಷ ಜಯರಾಮ್ ಬನಾನ್, ಆಳ್ವಾಸ್ ಶೈಕ್ಷಣಿಕ ಸಮೂಹ ಮೂಡಬಿದ್ರೆ ಇದರ ಕಾರ್ಯಾಧ್ಯಕ್ಷ ಡಾ| ಎಂ. ಮೋಹನ್ ಆಳ್ವ, ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥಾಪಕ ಅಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ಕೆ. ಡಿ. ಶೆಟ್ಟಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಎಂ. ಪೂಂಜ ಮತ್ತು ಮಾತೃಶ್ರೀ ಕಾಶಿ ಶೆಟ್ಟಿ ಕುವೆಟ್ಟು, ಧರ್ಮಪತ್ನಿ ಪ್ರಮೀಳಾ ಶೆಟ್ಟಿ, ಪುತ್ರಿ ಸೃಷ್ಟಿ ಶೆಟ್ಟಿ, ಪುತ್ರ ಸೌರ್ಯ ಶೆಟ್ಟಿ, ಅಭಿಮಾನಿ ಬಳಗದ ವಿಶಾಲ್ ಶಾಂತಾ, ಜಿನರಾಜ ಪೂಜಾರಿ, ಮದನ್ಕುಮಾರ್ ಮೂಡಿಗೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಶಾಂತ್ ಬಿ. ಶೆಟ್ಟಿ ಬರೋಡ, ರಾಜೇಶ್ ಬಿ. ಶೆಟ್ಟಿ ಬೆಳ್ತಂಗಡಿ, ಜಯರಾಮ ಎನ್. ಶೆಟ್ಟಿ, ದಯಾನಂದ ಬೋಂಟ್ರಾ, ಮೋಹನ್ ಸಿ. ಪೂಜಾರಿ ಅಹ್ಮಮಬಾದ್, ಯಶವಂತ್ ಶೆಟ್ಟಿ, ರಾಮ ಶೆಟ್ಟಿ, ಪ್ರೇಮಾ ಶೆಟ್ಟಿ, ಧನಲಕ್ಷ್ಮೀ ಶೆಟ್ಟಿ, ಶ್ರದ್ಧಾ ಶೆಟ್ಟಿ, ಸುನೀಲ್ ಶೆಟ್ಟಿ ಉಡುಪಿ, ಕೃಷ್ಣಮೂರ್ತಿ ಬಲ್ಲಾಳ್, ಮೋಹನ್ ಎಂ. ಪೂಜಾರಿ ಸೂರತ್, ಚಂದ್ರಶೇಖರ್ ಶೆಟ್ಟಿ, ಮಾಧವ ಶೆಟ್ಟಿ, ಕರ್ನೂರು ಮೋಹನ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಶಿಧರ ಬಿ. ಶೆಟ್ಟಿ ಜೀವನ ಚಿತ್ರಣದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಮನೋರಂಜನಾ ಕಾರ್ಯಕ್ರಮವಾಗಿ ಪ್ರಶಂಸ ತಂಡದ ಕಲಾವಿದರಿಂದ ತುಳು ಹಾಸ್ಯ ಪ್ರಹಸನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ