ಕ್ಷಮಿಸಿ, ನನ್ನ ಸರ್ವನಾಶವಾಗಿದೆ: ಆಸ್ಟ್ರೇಲಿಯಕ್ಕೆ ಮರಳಿದ ಸ್ಮಿತ್
Team Udayavani, Mar 29, 2018, 3:35 PM IST
ಸಿಡ್ನಿ : ದಕ್ಷಿಣ ಆಫ್ರಿಕದಿಂದ ಇಂದು ಗುರುವಾರ ಆಸ್ಟ್ರೇಲಿಯಕ್ಕೆ ಮರಳಿರುವ ಕಳಂಕಿತ ಆಸೀಸ್ ಕ್ರಿಕೆಟ್ ನಾಯಕ ಸ್ಟೀವನ್ ಸ್ಮಿತ್ ಅವರು ಚೆಂಡು ವಿರೂಪ ಪ್ರಕರಣದಲ್ಲಿನ ತನ್ನ ಬೇಜವಾಬ್ದಾರಿಯಿಂದ ತೀವ್ರ ದುಃಖೀತರಾಗಿ ಕಣ್ಣೀರುಗರೆದು “ಕ್ಷಮಿಸಿ, ನನ್ನಿಂದ ತಪ್ಪಾಗಿದೆ; ನನ್ನ ಸರ್ವನಾಶವಾಗಿದೆ’ ಎಂದು ಗದ್ಗದಿತರಾಗಿ ಹೇಳಿ ಕುಸಿದರು.
“ನನ್ನ ಬೇಜವಾಬ್ದಾರಿಗೆ ನಾನು ಸಂಪೂರ್ಣ ಹೊಣೆ ವಹಿಸುತ್ತೇನೆ. ವಸ್ತುಸ್ಥಿತಿ ಮತ್ತು ಅದರ ಪರಿಣಾಮವನ್ನು ಅಳೆಯವಲ್ಲಿ ನನ್ನಿಂದ ಗಂಭೀರ ಪ್ರಮಾದವಾಗಿದೆ. ಇದರ ಪರಿಣಾಮಗಳನ್ನು ನಾನು ಅರಿತಿದ್ದೇನೆ. ಇದು ನನ್ನ ನಾಯಕತ್ವದ ಸಂಪೂರ್ಣ ವೈಫಲ್ಯವಾಗಿದೆ’ ಎಂದು ಸ್ಮಿತ್ ಕಣ್ಣೀರು ಹಾಕುತ್ತಾ ಹೇಳಿದರು.
#WATCH Steve Smith says, ‘there was a failure of leadership, of my leadership’, breaks down as he addresses the media in Sydney. #BallTamperingRow pic.twitter.com/hXKB4e7DR2
— ANI (@ANI) March 29, 2018
“ಕ್ಷಮಿಸಿ, ನಾನು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದೇನೆ. ನನ್ನ ತಪ್ಪನ್ನು ಸರಿಪಡಿಸಲು ಮತ್ತು ನನ್ನ ತಪ್ಪಿನಿಂದಾಗಿರುವ ಹಾನಿಯನ್ನು ಸರಿಪಡಿಸಲು ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ. ಅದರಿಂದ ಏನಾದರೂ ಒಳ್ಳೆಯದಾಗುವುದಿದ್ದರೆ ಅದು ಇತರರಿಗೂ ಒಂದು ಪಾಠವಾಗುತ್ತದೆ. ಅಂತೆಯೇ ನಾನು ಬದಲಾವಣೆಯ ಒಂದು ಶಕ್ತಿಯಾಗಲು ಬಯಸುತ್ತೇನೆ. ನಾನು ಶೇಷಾಯುಷ್ಯದಲ್ಲಿ ನಾನು ನನ್ನ ತಪ್ಪಿಗಾಗಿ ವಿಷಾದ ಪಡುವಂತಾಗಿದೆ. ನಾನು ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ’ ಎಂದು ಸ್ಮಿತ್ ಹೇಳಿದರು.
ತಂಡದ ಸಹ ಆಟಗಾರರಾಗಿರುವ ಡೇವಿಡ್ ವಾರ್ನರ್ ಜತೆಗೆ ಚೆಂಡು ವಿರೂಪ ಗೊಳಿಸಿರುವ ಕ್ಯಾಮೆರಾನ್ ಬ್ಯಾನ್ ಕ್ರಾಫ್ಟ್ ಗೆ ಸಮ್ಮತಿಸುವ ಮೂಲಕ ಸ್ಮಿತ್ ಅಪರಾಧ ಎಸಗಿರುವುದಕ್ಕಾಗಿ ಅವರಿಗೆ 12 ತಿಂಗಳ ನಿಷೇಧ ಹೇರಲಾಗಿದೆ. ಐಪಿಎಲ್ ಬಾಗಿಲು ಕೂಡ ಸ್ಮಿತ್ಗೆ ಈಗ ಮುಚ್ಚಲ್ಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು
Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?
IPL ಇಂದು ಲೀಗ್ ಪಂದ್ಯಗಳಿಗೆ ತೆರೆ: KKR vs RR ಟೇಬಲ್ ಟಾಪರ್ಗಳ ಸೆಣಸಾಟ
T20 ವಿಶ್ವಕಪ್: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್ಗೆ
IPL ವಿಚಿತ್ರ; ಎಲ್ಲ ಪಂದ್ಯ ಮುಗಿದ ಬಳಿಕ ನಾಯಕ ಪಾಂಡ್ಯಗೆ ಒಂದು ಪಂದ್ಯ ನಿಷೇಧ!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್ ಚಿಕಿತ್ಸೆ
RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು
Mother: ತಾಯಿಯ ವೃತ್ತಿಗಳು; ಆಕ್ಯುಪೇಷನಲ್ ಥೆರಪಿಯ ಒಳನೋಟಗಳು
Sirsi: ಬಾರದ ಹೈನು ಪ್ರೋತ್ಸಾಹ; ಶೀಘ್ರ ಬಿಡುಗಡೆಗೆ ಒತ್ತಾಯ
Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ