ಅಫ್ಘಾನ್ ಬೌಲಿಂಗ್ ದಾಳಿ; ಅಪಾಯದಲ್ಲಿ ಬಾಂಗ್ಲಾ
ಬಾಂಗ್ಲಾ ಜಯಕ್ಕೆ 398 ರನ್ ಗುರಿ; 136ಕ್ಕೆ 6 ವಿಕೆಟ್ ಪತನ
Team Udayavani, Sep 9, 2019, 5:14 AM IST
ಚಿತ್ತಗಾಂಗ್: ಅಫ್ಘಾನಿಸ್ಥಾನ ಐತಿಹಾಸಿಕ ಗೆಲುವಿನ ಬಾಗಿಲಲ್ಲಿ ನಿಂತಿದೆ. ಚಿತ್ತಗಾಂಗ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶವನ್ನು ಹಣಿಯಲು ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಸೋಮವಾರ ಮಳೆ ಸಹಕರಿಸಿದರೆ ರಶೀದ್ ಖಾನ್ ಪಡೆ ಇದರಲ್ಲಿ ಯಶಸ್ಸು ಕಾಣುವುದರಲ್ಲಿ ಅನುಮಾನವಿಲ್ಲ.
ಗೆಲುವಿಗೆ 398 ರನ್ನುಗಳ ದೊಡ್ಡ ಗುರಿ ಪಡೆದಿರುವ ಬಾಂಗ್ಲಾದೇಶ, ಮಳೆಯಿಂದ 4ನೇ ದಿನದಾಟ ಬೇಗನೇ ಕೊನೆಗೊಂಡಾಗ 6 ವಿಕೆಟಿಗೆ 136 ರನ್ ಗಳಿಸಿ ತೀವ್ರ ಸಂಕಟದಲ್ಲಿತ್ತು. ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಉಳಿದ 4 ವಿಕೆಟ್ಗಳಿಂದ 262 ರನ್ ಗಳಿಸಬೇಕಿದೆ ಅಥವಾ ಕೆಲವು ವಿಕೆಟ್ ಉಳಿಸಿಕೊಂಡು ಪಂದ್ಯವನ್ನು ಡ್ರಾಗೊಳಿಸಬೇಕಿದೆ. ಈಗಿನ ಸ್ಥಿತಿಯಲ್ಲಿ ಬಾಂಗ್ಲಾ ಪಾಲಿಗೆ ಇದೆರಡೂ ಕಠಿನ ಸವಾಲೇ ಆಗಿದೆ. ನಾಯಕ ಶಕಿಬ್ ಅಲ್ ಹಸನ್ (39) ಮತ್ತು ಸೌಮ್ಯ ಸರ್ಕಾರ್ (0) ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಇವರ ಹೋರಾಟ ಎಲ್ಲಿಯ ತನಕ ಜಾರಿಯಲ್ಲಿರುತ್ತದೆ ಎಂಬುದರ ಮೇಲೆ ಬಾಂಗ್ಲಾ ತಂಡದ ಭವಿಷ್ಯ ಅಡಗಿದೆ.
137 ರನ್ನುಗಳ ಉತ್ತಮ ಮುನ್ನಡೆ ಗಳಿಸಿದ ಅಫ್ಘಾನಿಸ್ಥಾನ, ದ್ವಿತೀಯ ಸರದಿಯಲ್ಲಿ 260 ರನ್ ಗಳಿಸಿತು. ಬಾಂಗ್ಲಾ 398 ರನ್ ಗುರಿ ಪಡೆಯಿತು. ಘಾತಕ ಬೌಲಿಂಗ್ ಪ್ರದರ್ಶಿಸಿದ ರಶೀದ್ ಖಾನ್ (46ಕ್ಕೆ 3) ಮತ್ತು ಜಹೀರ್ ಖಾನ್ (36ಕ್ಕೆ 2) ಆತಿಥೇಯರಿಗೆ ಸಿಂಹಸ್ವಪ್ನರಾಗಿ ಕಾಡಿದ್ದಾರೆ.ಆರಂಭಕಾರ ಶದ್ಮಾನ್ ಇಸ್ಲಾಮ್ 41 ರನ್ ಹೊರತುಪಡಿಸಿ ಉಳಿದ ವಿಕೆಟ್ಗಳು ಅಗ್ಗಕ್ಕೆ ಉರುಳಿವೆ.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ಥಾನ-342 ಮತ್ತು 260. ಬಾಂಗ್ಲಾದೇಶ-205 ಮತ್ತು 6 ವಿಕೆಟಿಗೆ 136 (ಶದ್ಮಾನ್ 41, ರಹೀಂ 23, ಶಕಿಬ್ ಬ್ಯಾಟಿಂಗ್ 39, ರಶೀದ್ 46ಕ್ಕೆ 3, ಜಹೀರ್ 36ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ