ಸಂಜು ಸ್ಯಾಮ್ಸನ್ ಗೆ ಅದ್ದೂರಿ ಸ್ವಾಗತ
Team Udayavani, Dec 9, 2019, 5:05 PM IST
ತಿರುವನಂತಪುರಂ: ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಕೇರಳದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್, ತಿರುವನಂತಪುರಂಗೆ ಭಾರತ ತಂಡದೊಂದಿಗೆ ಶನಿವಾರ ಬಂದಿಳಿದರು.
ಆ ವೇಳೆ ಅವರನ್ನು ಸ್ಥಳೀಯ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಇದನ್ನು ರಾಜಸ್ಥಾನ್ ರಾಯಲ್ಸ್ ಐಪಿಎಲ್ ತಂಡ ಟ್ವೀಟರ್ನಲ್ಲಿ ಪ್ರಕಟಿಸಿದೆ.
ಮೊದಲ ಪಂದ್ಯದಲ್ಲೂ ಆಡಲು ಅವಕಾಶ ಪಡೆಯದ ಸಂಜು, ಈ ಪಂದ್ಯದಲ್ಲಾದರೂ ಆಡಲು ಅವಕಾಶ ಪಡೆಯಲಿ ಎನ್ನುವುದು ಅಭಿಮಾನಿಗಳ ಬಯಕೆಯಾಗಿತ್ತು.
ಫೀಲ್ಡಿಂಗ್ ವೇಳೆ ಒಮ್ಮೆ ಮೈದಾನಕ್ಕೆ ಆಗಮಿಸಿದ ಸಂಜುಗೆ ಭಾರಿ ಕರಡಾತನದಿಂದ ತವರಿನ ಅಂಗಳ ಸಂಭ್ರಮಿಸಿತು.
ಶಿಖರ್ ಧವನ್ ಬದಲು ಸರಣಿಗೆ ಸಂಜು ಸ್ಯಾಮ್ಸನ್ ಆಯ್ಕೆಯಾದರೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಮುಂದಿನ ಪಂದ್ಯದಲ್ಲೂ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.