ಮ್ಯಾಕ್ಸ್ ವೆಲ್- ಕ್ಯಾರಿ ದ್ವಿಶತಕದ ಜೊತೆಯಾಟ: ಕಡೇ ಕದನದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಆಸೀಸ್
ಆರ್ಚರ್ ಎಸೆದ ಒಂದು ನೋ ಬಾಲ್ ಪಂದ್ಯದ ಚಿತ್ರಣವನ್ನೇ ಬದಲಿಸಿತು!
Team Udayavani, Sep 17, 2020, 9:59 AM IST
ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಆಸೀಸ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವೀರೋಚಿತವಾಗಿ ಗೆದ್ದ ಆಸೀಸ್ ಸರಣಿ ಮುಡಿಗೇರಿಸಿಕೊಂಡಿದೆ. ಸೋಲಿನ ಅಂಚಿಗೆ ಸಾಗುತ್ತಿದ್ದ ತಂಡವನ್ನು ಮ್ಯಾಕ್ಸ್ ವೆಲ್ ಮತ್ತು ಅಲೆಕ್ಸ್ ಕ್ಯಾರಿ ದ್ವಿಶತಕದ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಓಲ್ಡ್ ಟ್ರಾಫೋರ್ಡ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಗೆ ಮೊದಲ ಓವರ್ ನಲ್ಲೇ ಸ್ಟಾರ್ಕ್ ಆಘಾತ ನೀಡಿದರು. ರಾಯ್ ಮತ್ತು ರೂಟ್ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. ತಂಡಕ್ಕೆ ಆಧಾರವಾದ ಜಾನಿ ಬೆರಿಸ್ಟೋ ಶತಕ ಬಾರಿಸಿದರು. 126 ಎಸೆತ ಎದುರಿಸಿದ ಬೆರಿಸ್ಟೋ 112 ರನ್ ಬಾರಿಸಿದರು. ಕೊನೆಯಲ್ಲಿ ಸ್ಯಾಮ್ ಬಿಲ್ಲಿಂಗ್ ಮತ್ತು ಕ್ರಿಸ್ ವೋಕ್ಸ್ ಅರ್ಧಶತಕ ಬಾರಿಸಿ ತಂಡದ ಮೊತ್ತ 300 ದಾಟುವಂತೆ ನೋಡಿಕೊಂಡರು.
ಇಂಗ್ಲೆಂಡ್ 50 ಓವರ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಸ್ಟಾರ್ಕ್ ಮತ್ತು ಜಂಪಾ ತಲಾ ಮೂರು ವಿಕೆಟ್ ಪಡೆದರೆ, ಕಮಿನ್ಸ್ ಒಂದು ವಿಕೆಟ್ ಕಬಳಿಸಿದರು.
ಗುರಿ ಬೆನ್ನತ್ತಿದ ಆಸೀಸ್ ಸತತ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 73 ರನ್ ಆಗುವಷ್ಟೆರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತು. ಹೀನಾಯ ಸೋಲಿನ ಹಂತಕ್ಕೆ ತಲುಪಿದ್ದ ತಂಡವನ್ನು ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಅಲೆಕ್ಸ್ ಕ್ಯಾರಿ ವೀರೋಚಿತವಾಗಿ ದ್ವಿಶತಕದ ಜೊತೆಯಾಟವಾಡಿದರು.
ಖಾತೆಯೇ ತೆರೆದಿರದ ಅಲೆಕ್ಸ್ ಕ್ಯಾರಿ ಜೋಫ್ರಾ ಆರ್ಚರ್ ಎಸೆತಕ್ಕೆ ಔಟಾದರು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಇಲ್ಲಿಂದ ಆಸೀಸ್ ಆಟವೇ ಬದಲಾಯಿತು. ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ಜೋಡಿ ಆಸೀಸ್ ಗೆ ಮತ್ತೆ ಗೆಲುವಿನ ಆಸೆ ಚಿಗುರಿಸಿದರು. ಕ್ಯಾರಿ 106 ರನ್ ಗಳಿಸಿದರೆ, ಮ್ಯಾಕ್ಸ್ ವೆಲ್ 108 ರನ್ ಗಳಿಸಿದರು. ಇವರಿಬ್ಬರು 212 ರನ್ ಜೊತೆಯಾಟ ನಡೆಸಿದರು.
ಕೊನೆಯ ಓವರ್ ನಲ್ಲಿ ಹತ್ತು ರನ್ ಗಳಿಸಬೇಕಾದಾಗ ಸ್ಟಾರ್ಕ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಜಯ ಸಾಧಿಸಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಜೋ ರೂಟ್ ಎರಡು ವಿಕೆಟ್ ಪಡೆದರೆ, ಆರ್ಚರ್ ಮತ್ತು ರಶೀದ್ ತಲಾ ಒಂದು ವಿಕೆಟ್ ಕಬಳಿಸಿದರು.
2-1 ಅಂತರದಲ್ಲಿ ಸರಣಿ ಗೆದ್ದ ಟಿ20 ಸೋಲಿನ ಸೇಡು ತೀರಿಸಿಕೊಂಡಿತು. ಗ್ಲೆನ್ ಮ್ಯಾಕ್ಸ್ ವೆಲ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ