ಕೋವಿಡ್-19 ಕಳವಳದ ನಡುವೆಯೂ ಐಪಿಎಲ್ ನಡೆಸಲು ಬಿಸಿಸಿಐ ಹುಡುಕಿದೆ ಎರಡು ದಾರಿ


Team Udayavani, Apr 1, 2020, 4:10 PM IST

ಕೋವಿಡ್-19 ಕಳವಳದ ನಡುವೆಯೂ ಐಪಿಎಲ್ ನಡೆಸಲು ಬಿಸಿಸಿಐ ಹುಡುಕಿದೆ ಎರಡು ದಾರಿ

ಮುಂಬೈ: ಐಪಿಎಲ್‌ ಬಗ್ಗೆ ದಿನಕ್ಕೊಂದು ಕಥೆಗಳು ಹಬ್ಬುತ್ತಲೇ ಇವೆ. ರದ್ದಾಗುತ್ತದೆ, ನಡೆಯುತ್ತದೆ, ಮುಂದೂಡಲ್ಪಡುತ್ತದೆ ಹೀಗೆ. ಇದೀಗ ಬಂದಿರುವ ಹೊಸಸುದ್ದಿ, ಐಪಿಎಲ್‌ ನಡೆಸಲು ಬಿಸಿಸಿಐ ಎರಡು ದಾರಿಗಳನ್ನು ಹುಡುಕುತ್ತಿದೆ.

ಆಗಸ್ಟ್‌- ಸೆಪ್ಟೆಂಬರ್‌ ನಲ್ಲಿ ಏಷ್ಯಾಕಪ್‌ ಟಿ20ಯನ್ನು ಮುಂದೂಡಿ ಐಪಿಎಲ್‌ ನಡೆಸುವುದು ಒಂದು ದಾರಿ, ಅಕ್ಟೋಬರ್‌-ನವೆಂಬರ್‌ನಲ್ಲಿ ವಿಶ್ವಕಪ್‌ ಟಿ20ಯನ್ನು ಮುಂದೂಡಿ ದರೆ ಐಪಿಎಲ್‌ ನಡೆಸುವುದು ಇನ್ನೊಂದು ದಾರಿ. ಈ ಎರಡೂ ದಾರಿಗಳಲ್ಲಿ ಹಲವು ಅಡೆತಡೆ ಗಳಿವೆ. ಅವನ್ನೆಲ್ಲ ದಾಟಿ ಐಪಿಎಲ್‌ ನಡೆಸಲು ಸಾಧ್ಯವೇ ಎನ್ನುವುದು ಯಕ್ಷಪ್ರಶ್ನೆ.

ಮೊದಲನೆಯದಾಗಿ ಕೋವಿಡ್-19 ಸೋಂಕು ಹಾವಳಿ ಎಲ್ಲಿಯವರೆಗೆ ಮುಂದುವರಿಯುತ್ತದೆ ಗೊತ್ತಿಲ್ಲ. ಆದ್ದರಿಂದ ಸರ್ಕಾರದ ವಿವಿಧ ನಿರ್ಬಂಧಗಳು (ಅಂತಾರಾಷ್ಟ್ರೀಯ ಗಡಿ ಬಂದ್‌, ವಿಮಾನಯಾನ ನಿಷೇಧ ಸೇರಿ) ಎಲ್ಲಿಯರೆಗೆ ಇರುತ್ತವೆ ಎನ್ನುವುದೂ ಖಾತ್ರಿಯಿಲ್ಲ. ಹಾಗಿರುವಾಗ ಆ ಸಮಯದಲ್ಲಿ ಬಿಸಿಸಿಐ ದಿನಾಂಕ ನಿಗದಿಪಡಿಸಿದರೂ, ವಿದೇಶಿ ಆಟಗಾರರು ಭಾರತಕ್ಕೆ ಬರುವ ಸ್ಥಿತಿಯಲ್ಲಿರುತ್ತಾರೆ ಎನ್ನುವುದಕ್ಕೆ ಖಾತ್ರಿಯೇನು? ವಿದೇಶಿ ಆಟಗಾರರು ಬರದಿದ್ದರೆ, ಐಪಿಎಲ್‌ ಕಳೆಗಟ್ಟುವುದಿಲ್ಲ ಎನ್ನುವುದು ಖಚಿತ.

ಇನ್ನು ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್‌ ಟಿ20 ಇದೆ. ಆತಿಥ್ಯದ ಅವಕಾಶವಿರುವುದು ಪಾಕಿಸ್ತಾನದ ಬಳಿಯಲ್ಲಿ. ಭಾರತದ ಬಗ್ಗೆ ಹಲವು ಸಿಟ್ಟು ಹೊಂದಿರುವ ಅದು, ಕೂಟ ಮುಂದೂಡಲು ಬಿಡುವುದು ಸುತಾರಾಂ ಸಾಧ್ಯವಿಲ್ಲ. ಇನ್ನು ವಿಶ್ವಕಪ್‌ ಟಿ20. ಅದೂ ಮುಂದೂಡಲ್ಪಡುವ ನಿರೀಕ್ಷೆಯಿದೆ. ಆದರೆ ಐಸಿಸಿ ಇಷ್ಟು ಬೇಗಲೇ ನಿರ್ಧಾರ ತೆಗೆದುಕೊಳ್ಳಲು ಸಿದ್ಧವಿಲ್ಲ. ಜೊತೆಗೆ ಕೂಟ ಮುಂದೂಡುವ ಮನಸ್ಸೂ ಅದಕ್ಕಿಲ್ಲ.  ಮುಂದೂಡಿದರೆ ಆಗ ಭಾರತ ಐಪಿಎಲ್‌ ನಡೆಸಬಹುದು. ಇದರಲ್ಲಿ ಹಲವು ಲೆಕ್ಕಾಚಾರಗಳಿವೆ.

ಟಿ20 ವಿಶ್ವಕಪ್‌ ಅನ್ನು ಒಂದು ವೇಳೆ ಮುಂದೂಡಿದರೂ, ಮುಂದಿನವರ್ಷವಂತೂ ನಡೆಸಲು ಸಾಧ್ಯವಿಲ್ಲ. ಆಗಲೂ ಟಿ20 ವಿಶ್ವಕಪ್‌ ಇರುತ್ತದೆ.ಇನ್ನು 2022ರಲ್ಲಿ ನಡೆಸಬಹುದಾದರೂ ಆಗ ಏಷ್ಯಾಡ್‌, ಕಾಮನ್‌ವೆ ಲ್ತ್‌ ಗೇಮ್ಸ್‌ಗಳಿರುತ್ತವೆ. ಈ ಎಲ್ಲ ಲೆಕ್ಕಾಚಾರಗಳನ್ನು ನೋಡಿದಾಗ ಕಾಣುವ ಒಂದು ದಟ್ಟ ಸಾಧ್ಯತೆ, ಐಪಿಎಲ್‌ ಅನ್ನೇ ರದ್ದು ಮಾಡುವುದು.

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

1-saddas

Badminton; ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.