ಡೆಲ್ಲಿ ವಿರುದ್ಧ ಸೇಡಿಗೆ ಕಾದಿದೆ ಪಂಜಾಬ್ ಕಿಂಗ್ಸ್
Team Udayavani, May 2, 2021, 6:20 AM IST
ಅಹ್ಮದಾಬಾದ್: ಶುಕ್ರವಾರದ ಸೆಣಸಾಟದಲ್ಲಿ ಬಲಿಷ್ಠ ಆರ್ಸಿಬಿಯನ್ನು ಉರುಳಿಸಿ “ರಾಜ’ನೆನಿಸಿಕೊಂಡ ಪಂಜಾಬ್ ಕಿಂಗ್ಸ್ ಈಗ ಡೆಲ್ಲಿಯನ್ನು ಕೆಡವಲು ಸ್ಕೆಚ್ ಹಾಕುತ್ತಿದೆ. ರವಿವಾರದ ದ್ವಿತೀಯ ಪಂದ್ಯದಲ್ಲಿ ಕೆ.ಎಲ್. ರಾಹುಲ್-ರಿಷಭ್ ಪಂತ್ ಪಡೆಗಳು ಮುಖಾಮುಖೀಯಾಗುತ್ತಿವೆ. ಇದರೊಂದಿಗೆ 14ನೇ ಐಪಿಎಲ್ ಕೂಟದ ದ್ವಿತೀಯ ಸುತ್ತಿನ ಹೋರಾಟವೂ ಮೊದಲ್ಗೊಳ್ಳಲಿದೆ.
ಪಂಜಾಬ್ ಪಾಲಿಗೆ ಇದು ಸೇಡಿನ ಪಂದ್ಯವೂ ಹೌದು. ಚೆನ್ನೈಯಲ್ಲಿ ನಡೆದ ಮೊದಲ ಸುತ್ತಿನ ಬ್ಯಾಟಿಂಗ್ ಮೇಲಾಟದಲ್ಲಿ ಡೆಲ್ಲಿ 6 ವಿಕೆಟ್ಗಳಿಂದ ರಾಹುಲ್ ಪಡೆಯನ್ನು ಮಗುಚಿತ್ತು. ಪಂಜಾಬ್ 4ಕ್ಕೆ 195 ರನ್ ಪೇರಿಸಿದರೆ, ಡೆಲ್ಲಿ 18.2 ಓವರ್ಗಳಲ್ಲಿ ನಾಲ್ಕೇ ವಿಕೆಟ್ ನಷ್ಟದಲ್ಲಿ 198 ರನ್ ಬಾರಿಸಿ ಗೆದ್ದು ಬಂದಿತ್ತು.
ಶಿಖರ್ ಧವನ್ 92 ರನ್ ಬಾರಿಸಿ ಡೆಲ್ಲಿಯ ಯಶಸ್ವಿ ಚೇಸಿಂಗ್ನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಂಜಾಬ್ ಆರಂಭಿಕರಾದ ರಾಹುಲ್ (61)-ಅಗರ್ವಾಲ್ (69) 122 ರನ್ ಜತೆಯಾಟದಲ್ಲಿ ಭಾಗಿಯಾಗಿದ್ದರು. ಆದರೆ ಅಹ್ಮದಾಬಾದ್ ಟ್ರ್ಯಾಕ್ನಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಂಗ್ರಹವಾಗುವುದು ಅನುಮಾನ. 170 ರನ್ ಇಲ್ಲಿನ ಎವರೇಜ್ ಸ್ಕೋರ್ ಆಗಿದೆ. ಚೇಸಿಂಗ್ ತುಸು ಕಷ್ಟ.
ಡೆಲ್ಲಿ ಹೆಚ್ಚು ಬಲಿಷ್ಠ
ಮೇಲ್ನೋಟಕ್ಕೆ ಡೆಲ್ಲಿಯೇ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಧವನ್-ಶಾ ಅಬ್ಬರಿಸತೊಡಗಿದರೆ ಡೆಲ್ಲಿಯ ಅರ್ಧ ಕೆಲಸ ಮುಗಿದಂತೆ. ಇವರಿಬ್ಬರು ಈಗಾಗಲೇ 580 ರನ್ ಪೇರಿಸಿದ್ದಾರೆ. ಈ ಜೋಡಿಯನ್ನು ಬೇಗನೇ ಬೇರ್ಪಡಿಸಿದರಷ್ಟೇ ಪಂಜಾಬ್ಗ ಲಾಭ. ಆಗ ಸ್ಮಿತ್, ಪಂತ್, ಸ್ಟೋಯಿನಿಸ್ ಮೇಲೂ ಒತ್ತಡ ಹೇರಬಹುದಾಗಿದೆ.
ಅಶ್ವಿನ್ ಹೊರಬಿದ್ದರೂ ಡೆಲ್ಲಿ ಸ್ಪಿನ್ ವಿಭಾಗವೇನೂ ದುರ್ಬಲಗೊಂಡಿಲ್ಲ. ಅಕ್ಷರ್ ಪಟೇಲ್, ಆಫ್ಸ್ಪಿನ್ನರ್ ಲಲಿತ್ ಯಾದವ್ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ತಂಡಕ್ಕೆ ಮರಳುವ ಎಲ್ಲ ಸಾಧ್ಯತೆ ಇದೆ. ಆಗ ಯಾದವ್ ಅವರೇ ಜಾಗ ಬಿಡಬೇಕಾದ ಸಾಧ್ಯತೆ ಹೆಚ್ಚು.
ರಾಹುಲ್-ಗೇಲ್ ನಿರ್ಣಾಯಕ
ಪಂಜಾಬ್ ಆರ್ಸಿಬಿಯನ್ನು ಕೆಡವಿತೇನೋ ನಿಜ, ಆದರೆ ಬ್ಯಾಟಿಂಗ್ ವಿಭಾಗವೇನೂ ಸಶಕ್ತವಲ್ಲ. ಸಿಡಿದದ್ದು ರಾಹುಲ್ ಮತ್ತು ಗೇಲ್ ಮಾತ್ರ. ಡೆಲ್ಲಿ ಬೌಲರ್ ಇವರಿಬ್ಬರನ್ನು ಟಾರ್ಗೆಟ್ ಮಾಡುವುದರಲ್ಲಿ ಅನುಮಾನವಿಲ್ಲ. ಪೂರಣ್, ಹೂಡಾ, ಶಾರೂಖ್ ಖಾನ್ ಮೇಲೆ ನಂಬಿಕೆ ಇಡುವುದು ಕಷ್ಟ. ಕೀಪರ್ ಕಂ ಓಪನರ್ ಆಗಿರುವ ಪ್ರಭ್ಸಿಮ್ರಾನ್ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಅಗರ್ವಾಲ್ ಮರಳಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಡೆಲ್ಲಿಯಂತೆ ಪಂಜಾಬ್ ಸ್ಪಿನ್ ವಿಭಾಗ ಬಲಿಷ್ಠ. ರವಿ ಬಿಷ್ಣೋಯಿ, ಮೊದಲ ಐಪಿಎಲ್ ಪಂದ್ಯದಲ್ಲೇ ಮಿಂಚಿದ ಹರ್ಪ್ರೀತ್ ಬ್ರಾರ್ ಮತ್ತೆ ಮ್ಯಾಜಿಕ್ ಮಾಡಿದರೆ ಹೋರಾಟ ತೀವ್ರಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ