ಕೂಲ್‌ ಕ್ಯಾಪ್ಟನ್‌, ಬೆಸ್ಟ್‌ ಫಿನಿಶರ್‌ ಎಂ ಎಸ್ ಧೋನಿ


Team Udayavani, Aug 15, 2020, 10:22 PM IST

ಕೂಲ್‌ ಕ್ಯಾಪ್ಟನ್‌, ಬೆಸ್ಟ್‌ ಫಿನಿಶರ್‌ ಎಂ ಎಸ್ ಧೋನಿ

ಬಹುಶಃ ಕ್ರಿಕೆಟ್‌ ಇತಿಹಾಸದಲ್ಲಿ ಧೋನಿಯಷ್ಟು ತಾಳ್ಮೆ ಹಾಗೂ ತಣ್ಣಗಿನ ಸ್ವಭಾವದ ನಾಯಕರು ಮತ್ತೂಬ್ಬರು ಇರಲಿಕ್ಕಿಲ್ಲ. ಅಂಗಳದಲ್ಲಿ ಅವರು ಸಿಡುಕಿನಿಂದ ವರ್ತಿಸದೆ ಎಲ್ಲವನ್ನೂ ಬಹಳ ನಾಜೂಕಿನಿಂದ ನಿಭಾಯಿಸುತ್ತ ಯಶಸ್ಸು ಕಂಡವರು. ಪರಿಸ್ಥಿತಿ ಎಷ್ಟೇ ಜಟಿಲವಾಗಿರಲಿ, ಅವರಲ್ಲಿ ಒತ್ತಡದ ಲವಲೇಶವೂ ಕಾಣುತ್ತಿರಲಿಲ್ಲ. ಹೀಗಾಗಿ ಧೋನಿ “ಕೂಲ್‌ ಕ್ಯಾಪ್ಟನ್‌’ ಎಂದೇ ಹೆಸರುವಾಸಿಯಾಗಿದ್ದಾರೆ.

ಅವರ ನಾಯಕತ್ವದ ಯಶಸ್ಸಿನಲ್ಲಿ ಇನ್ನೂ ಸಾಕಷ್ಟು ಮಾದರಿ ಅಂಶಗಳಿವೆ. ಇದರಲ್ಲಿ ಮುಖ್ಯವಾದುದು ವಿನೀತ ಹಾಗೂ ವಿನಮ್ರತೆ. ಇದು ಅವರ ಸೋಲು-ಗೆಲುವಿನ ಫಲಿತಾಂಶಗಳೆರಡಕ್ಕೂ ಅನ್ವಯಿಸುತ್ತದೆ. ವಿಕೆಟ್‌ ಬಿದ್ದಾಗ ಅಂಗಳದಲ್ಲಿ ವಿಪರೀತ ಹಾರಾಡುವುದಾಗಲಿ, ಬೌಂಡರಿ, ಸಿಕ್ಸರ್‌, ಸೆಂಚುರಿಸಿ ಸಿಡಿಸಿದಾಗ ಭಾರೀ ಸಂಭ್ರಮ ವ್ಯಕ್ತಪಡಿಸುವುದಾಗಲಿ ಇಲ್ಲವೇ ಇಲ್ಲ. ಅಂಪಾಯರ್‌ ತೀರ್ಪಿಗೆ ಸಿಡುಕು ಮೋರೆ ತೋರಿದ ನಿದರ್ಶನವೂ ಕಂಡುಬರದು.

ಸ್ವತಃ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುವುದು ಅವರ ಹೆಚ್ಚುಗಾರಿಕೆ. ತಂಡದ ಯಶಸ್ಸಿಗೆ ನಾಯಕನ ಅಗತ್ಯ ಬಹಳಷ್ಟಿದೆ ಎಂದಾಗ ಅವರು ಕೈಕೊಟ್ಟ ನಿದರ್ಶನಗಳು ಬಹಳ ಕಡಿಮೆ. ಕಪ್ತಾನನಾಗಿ ನಿಂತು ಆಡಿ ಗೆಲುವನ್ನು ತಂದಿತ್ತ ಉದಾಹರಣೆಗಳು ಅದೆಷ್ಟೋ. ಇದಕ್ಕೆ 2011ರ ವಿಶ್ವಕಪ್‌ ಫೈನಲ್‌ಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಹೀಗಾಗಿಯೇ ಅವರು “ಬೆಸ್ಟ್‌ ಫಿನಿಶರ್‌’ ಎನಿಸಿಕೊಂಡರು.

ಆಟಗಾರರ ಮೇಲೆ ನಂಬಿಕೆ
ನಾಯಕನಾದವನು ತನ್ನ ಆಟಗಾರರ ಮೇಲೆ ನಂಬಿಕೆ, ವಿಶ್ವಾಸ ಇರಿಸುವುದು ಬಹಳ ಮುಖ್ಯ. ಈ ವಿಷಯದಲ್ಲೂ ಧೋನಿ ಹಿಂದುಳಿದವರಲ್ಲ. ತಾನು ಆರಿಸಿದ 11 ಸದಸ್ಯರ ಮೇಲೆ ಅವರು ತಮಗಿಂತ ಹೆಚ್ಚಿನ ನಂಬಿಕೆ ಹೊಂದಿರುತ್ತಿದ್ದರು. ಉದಾಹರಣೆಗೆ 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌. ಅಲ್ಲಿಯ ತನಕ ಇಶಾಂತ್‌ ಶರ್ಮ ಎಸೆತಗಳಿಗೆ ಎದುರಾಳಿಗಳು ಬೆಂಡೆತ್ತಿದ್ದರು. ಆದರೂ ನಿರ್ಣಾಯಕ ಘಟ್ಟದಲ್ಲಿ ಅವರು ಮತ್ತೆ ಇಶಾಂತ್‌ ಕೈಗೇ ಚೆಂಡು ನೀಡುತ್ತಾರೆ. ಅವರು 2 ವಿಕೆಟ್‌ ಉಡಾಯಿಸಿ ಪಂದ್ಯಕ್ಕೆ ತಿರುವು ಕೊಡುತ್ತಾರೆ. ಧೋನಿ ಇರಿಸಿದ ನಂಬಿಕೆ ನಿಜವಾಗುತ್ತದೆ!

ಯಶಸ್ಸಿನ ಶ್ರೇಯಸ್ಸನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದುದು ಧೋನಿ ನಾಯಕತ್ವದ ಬಹಳ ದೊಡ್ಡ ಗುಣ. ಯಾವುದೇ ಸಂದರ್ಶನ, ಪಂದ್ಯಕ್ಕೂ ಮೊದಲು ಹಾಗೂ ಅನಂತರದ ಪತ್ರಿಕಾಗೋಷ್ಠಿಗಳಲ್ಲಿ ಧೋನಿ ತಂಡದ ಸದಸ್ಯರು ಹಾಗೂ ಅವರ ಕೊಡುಗೆಯನ್ನು ಉಲ್ಲೇಖೀಸಲು ಮರೆಯುತ್ತಿರಲಿಲ್ಲ, ಇದು ಕೇವಲ ಬಾಯುಪಚಾರದ ಮಾತುಗಳಾಗಿರುತ್ತಿರಲಿಲ್ಲ.

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.