7 ಲಕ್ಷ ರೂ. ಪಡೆದ ದೇಶಪಾಂಡೆ, ಅನಿರುದ್ಧ
ಕರ್ನಾಟಕ ಪ್ರೀಮಿಯರ್ ಲೀಗ್ ಆಟಗಾರರ ಹರಾಜು
Team Udayavani, Jul 28, 2019, 5:07 AM IST
ಬೆಂಗಳೂರು: ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಹರಾಜು ಯಶಸ್ವಿಯಾಗಿ ಮುಗಿದೆ. ಲಭ್ಯವಿದ್ದ 237 ಆಟಗಾರರ ನಡುವೆ ತಮಗೆ ಬೇಕಾದವರನ್ನು ಕೊಳ್ಳಲು ಭರ್ಜರಿ ಚೌಕಾಶಿ ನಡೆಯಿತು.
ಅಚ್ಚರಿಯೆಂದರೆ ರಾಜ್ಯದ ಅತ್ಯಂತ ಖ್ಯಾತ ಕ್ರಿಕೆಟಿಗರನ್ನು ಕೊಳ್ಳಲು ಫ್ರಾಂಚೈಸಿ ಗಳು ಹಿಂದೆ ಮುಂದೆ ನೋಡಿದ್ದು! ಪ್ರಮುಖ ಆಟಗಾರರು ರಾಷ್ಟ್ರೀಯ ತಂಡ, ಎ ತಂಡ, ದುಲೀಪ್ ಟ್ರೋಫಿಯಲ್ಲಿ ಆಡುವುದು ಖಚಿತಗೊಂಡಿರುವುದರಿಂದ ಫ್ರಾಂಚೈಸಿಗಳು ಈ ಆಟಗಾರರನ್ನು ಆಯ್ಕೆ ಮಾಡಿಕೊಂಡು ಕೈಸುಟ್ಟುಕೊಳ್ಳಲು ಸಿದ್ಧವಿಲ್ಲ ಎಂಬ ಸಂದೇಶ ರವಾನಿಸಿದವು.
ಶನಿವಾರದ ಹರಾಜಿನಲ್ಲಿ ಗಮನ ಸೆಳೆದ ಆಟಗಾರರೆಂದರೆ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ. ಇವರಿಬ್ಬರನ್ನು ಕೊಳ್ಳಲು ಫ್ರಾಂಚೈಸಿಗಳು ಗರಿಷ್ಠ ಪೈಪೋಟಿ ನಡೆಸಿದವು. ಆಲ್ರೌಂಡರ್ ಪವನ್ ದೇಶಪಾಂಡೆ 7.30 ಲಕ್ಷ ರೂ. ಮೊತ್ತಕ್ಕೆ ಶಿವಮೊಗ್ಗ ಲಯನ್ಸ್ ಪಾಲಾದರು. ಇದು ಈ ಬಾರಿಯ ಕೆಪಿಎಲ್ನಲ್ಲಿ ದಾಖಲಾದ ಗರಿಷ್ಠ ಮೊತ್ತ. ಪವನ್ ಆಲ್ರೌಂಡರ್ ಆಗಿರುವುದರಿಂದ ನೀಡಿರುವ ಮೊತ್ತ ಸೂಕ್ತವೂ ಹೌದು ಎಂದು ವಿಶ್ಲೇಷಿಸಲಾಗಿದೆ.
ಗರಿಷ್ಠ ಮೊತ್ತ ಪಡೆದುಕೊಂಡ
ಮತ್ತೂಬ್ಬ ಆಟಗಾರ ಅನಿರುದ್ಧ ಜೋಶಿ. ಇವರು ಕೂಡ ಆಲ್ರೌಂಡರ್ ಆಗಿ ಹೆಸರು ಮಾಡಿದ್ದಾರೆ. ಇವರನ್ನು ಮೈಸೂರು ವಾರಿಯರ್ಸ್ ತಂಡ 7.10 ಲಕ್ಷ ರೂ. ನೀಡಿ ಖರೀದಿಸಿತು. ಇದು ಈ ಕೆಪಿಎಲ್ನಲ್ಲಿ ದಾಖಲಾದ 2ನೇ ಗರಿಷ್ಠ ಹರಾಜು ಮೊತ್ತ.
ಪಾಂಡೆ ಕಡೆಗೂ ಮಾರಾಟ
ಭಾರತ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಪಡೆದಿರುವ ಮನೀಷ್ ಪಾಂಡೆ ಆರಂಭಿಕ ಸುತ್ತಿನಲ್ಲಿ ಮಾರಾಟವಾಗಲಿಲ್ಲ. ಆದರೆ ಅವರು ಆ.15ರ ವೇಳೆ ರಾಜ್ಯಕ್ಕೆ ಮರಳುವ ಭರವಸೆಯಿರುವುದರಿಂದ 2ನೇ ಸುತ್ತಿನಲ್ಲಿ ಬೆಳಗಾವಿ ಪ್ಯಾಂಥರ್ಸ್ 2 ಲಕ್ಷ ರೂ. ನೀಡಿ ಖರೀದಿಸಿತು.
ಮಾರಾಟವಾಗದವರು
ಪ್ರಮುಖ ಆಟಗಾರರಾದ ಕರುಣ್ ನಾಯರ್, ಶ್ರೇಯಸ್ ಗೋಪಾಲ್, ರೋನಿತ್ ಮೋರೆ ಮಾರಾಟವಾಗಲಿಲ್ಲ. ಈ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿರುವುದರಿಂದ ಫ್ರಾಂಚೈಸಿಗಳು ಜವಾಬ್ದಾರಿ ತೆಗೆದುಕೊಳ್ಳಲು ಬಯಸಲಿಲ್ಲ.
ಗರಿಷ್ಠ ಮೊತ್ತ ಪಡೆದವರು (ಲಕ್ಷ ರೂ.ಗಳಲ್ಲಿ)
1. ಪವನ್ ದೇಶಪಾಂಡೆ-7.30 (ಶಿವಮೊಗ್ಗ ಲಯನ್ಸ್)
2. ಅನಿರುದ್ಧ ಜೋಶಿ -7.10 (ಮೈಸೂರು ವಾರಿಯರ್ಸ್)
3. ಪ್ರಸಿದ್ಧ ಕೃಷ್ಣ-5.80 (ಬಳ್ಳಾರಿ ಟಸ್ಕರ್ಸ್)
4. ಮೊಹಮ್ಮದ್ ತಾಹಾ-5.70 (ಹುಬ್ಬಳ್ಳಿ ಟೈಗರ್ಸ್)
5. ಅಮಿತ್ ವರ್ಮ-5.20 (ಮೈಸೂರು ವಾರಿಯರ್ಸ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ