Asian Games; ಆರ್ಚರಿ ಉತ್ಕೃಷ್ಟ ನಿರ್ವಹಣೆ; 21 ಚಿನ್ನದ ಪದಕಗಳೊಂದಿಗೆ ಸಂಖ್ಯೆ 86ಕ್ಕೆ

ವನಿತಾ ಹಾಕಿ: ಭಾರತಕ್ಕೆ ಆಘಾತ ಸೆಮಿಫೈನಲ್‌ನಲ್ಲಿ ಚೀನ ವಿರುದ್ಧ ಸೋಲು

Team Udayavani, Oct 5, 2023, 10:55 PM IST

1-dadasdasd

ಹ್ಯಾಂಗ್‌ಝೂ: ಗೇಮ್ಸ್‌ನ ಆರ್ಚರಿ ಸ್ಪರ್ಧೆಯ ಕಾಂಪೌಂಡ್‌ ವಿಭಾಗದಲ್ಲಿ ಭಾರತ ಉತ್ಕೃಷ್ಟ ನಿರ್ವಹಣೆ ನೀಡಿದೆ. ತಂಡ ವಿಭಾಗ ದಲ್ಲಿ ಗುರುವಾರ ಎರಡು ಚಿನ್ನ ಗೆಲ್ಲುವ ಮೂಲಕ ಪಾರಮ್ಯ ಮೆರೆದಿದೆ. ಈ ಮೂಲಕ ಗೇಮ್ಸ್‌ನಲ್ಲಿ ಶ್ರೇಷ್ಠ ನಿರ್ವಹಣೆಯ ಪ್ರದರ್ಶನ ನೀಡಿದೆ.

ಜ್ಯೋತಿ ಸುರೇಖಾ ವೆನ್ನಮ್‌, ಅದಿತಿ ಸ್ವಾಮಿ ಮತ್ತು ಪರ್ಣೀತ್‌ ಕೌರ್‌ ಅವರನ್ನು ಒಳಗೊಂಡ ವನಿತೆಯ ಕಾಂಪೌಂಡ್‌ ತಂಡವು ಕೇವಲ ಒಂದಂಕದಲ್ಲಿ ಚೈನೀಸ್‌ ತೈಪೆ ತಂಡವನ್ನು ಸೋಲಿಸಿ ಚಿನ್ನ ಗೆದ್ದು ಸಂಭ್ರಮಿಸಿತು. ಅಂತಿಮ ಸುತ್ತಿನಲ್ಲಿ 60ರಲ್ಲಿ 60 ಅಂಕ ಗಳಿಸುವ ಮೂಲಕ ಭಾರತ ಅದ್ಭುತ ಸಾಧನೆಗೈದಿತು.

ಈ ಹಿಂದಿನ ಪಂದ್ಯದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯ ವನ್ನು ಸೋಲಿಸಿದ್ದ ಚೈನೀಸ್‌ ತೈಪೆ ತಂಡವು ಭಾರತೀಯರ ಅಮೋಘ ಆಟಕ್ಕೆ ಕೊನೆಗೂ ಶರಣಾಗಿ 230-229 ಅಂಕ ಗಳಿಂದ ಸೋತು ಬೆಳ್ಳಿಗೆ ತೃಪ್ತಿ ಪಟ್ಟು ಕೊಂಡಿತು. ಎರಡು ತಿಂಗಳ ಹಿಂದೆ ವಿಶ್ವ ಚಾಂಪಿಯನ್‌ ಆಗಿದ್ದ ಭಾರತೀಯ ತಂಡ ಇದೀಗ ಏಷ್ಯನ್‌ ಚಾಂಪಿಯನ್‌ ಆಗಿ ಮೆರೆದಿದೆ.

ಪುರುಷರಿಗೂ ಚಿನ್ನ
ಅಭಿಷೇಕ್‌ ವರ್ಮ, ಓಜಸ್‌ ದೇವತಾಲೆ ಮತ್ತು ಪ್ರಥಮೇಶ್‌ ಜಾಕರ್‌ ಅವರನ್ನು ಒಳಗೊಂಡ ಪುರುಷರ ಕಾಂಪೌಂಡ್‌ ತಂಡವು ಫೈನಲ್‌ನಲ್ಲಿ ದಕ್ಷಿಣ ಕೊರಿಯವನ್ನು 235-230 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಜಯಿಸಿತ್ತು. ಭಾರತ ತಂಡ ಬುಧವಾರ ನಡೆದ ಮಿಕ್ಸೆಡ್‌ ತಂಡ ಸ್ಪರ್ಧೆಯಲ್ಲೂ ಚಿನ್ನ ಜಯಿಸಿತ್ತು. ಈ ಮೂಲಕ ತಂಡ ವಿಭಾಗದ ಮೂರು ಚಿನ್ನ ಭಾರತಕ್ಕೆ ಒಲಿಯಿತು.
ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಅಭಿಷೇಕ್‌ ವರ್ಮ ಮತ್ತು ಓಜಸ್‌ ದೇವತಾಲೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಭಾರತ ಆರ್ಚರಿಯಲ್ಲಿ ಆರು ಪದಕ ಗೆಲ್ಲುವುದು ಖಚಿತವಾಗಿದೆ. ಇದು ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಶ್ರೇಷ್ಠ ನಿರ್ವಹಣೆ ಆಗಿದೆ. 2014ರ ಗೇಮ್ಸ್‌ನಲ್ಲಿ ಭಾರತ ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದಿರುವುದು ಭಾರತದ ಈ ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು.

ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ ನಿರೀಕ್ಷೆ
ಮಿಕ್ಸೆಡ್‌ ಮತ್ತು ವನಿತೆಯರ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಜ್ಯೋತಿ ಸುರೇಖಾ ವೆನ್ನಮ್‌ ಸಿಂಗಲ್ಸ್‌ ಫೈನಲ್‌ನಲ್ಲೂ ಸ್ಪರ್ಧಿಸಲಿದ್ದು ಹ್ಯಾಟ್ರಿಕ್‌ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 27ರ ಹರೆಯದ ಜ್ಯೋತಿ ಶನಿವಾರ ನಡೆಯುವ ವೈಯಕ್ತಿಕ ಫೈನಲ್‌ನಲ್ಲಿ ದಕ್ಷಿಣ ಕೊರಿಯದ ಸೊ ಚೇವೋನ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

ಭಾರತ ಇದುವರೆಗೆ ಗೆದ್ದಿರುವ ಪದಕಗಳು: ಚಿನ್ನ- 21; ಬೆಳ್ಳಿ – 32; ಕಂಚು -33, ಒಟ್ಟು 86

ಸ್ಕ್ವಾಷ್‌: ಸಿಂಗಲ್ಸ್‌ನಲ್ಲಿ ಸೌರವ್‌ ಘೋಷಲ್‌ಗೆ ಬೆಳ್ಳಿ, ಮಿಕ್ಸೆಡ್‌ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನ

ಅನುಭವಿ ದೀಪಿಕಾ ಪಳ್ಳಿಕಲ್‌ ಮತ್ತು ಹರೀಂದರ್‌ ಪಾಲ್‌ ಸಿಂಗ್‌ ಸಂಧು ಅವರು ಕೆಲವೊಂದು ಆತಂಕದ ಕ್ಷಣಗಳನ್ನು ಎದುರಿಸಿದರೂ ಸ್ಕ್ವಾಷ್‌ ಸ್ಪರ್ಧೆಯ ಮಿಕ್ಸೆಡ್‌ ಡಬಲ್ಸ್‌ ವಿಭಾಗದ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಿಂಗಲ್ಸ್‌ ಫೈನಲ್‌ನಲ್ಲಿ ಸೌರವ್‌ ಘೋಷಲ್‌ ಅವರು ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ದೀಪಿಕಾ-ಹರೀಂದರ್‌ ಅವರು 35 ನಿಮಿಷಗಳ ಕಠಿನ ಹೋರಾಟದಲ್ಲಿ ಮಲೇಷ್ಯದ ಐಫಾ ಬಿಂಟಿ ಅಜ್ಮಾನ್‌ ಮತ್ತು ಮೊಹಮ್ಮದ್‌ ಸಿಯಾಫಿಕ್‌ ಬಿನ್‌ ಕಮಾಲ್‌ ಅವರನ್ನು 11-10, 11-10 ಅಂಕಗಳಿಂದ ಉರುಳಿಸಿ ಚಿನ್ನ ಗೆದ್ದರು. ಇದು ಸ್ಕ್ವಾಷ್‌ನಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಚಿನ್ನವಾಗಿದೆ.

ಭಾರತದ ಅಗ್ರ ಆಟಗಾರ ಸೌರವ್‌ ಘೋಷಲ್‌ ಫೈನಲ್‌ನಲ್ಲಿ ಮಲೇಷ್ಯದ ಇಯೈನ್‌ ಯೊ ಎನ್‌ಜಿ ಅವರೆದುರು ನಾಲ್ಕು ಗೇಮ್‌ಗಳ ಕಠಿನ ಹೋರಾಟದಲ್ಲಿ ಸೋತು ನಿರಾಶೆಗೊಳಿಸಿದರು. ಸೋತ ಸೌರವ್‌ ಬೆಳ್ಳಿ ಪಡೆದರು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಭಾರತದ ಅಭಯ್‌ ಸಿಂಗ್‌ ಮತ್ತು ಅನಾಹತ್‌ ಸಿಂಗ್‌ ಅವರು ಕಂಚಿನ ಪದಕ ಪಡೆದಿದ್ದಾರೆ. ಆದರೂ ಸ್ಕ್ವಾಷ್‌ನಲ್ಲಿ ಭಾರತ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕದೊಂದಿಗೆ ಶ್ರೇಷ್ಠ ನಿರ್ವಹಣೆ ದಾಖಲಿಸಿ ಸಂಭ್ರಮಿಸಿದೆ. 2014ರ ಗೇಮ್ಸ್‌ನಲ್ಲಿ ಭಾರತ ಐತಿಹಾಸಿಕ ಚಿನ್ನ ಸಹಿತ ಎರಡು ಬೆಳ್ಳಿ ಮತ್ತು ಒಂದು ಕಂಚು ಗೆದ್ದಿತ್ತು.

ವನಿತಾ ಹಾಕಿ: ಭಾರತಕ್ಕೆ ಆಘಾತ ಸೆಮಿಫೈನಲ್‌ನಲ್ಲಿ ಚೀನ ವಿರುದ್ಧ ಸೋಲು

ಚಿನ್ನ ಗೆಲ್ಲುವ ಫೇವರಿಟ್‌ ಭಾರತ ತಂಡವು ವನಿತೆಯರ ಹಾಕಿ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಚೀನ ವಿರುದ್ಧ 0-4 ಗೋಲುಗಳಿಂದ ಸೋಲನ್ನು ಕಂಡು ಆಘಾತ ಅನುಭವಿಸಿತು. ಈ ಸೋಲಿನಿಂದ ಭಾರತ ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತವಾಯಿತಲ್ಲದೇ ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯಲು ವಿಫ‌ಲವಾಯಿತು.

ಕಳೆದ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಭಾರತೀಯ ವನಿತಾ ತಂಡವು ಕಣದಲ್ಲಿರುವ ಗರಿಷ್ಠ ರ್‍ಯಾಂಕಿನ ತಂಡವಾಗಿತ್ತು. ಚೀನಕ್ಕೆ ಹೋಲಿಸಿದರೆ ಭಾರತ ಬಲಿಷ್ಠವಾಗಿತ್ತು. ಆದರೆ ತಂಡದ ಯಾವುದೇ ಆಟಗಾರ್ತಿಯರು ನಿರೀಕ್ಷಿತ ನಿರ್ವಹಣೆ ನೀಡಲು ವಿಫ‌ಲರಾಗಿ ನಿರಾಶೆಗೊಳಿಸಿದರು. ಚೀನ ಕಳೆದ ಗೇಮ್ಸ್‌ನಲ್ಲಿ ಕಂಚು ಪಡೆದಿತ್ತು. ಭಾರತ ಇನ್ನು ಕಂಚಿನ ಪದಕಕ್ಕಾಗಿ ಹೋರಾಡ ಬೇಕಾಗಿದೆ. ಶನಿವಾರ ನಡೆಯುವ ಈ ಪಂದ್ಯದಲ್ಲಿ ಭಾರತವು ಜಪಾನ್‌ ಮತ್ತು ದಕ್ಷಿಣ ಕೊರಿಯ ನಡುವಣ ಇನ್ನೊಂದು ಸೆಮಿಫೈನಲ್‌ ಪಂದ್ಯದ ಸೋತ ತಂಡವನ್ನು ಎದುರಿಸಲಿದೆ.

ಟಾಪ್ ನ್ಯೂಸ್

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.