ಫಿಂಚ್ಗೆ ಹೆಚ್ಚಿನ ವಿಶ್ರಾಂತಿ;ಹ್ಯಾಂಡ್ಸ್ಕಾಂಬ್ ಭಾರತದತ್ತ
Team Udayavani, Sep 16, 2017, 6:25 AM IST
ಮೆಲ್ಬರ್ನ್: ಬಿರುಸಿನ ಆರಂಭಕಾರ ಆರನ್ ಫಿಂಚ್ ಗಾಯಾಳಾಗಿರುವುದರಿಂದ, ಮುನ್ನೆಚ್ಚರಿಕೆಯ ಕ್ರಮವಾಗಿ ಪೀಟರ್ ಹ್ಯಾಂಡ್ಸ್ಕಾಂಬ್ ಅವರನ್ನು ಆಸ್ಟ್ರೇಲಿಯ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಹ್ಯಾಂಡ್ಸ್ಕಾಂಬ್ ಮೊದಲ ಪಂದ್ಯಕ್ಕೂ ಮುನ್ನ ಭಾರತ ತಲುಪಲಿದ್ದಾರೆ.
ಕಾಲಿನ ಸ್ನಾಯು ಸೆಳೆತಕ್ಕೊಳಗಾಗಿರುವ ಆರನ್ ಫಿಂಚ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಚೆನ್ನೈನ ಮೊದಲ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನವಿತ್ತು. ಆದರೆ ಆಸೀಸ್ ತಂಡದ ಮೂಲಗಳ ಪ್ರಕಾರ ಫಿಂಚ್ ಮೊದಲ 2-3 ಪಂದ್ಯಗಳಲ್ಲೂ ಆಡುವ ಸಾಧ್ಯತೆ ಇಲ್ಲ. ಗಾಯದ ತೀವ್ರತೆ ಗಮನಿಸಿದಾಗ ಅವರು ಸರಣಿಯಿಂದ ಹೊರಗುಳಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಹೀಗಾಗಿ ಬದಲಿ ಕ್ರಿಕೆಟಿಗನನ್ನು ಕೇಳಿಕೊಳ್ಳಲಾಗಿತ್ತು. ಈ ಅವಕಾಶ ಪೀಟರ್ ಹ್ಯಾಂಡ್ಸ್ಕಾಂಬ್ ಅವರಿಗೆ ಲಭಿಸಿದೆ.
“ಫಿಂಚ್ ಚೆನ್ನೈಯಲ್ಲಿ ಸ್ಕ್ಯಾನಿಂಗ್ಗೆ ಒಳಗಾಗಿದ್ದಾರೆ. ಅವರ ಸಮಸ್ಯೆ ಗಂಭೀರವಾಗಿರಲಿಕ್ಕಿಲ್ಲ ಎಂದೇ ನಾವು ಭಾವಿಸುತ್ತೇವೆ. ಸದ್ಯ ಮೊದಲ ಕೆಲವು ಪಂದ್ಯಗಳಿಗೆ ಫಿಂಚ್ ಲಭಿಸುವುದಿಲ್ಲ. ಆದರೆ ಅವರು ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ. ಪೂರ್ತಿಯಾಗಿ ಚೇತರಿಸಿದ ಬಳಿಕ ಆಡಬಹುದು’ ಎಂದು ಆಸ್ಟ್ರೇಲಿಯ ತಂಡದ ಫಿಸಿಯೋ ಅಲೆಕ್ಸ್ ಕೌಂಟೂರಿಸ್ ಹೇಳಿದ್ದಾರೆ.
ಪೀಟರ್ ಹ್ಯಾಂಡ್ಸ್ಕಾಂಬ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ವೇಳೆ ಆಸ್ಟ್ರೇಲಿಯ ತಂಡದಲ್ಲಿದ್ದರು. ಈ ಸರಣಿ ಮುಗಿದ ಬಳಿಕ ಮೆಲ್ಬರ್ನ್ಗೆ ವಾಪಸಾಗಿದ್ದರು. ಶನಿವಾರ ಮತ್ತೆ ಭಾರತದತ್ತ ಹಾರಿ ಬರಲಿದ್ದಾರೆ. ರವಿವಾರದ ಮೊದಲ ಪಂದ್ಯದ ಆಯ್ಕೆಗೆ ಲಭ್ಯರಿರುತ್ತಾರೆ ಎಂದು ಆಸ್ಟ್ರೇಲಿಯ ತಂಡದ ಆಡಳಿತ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್