ವಸಾಯಿರೋಡ್‌: ಬಾಲಾಜಿ ಸೇವಾ ಸಮಿತಿ;ಶಾಲೆಯ ದತ್ತು ಸ್ವೀಕಾರ


Team Udayavani, Aug 30, 2017, 4:58 PM IST

65.jpg

ಮುಂಬಯಿ: ವಸಾಯಿರೋಡ್‌ ಜಿ.ಎಸ್‌.ಬಿ ಯವರ ಬಾಲಾಜಿ ಸೇವಾ ಸಮಿತಿಯವರಿಂದ  ಈ  ವರ್ಷದ ಸ್ವಾತಂತ್ರ ದಿನಾಚರಣೆಯ ಶುಭ ದಿನದಂದು ವಸಾಯಿ ಶಹರದ ದಿವಾನ್‌ ಮಾನ್‌ನಲ್ಲಿರುವ ಜಿಲ್ಲಾ ಪರಿಷತ್‌ ಶಾಲೆಯನ್ನು ದತ್ತು ಸ್ವೀಕರಿಸಲಾಯಿತು.
  

 ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೆರಿಸುತ್ತಾ ಬಂದಿರುವ ಈ ವಸಾಯಿ ಜಿ.ಸ್‌.ಬಿ ಯವರ ಬಾಲಾಜಿ ಸೇವಾ ಸಮಿತಿಯು ಸಮಾಜ ಪರ ಕಾರ್ಯಗಳಲ್ಲಿ  ಕೂಡ ಜವಾಬ್ದಾರಿಯನ್ನು ಹೊಂದುತ್ತಾ, ಈಗ ಸುಮಾರು 80 ಆದಿವಾಸಿ ವಿದ್ಯಾರ್ಥಿ ಗಳು ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯನ್ನು ದತ್ತು ಸ್ವೀಕರಿಸಿ, ತಮ್ಮ ಸೇವೆಯ ಮೊದಲ ಹಂತದಲ್ಲಿ  ಶಾಲೆಯ ವಿದ್ಯಾರ್ಥಿಗಳಿಗೆ ಒಂದು ಜೋಡಿ ಸಮವಸ್ತ್ರ ಹಾಗೂ ಶಾಲೆಗೆ ಅಗತ್ಯವಿರುವ ವಸ್ತುಗಳು – ಅಂದರೆ 2ಕಪಾಟು , 7 ಗೋಡೆ ಗಡಿಯಾರಗಳು, ಒಂದು ಐ ಪ್ಯಾಡ್‌ ಹಾಗೂ ಎಲ್ಲ  ವಿದ್ಯಾರ್ಥಿಗಳಿಗೆ ಬಿಸ್ಕತ್ತು , ಸೇಬು, ತಂಪು ಪಾನಿಯ ಮತ್ತು ಸಮೋಸಾದೊಂದಿಗೆ ಖಾದ್ಯ ಪೊಟ್ಟಣಗಳನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಸಮಿತಿಯ  ಅಧ್ಯಕ್ಷರಾದ ಶ್ರೀ ತಾರಾನಾಥ ಪೈಯವರು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿದರು. ಅನಂತರ ವಿದ್ಯಾರ್ಥಿಗಳು ನೆರೆದ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಸ್ವತ್ಛ ಭಾರತ ನಿರ್ಮಾಣದ ಬಗ್ಗೆ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಧ್ವಜ ವಂದನೆಯ ಅನಂತರ ಸಮಿತಿಯ ವತಿಯಿಂದ 2 ಕಪಾಟನ್ನು ಸಮಿತಿಯ ಉಪಾಧ್ಯಕ್ಷರಾದ ಮೂಲ್ಕಿ ಕೃಷ್ಣ ಕಾಮತ್‌ ಅವರ  ಹಸ್ತದಿಂದ ಶಾಲೆಯ ಮುಖೊಪಾಧ್ಯಾಯಿನಿಯವರಿಗೆ ಹಸ್ತಾಂತರಿಸಲಾಯಿತು .

 ಅನಂತರ ನಡೆದ ಸಭಾಕಾರ್ಯಕ್ರಮದಲ್ಲಿ  ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ನಗರ ಸೇವಕರಾದ ಶ್ರೀಕಲ್ಫೆàಶ್‌‌ ನಾರಾಯಣ ಮಾಂಣRರ್‌ ವಹಿಸಿದರು. ವೇದಿಕೆಯಲ್ಲಿ ಬಾಲಾಜಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಪೈ ಅವರು ಮುಖ್ಯ ಅತಿಥಿಗಳಾದ ಹಾಗೂ ಸಮಿತಿಯ ಸಂಚಾಲಕ ಶ್ರೀ ದೇವೇಂದ್ರ ಭಕ್ತ ಹಾಗೂ ಶಿಕ್ಷಣ ವಿಭಾಗದ ಮಾಣಿಕು³ರ  ಕೇಂದ್ರದ ಪ್ರಮುಖರಾದ  ಶ್ರೀಮತಿ  ಸುನಂದಾ ನರೇಂದ್ರ ಚೌಧರಿ ಹಾಗೂ ಮಾಜಿ ನಗರ ಸೇವಕಿ ಶ್ರೀಮತಿ ಗೀತಾ ಕಾಂತಿ ಮಾಂಣRರ್‌ ಉಪಸ್ಥಿತರಿದ್ದರು . ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯವರಿಂದ ಸ್ವಾಗತ ಭಾಷಣ ಹಾಗೂ ಇತರ ವಿವಿಧ ಚಟುವಟಿಕೆಗಳ ಪ್ರದರ್ಶನ ಮತ್ತು ಧನ್ಯವಾದ ಅರ್ಪಣೆ ನಡೆಯಿತು. 

ಕೇಂದ್ರದ ಪ್ರಮುಖರಾದ ಶ್ರೀಮತಿ ಸುನಂದಾ ಚೌಧರಿಯವರು ತಮ್ಮ ಭಾಷಣದಲ್ಲಿ  ಈ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದದವರಿಂದ ಅತ್ಯುತ್ತಮ ಮಟ್ಟದ ಶಿಕ್ಷಣವನ್ನು ಆದಿವಾಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು  ಮಾಣಿಕು³ರ ಕೇಂದ್ರದಲ್ಲಿ ಈ ಶಾಲೆಯು ಅಗ್ರಸ್ಥಾನವನ್ನು ಪಡೆದಿದೆ ಎಂದು ತಿಳಿಸಿದರು .

ಈಗ ಬಾಲಾಜಿ ಸೇವಾ ಸಮಿತಿಯವರು ದತ್ತು ಸ್ವೀಕಾರ ಮಾಡಿರುವುದರಿಂದ ಸಮಿತಿಯ ಸಹಕಾರದಿಂದ ಈ ಶಾಲೆಯು ಇನ್ನೂ ಹೆಚ್ಚಿನ ಪ್ರಗತಿಯನ್ನು ಪಡೆಯುವಂತೆ ಆಶಿಸಿದರು. ಅಲ್ಲದೆ ಸಮಿತಿಯವರಿಗೆ ಧನ್ಯವಾದ ನೀಡಿದರು. ಬಾಲಾಜಿ ಸಮಿತಿಯ ಅಧ್ಯಕ್ಷ ಶ್ರೀ ತಾರಾನಾಥ ಪೈಯವರು ಮುಖ್ಯಅಥಿತಿಯಾಗಿ  ಮಾತನಾಡಿ ಶಾಲೆಯ ವಿದ್ಯಾರ್ಥಿಗಳ ಚಟುವಟಿಕೆ ಹಾಗೂ ಶಿಕ್ಷಣದ ಬಗ್ಗೆ ಆಸಕ್ತಿ ಇರುವುದನ್ನು ಶ್ಲಾಘಿಸಿ, ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂದೆ ಉತ್ತಮ ಪ್ರಜೆಗಳಾಗುವಂತೆ ಆಶೀರ್ವದಿಸಿದರು. 

ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ  ಶ್ರೀಮತಿ ವರ್ಷಾಕೃಷ್ಣ ಸಾಳುಂಕೆ ಆವರು ಮಾತನಾಡಿ ಶಾಲೆಯಲ್ಲಿ ಶಿಕ್ಷಣ ಕೊಡುವ  ರೀತಿಯ ಬಗ್ಗೆ ಹಾಗೂ ವಿದ್ಯಾರ್ಥಿಗಳು ಆದಿವಾಸಿಗಳಾದರೂ ಉತ್ತಮ ರೀತಿಯ ಶಿಕ್ಷಣ ಅಲ್ಲದೆ ಇತರ ಪಾಠೇತರ  ಚಟುವಟಿಕೆಯಲ್ಲಿ ಆಸಕ್ತಿ ನೀಡಿ ಭಾಗವಹಿಸುವ ಬಗ್ಗೆ ಮಾಹಿತಿ ನೀಡಿದರು ಹಾಗೂ ವಸಾಯಿ ಜಿ.ಎಸ್‌.ಬಿ. ಸಮಾಜದ ಬಾಲಾಜಿ ಸೇವಾ ಸಮಿತಿಯವರಿಗೆ ಈ ಶಾಲೆಯನ್ನು  ದತ್ತುಸ್ವೀಕಾರ ಮಾಡಿದ ಬಗ್ಗೆ ಸಂತೋಷವನ್ನು ವ್ಯಕ್ತ ಪಡಿಸಿ ಧನ್ಯವಾದ ನೀಡುತ್ತಾ, ಸಮಿತಿಯ ಸಹಕಾರದಿಂದ ಮುಂಬರುವ ದಿನಗಳಲ್ಲಿ ಶಾಲೆಯು ಇನ್ನೂ ಹೆಚ್ಚಿನ ಪ್ರಗತಿಯನ್ನು  ಹೊಂದುವುದರ ಬಗ್ಗೆ ಆಶಿಸಿದರು. ಸಮಿತಿಯ  ಸಂಚಾಲಕರಾದ ಶ್ರೀ ದೇವೇಂದ್ರ ಭಕ್ತರು ಮಾತನಾಡಿ ಸಮಿತಿಯು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಮ್ಮ ಸಮಾಜ ಪರ ಕಾರ್ಯಕ್ರಮಗಳಲ್ಲಿ ಒಂದಾದ  ಶಾಲೆಯ ದತ್ತು ಸ್ವೀಕಾರ ಮಾಡುವ ಬಗ್ಗೆ ಮತ್ತು ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಗತ್ಯವಾದ ವಸ್ತುಗಳು 

ಮತ್ತು ಸೌಕರ್ಯವನ್ನು ಸಮಿತಿಗೆ ಸಾಧ್ಯವಾದ ಪ್ರಮಾಣದಲ್ಲಿ ನೀಡುವುದಾಗಿ ಆಶ್ವಾಸನೆ ನೀಡಿದರು. ಅಲ್ಲದೆ ಶಾಲೆಯ ಇನ್ನೂ ಹೆಚ್ಚಿನ ಪ್ರಗತಿ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗುವಂತೆ ಆಶೀರ್ವದಿಸಿದರು.

ಅನಂತರ ಎಲ್ಲ ವಿದ್ಯಾರ್ಥಿ  ವಿದ್ಯಾರ್ಥಿನಿಯರಿಗೆ ಸಮಿತಿಯ ವತಿಯಿಂದ‌ ಖಾದ್ಯ ಪೊಟ್ಟಣಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ವರ್ಗ ಬಾಲ ವಿಕಾಸ ಮಂಡಳಿಯ ಸದಸ್ಯರು , ದಿವಾನ್ಯನ್‌ ಪರಿಸರದ‌ ಇತರ ನಾಗರಿಕರು ಹಾಗೂ ವಸಾಯಿ ಜಿಎಸ್‌ಬಿ ಬಾಲಾಜಿ  ಸೇವಾ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಶೆಣೈ ಹಾಗೂ ಇತರ ಪದಾಧಿಕಾರಿಗಳಾದ ಮನೋಹರ ಶೆಣೈ, ವಿಜೆಯೇಂದ್ರ ಪ್ರಭು, ವಿವೇಕಾನಂದ ಭಕ್ತ,  ಲಕ್ಷ್ಮಣ ರಾವ್‌,  ಶಿರೀಷ್‌ ಆಚಾರ್ಯ, ಶ್ರೀನಿವಾಸ ಪಡಿಯಾರ್‌, ರಾಮಚಂದ್ರ ಹೆಗ್ಡೆ,  ಅರವಿಂದ ಹೊನ್ನಾವರ, ಯಶವಂತ ಕಾಮತ್‌, ಹಾಗೂ ಮಹಿಳಾ ವಿಭಾಗದ ಶ್ರೀಮತಿ ಸುಧಾ ಭುಜೆÉ ಮತ್ತು ಯುವ ವಿಭಾಗದ ಸಚಿನ್‌ ಪಡಿಯಾರ್‌ ಮತ್ತು ಕು.ಅಪೇಕ್ಷಾ ಭಕ್ತ ಹಾಗೂ ಇತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಗೆ  ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ  ಮುಕ್ತಾಯಗೊಂಡಿತು.
 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.