ಕೋವಿಡ್ ಸಂಕಷ್ಟ ಮಧ್ಯೆಯೂ ಸೊಸೈಟಿ ಕಾರ್ಯ ಪ್ರಶಂಸನೀಯ: ಪ್ರತಿಭಾ ಕರ್ಕೇರ
Team Udayavani, Mar 25, 2021, 2:23 PM IST
ಡೊಂಬಿವಲಿ, ಮಾ. 24 : ಕೋವಿಡ್ ಮಹಾಮಾರಿಯಿಂದ ಉದ್ಯೋಗ, ಉದ್ಯಮ ಕ್ಷೇತ್ರ ಸಂಪೂರ್ಣವಾಗಿ ಮುಗ್ಗರಿಸಿದ್ದು, ಇದರಿಂದ ಆರ್ಥಿಕ ಕ್ಷೇತ್ರವು ತಲ್ಲಣಗೊಂಡಿದೆ. ಇಂತಹ ಸಂಕಷ್ಟದ ಸಮಯದಲ್ಲಿಯೂ ಡೊಂಬಿವಲಿ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಆರ್ಥಿಕ ಸಂಸ್ಥೆಗಳಲ್ಲಿ ಒಂದಾದ ತುಳುಶ್ರೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಪ್ರಶಂಸನೀಯವಾಗಿದೆ ಎಂದು ತುಳುಶ್ರೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷೆ ಪ್ರತಿಭಾ ಕರ್ಕೇರ ತಿಳಿಸಿದರು.
ಮಾ. 21ರಂದು ಸಂಜೆ ಡೊಂಬಿವಲಿ ಪೂರ್ವದ ಅಗರ್ವಾಲ್ ಸಭಾಗೃಹದಲ್ಲಿ ನಡೆದ ತುಳುಶ್ರೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 21ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯರ ಮಾರ್ಗದರ್ಶನ, ಆಡಳಿತ ಮಂಡಳಿಯ ಸದಸ್ಯರ ಅಮೂಲ್ಯ ಸಹಕಾರದಿಂದ ಸಂಸ್ಥೆ ಪ್ರಗತಿ ಪಥದಲ್ಲಿ ಸಾಗಿ ರಜತ ಮಹೋತ್ಸವದತ್ತ ದಾಪುಗಾಲು ಹಾಕುತ್ತಿರುವುದು ಸಂತೋಷದ ಸಂಗತಿ. ಪ್ರಸಕ್ತ ವರ್ಷ ನಮ್ಮ ಸದಸ್ಯರಿಗೆ ಶೇ. 6ರಷ್ಟು ಲಾಭಾಂಶ ನೀಡುವುದಾಗಿ ಘೋಷಿಸಿದ ಅವರು, ಗ್ರಾಹಕರ ಸಹಾಯ, ಸಹಕಾರ ಸದಾಯಿರಲಿ ಎಂದು ಶುಭ ಹಾರೈಸಿದರು.
ಮಹಾಸಭೆಯಲ್ಲಿ ಸಂಸ್ಥೆಯ 20ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ್ ಸುವರ್ಣ ವಾಚಿಸಿದರು. ಹಿರಿಯ ಸದಸ್ಯ ರವಿ ಸನಿಲ್ ಸೂಚಿಸಿದರೆ, ಪ್ರಕಾಶ ಅಮೀನ್ ಅವರು ವಾರ್ಷಿಕ ವರದಿಯನ್ನು ಅನುಮೋದಿಸಿದರು. 2019-2020ನೇ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಲಕ್ಷ್ಮಣ್ ಸುವರ್ಣ ಸಭೆಯಲ್ಲಿ ಮಂಡಿಸಿದರು. ಹಿರಿಯ ಸದಸ್ಯ ವಸಂತ ಸುವರ್ಣ ಅವರ ಸೂಚನೆಯೊಂದಿಗೆ ಗಂಗಾಧರ ಶೆಟ್ಟಿಗಾರ್ ಅವರು ಅನುಮೋದಿಸಿದರು. 2019-2020ನೇ ಸಾಲಿನ ಮಾರ್ಚ್ವರೆಗಿನ ಲೆಕ್ಕಪತ್ರವನ್ನು ಕೋಶಾಧಿಕಾರಿ ನಾರಾಯಣ ಪೂಜಾರಿ ಮಂಡಿಸಿದ್ದು, ಜಾರ್ಜ್ ಅವರ ಸೂಚನೆಯೊಂದಿಗೆ ವಿನೋದಾ ಶೆಟ್ಟಿ ಅನುಮೋದಿಸಿದರು.
ಸಭೆಯಲ್ಲಿ 2020-2021ನೇ ಸಾಲಿನ ಆಂತರಿಕ ಲೆಕ್ಕ ಪರಿಶೋಧಕಕ ರಾಗಿ ಮೆ| ಯು. ಪಿ. ಪೈ ಹಾಗೂ ಬಾಹ್ಯ ಲೆಕ್ಕ ಪರಿಶೋಧಕರಾಗಿ ಪ್ರಕಾಶ್ ನಿಕಮ್ ಅವರನ್ನು ಹಿರಿಯ ಸದಸ್ಯ ವಸಂತ ಸುವರ್ಣ ಅವರ ಸೂಚನೆಯ ಮೇರೆಗೆ ಅನುಮೋದಿಸಲಾಯಿತು. ಮಹಾಸಭೆಯಲ್ಲಿ ಗಣ್ಯರಾದ ಎಂ. ಪಿ. ಪೈ, ಯು. ಪಿ. ಪೈ, ದೇವದಾಸ್ ಕುಲಾಲ್ ಮೊದಲಾದವರು ಸೊಸೈಟಿಯ ಕಾರ್ಯವೈಖರಿಯನ್ನು ಅಭಿನಂದಿಸಿ ಸಲಹೆ-ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯ, ಸಮಾಜ ಸೇವಕರಾದ ಮೋಹನದಾಸ ಪೈ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ವಿನೋದಾ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ವಸಂತ ಸುವರ್ಣ ಅವರು ಮೋಹನದಾಸ ಪೈ ಅವರ ಸಾಧನೆಗಳನ್ನು ವಿವರಿಸಿದರು. ಇದೇ ಸಂದರ್ಭ ಸಂಸ್ಥೆಯ ವತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಅಂಜಲಿ ತೋರವಿ, ಪ್ರಿಯಾಂಕಾ ಕೋಟ್ಯಾನ್, ಹೇಮಾ ಹೆಗಡೆ, ಸಮಾಧಾನಕರ ಬಹುಮಾನ ಪಡೆದ ಶ್ವೇತಾ ಶೆಟ್ಟಿ ಹಾಗೂ ಕೀರ್ತನ್ ಪ್ರಭು ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಗಣ್ಯರಾದ ಪ್ರತಿಭಾ ಕರ್ಕೇರ, ಯು. ಲಕ್ಷ್ಮಣ್ ಸುವರ್ಣ, ನಾರಾಯಣ ಪೂಜಾರಿ, ಎಂ. ಪಿ. ಪೈ, ದೇವದಾಸ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಹಾಸಭೆಯನ್ನು ನಡೆಸಲಾಯಿತು. ದೇವದಾಸ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್