ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿ ಬೆಂಗಾಲ್
Team Udayavani, Sep 2, 2017, 11:09 AM IST
ಕೋಲ್ಕತಾ: ಪ್ರೊ ಕಬಡ್ಡಿ ಲೀಗ್ನ ಕಳೆದ ನಾಲ್ಕು ಋತುಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಬೆಂಗಾಲ್ ವಾರಿಯರ್ ಈ ಬಾರಿ ಪ್ರಶಸ್ತಿ ಗೆಲುವಿನ ಉತ್ಸಾಹದಲ್ಲಿದೆ. ಇದಕ್ಕಾಗಿ ಮಾಜಿ ಆಟಗಾರ ತಥಾ ಕೋಚ್ ಜಗದೀಶ್ ಕುಂಬ್ಳೆ ಅವರನ್ನು ತರಬೇತು ದಾರರನ್ನಾಗಿ ನೇಮಕ ಮಾಡಿದೆ.
ಜಗದೀಶ್ ಕುಂಬ್ಳೆ ಅವರ ಮಾರ್ಗದರ್ಶನ ದಲ್ಲಿ ಬೆಂಗಾಲ್ ಉತ್ತಮ ನಿರ್ವಹಣೆ ನೀಡುತ್ತಿದೆ. “ಬಿ’ ವಲಯದಲ್ಲಿರುವ ಬೆಂಗಾಲ್ ಆಗಸ್ಟ್ ಮಾಸಾಂತ್ಯಕ್ಕೆ ಅಗ್ರ ಮೂರರೊಳಗಿನ ಸ್ಥಾನವನ್ನು ಉಳಿಸಿಕೊಂಡಿದೆ. “ಎ’ ಮತ್ತು “ಬಿ’ ವಲಯದ ಅಗ್ರ ಮೂರು ತಂಡಗಳು ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗಲಿವೆ. ಸೂಪರ್ ಪ್ಲೇ ಆಫ್ನಲ್ಲಿ ಆಡಿದ ಎಲ್ಲ ಪಂದ್ಯ ಗೆದ್ದರೆ ಫೈನಲಿ ಗೇರುವ ಸಾಧ್ಯತೆಯಿದೆ. ಹಾಗಾಗಿ ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗಿ ಪ್ರಶಸ್ತಿ ಗೆಲ್ಲುವ ಗುರಿಯನ್ನು ಬೆಂಗಾಲ್ ಇಟ್ಟುಕೊಂಡಿದೆ.
ಬೆಂಗಾಲ್ ಅಗ್ರ ಸ್ಥಾನದಲ್ಲಿ
ಕೋಲ್ಕತಾ ಚರಣ ಆರಂಭಗೊಂಡಿದ್ದು ಆಡಿದ 9 ಪಂದ್ಯಗಳಲ್ಲಿ ಐದರಲ್ಲಿ ಗೆದ್ದು 32 ಅಂಕ ಹೊಂದಿರುವ ಬೆಂಗಾಲ್ “ಬಿ’ ವಲಯದಲ್ಲಿ ಅಗ್ರಸ್ಥಾನಕ್ಕೇರಿದೆ. ಬೆಂಗಾಲ್ಗಿದು ತವರಿನ ತಾಣವಾಗಿದೆ. ಇಲ್ಲಿ ಬೆಂಗಾಲ್ ಆರು ಪಂದ್ಯ ಗಳನ್ನು ಆಡಲಿದ್ದು ಗರಿಷ್ಠ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. “ಬಿ ವಲಯದಲ್ಲಿ ಯುಪಿ ಯೋಧಾ (30 ಅಂಕ) ದ್ವಿತೀಯ ಮತ್ತು ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ (28 ಅಂಕ) ಮೂರನೇ ಸ್ಥಾನದಲ್ಲಿದೆ. ಬೆಂಗಾಲ್ ಶನಿವಾರದ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು ಎದುರಿಸಲಿದೆ.
ಪ್ರೊ ಕಬಡ್ಡಿಯ ಕೋಚ್ ಆಗಿ ಜಗದೀಶ್ ಕುಂಬ್ಳೆ ಅವರಿಗಿದು ಹೊಸ ಅನುಭವ. ಸರ್ವೀಸಸ್ ವೇಳೆ ಆಡಿದ ಅನುಭವ ಮತ್ತು ಕೋಚ್ ಆಗಿ ನಾನು ಕಲಿತ ವಿದ್ಯೆಯನ್ನು ತಂಡದ ಯುವ ಆಟಗಾರರಿಗೆ ಸಮರ್ಪಿಸುವೆ ಎಂದು ಕುಂಬ್ಳೆ ತಿಳಿಸಿದರು. ಅವರು ಸರ್ವೀಸಸ್ ಪರ ಎರಡು ದಶಕಗಳ ಕಾಲ ಆಡಿದ ಅನುಭವ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
MUST WATCH
ಹೊಸ ಸೇರ್ಪಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!