CWC 2023; ಡಚ್ಚರ ವಿರುದ್ಧ ಕಳ್ಳಾಟವಾಡಿತೇ ಪಾಕ್? ಬೌಂಡರಿ ಗೆರೆಯನ್ನು ಹಿಂದೆ ಸರಿಸಿದ್ಯಾರು?


Team Udayavani, Oct 7, 2023, 10:49 AM IST

CWC 2023; ಡಚ್ಚರ ವಿರುದ್ಧ ಕಳ್ಳಾಟವಾಡಿತೇ ಪಾಕ್? ಬೌಂಡರಿ ಗೆರೆಯನ್ನು ಹಿಂದೆ ಸರಿಸಿದ್ಯಾರು?

ಹೈದರಾಬಾದ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಕೂಟದ ಎರಡನೇ ಪಂದ್ಯವು ಶುಕ್ರವಾರ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ನಡುವೆ ಹೈದರಾಬಾದ್ ನಲ್ಲಿ ನಡೆಯಿತು. ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಬರ್ ಅಜಂ ಪಡೆಯು 81 ರನ್ ಅಂತರದ ಗೆಲುವು ಸಾಧಿಸಿದೆ. ಆದರೆ ಇದೇ ಪಂದ್ಯದಲ್ಲಿ ಬೌಂಡರಿ ಗೆರೆಯನ್ನು ನಿಗದಿತ ಸ್ಥಳಕ್ಕಿಂತ ದೂರು ತಳ್ಳಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ ನೆದರ್ಲ್ಯಾಂಡ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬೌಂಡರಿ ರೋಪ್ ಕುಶನ್ ಸುಮಾರು 30 ನಿಮಿಷಗಳ ಆಟದ ಕಾಲ ನಿಗದಿತ ಸ್ಥಳಕ್ಕಿಂತ ಹೊರಕ್ಕೆ ಬಂದಿತ್ತು. ಇದು ಎಂಸಿಸಿ ನಿಯಮಕ್ಕೆ ವಿರುದ್ದವಾಗಿದೆ.

ಒಂದು ವೇಳೆ ಅದೇ ಜಾಗದಲ್ಲಿ ಸಿಕ್ಸರ್ ಅಥವಾ ಬೌಂಡರಿ ಲೈನ್ ಸನಿಹದಲ್ಲಿ ಕ್ಯಾಚ್ ಔಟ್ ಆಗಿದ್ದರೆ ವಿದಾದಕ್ಕೆ ಕಾರಣವಾಗುತ್ತಿತ್ತು. ಅಲ್ಲದೆ ಒಂದು ಸಮಯದಲ್ಲಿ ಪಾಕ್ ಫೀಲ್ಡರ್ ನಿಗದಿತ ಬೌಂಡರಿ ಗೆರೆ ಮತ್ತು ಹೊರಹೋಗಿರುವ ಕುಶನ್ ನಡುವಿನ ಜಾಗದಲ್ಲಿ ನಿಂತಿದ್ದರು. ಒಂದು ವೇಳೆ ಫೀಲ್ಡರ್ ಅಲ್ಲಿಯೇ ಕ್ಯಾಚ್ ಹಿಡಿದಿದ್ದರೆ ಅಥವಾ ಬೌಂಡರಿ ತಡೆದಿದ್ದರೆ ಅದು ದೊಡ್ಡ ವಿವಾದವಾಗುತ್ತಿತ್ತು. ಬೌಂಡರಿ ರೋಪ್ ಹೊರಗೆ ಹೋಗಿದ್ದು 21ನೇ ಓವರ್ ನ ಐದನೇ ಎಸೆತದ ವೇಳೆ ಅಧಿಕಾರಿಗಳು ಗಮನಿಸಿದರು. ಬಳಿಕ ಅದನ್ನು ಸುಮಾರು ಒಂದು ಅಡಿಗೂ ಹೆಚ್ಚು ಒಳಕ್ಕೆ ಎಳೆಯಲಾಯಿತು.

ಇದನ್ನೂ ಓದಿ:Fraud: ಹಾರ್ಟ್‌ ಸರ್ಜನ್‌ ಸೋಗಿನಲ್ಲಿ ಮಹಿಳೆಗೆ 7 ಸಾವಿರ ರೂ. ವಂಚನೆ

ಆಧುನಿಕ ಕ್ರಿಕೆಟ್ ನಲ್ಲಿ ಬೌಂಡರಿ ರೋಪ್ ಗೆ ಕುಶನ್ ಅಳವಡಿಸಲಾಗುತ್ದೆ. ಅದರಲ್ಲಿ ಸಾಮಾನ್ಯವಾಗಿ ಜಾಹೀರಾತುಗಳು ಇರುತ್ತದೆ. ಸಾಮಾನ್ಯವಾಗಿ ಯಾವುದೇ ಫೀಲ್ಡರ್ ಚೆಂಡನ್ನು ಗೆರೆ ದಾಟದಂತೆ ತಡೆಯುವ ವೇಳೆ ಕುಶನ್ ಹೊರಕ್ಕೆ ಹೋದರೆ ಅದನ್ನು ಮತ್ತೆ ಸರಿಪಡಿಸುತ್ತಾರೆ. ಇದು ಹಲವು ಬಾರಿ ನಡೆದಿದೆ.

ಉದ್ದೇಶಪೂರ್ವಕ ಕೃತ್ಯ?

ಶುಕ್ರವಾರದ ಪಂದ್ಯದಲ್ಲಿ ಬೌಂಡರಿ ಕುಶನ್ ಜಾಗ ಬಿಟ್ಟು ಹೇಗೆ ಹೋಗಿದೆ ಎಂದು ಖಚಿತವಾಗಿಲ್ಲ. ಅಲ್ಲದೆ ಪಾಕ್ ಫೀಲ್ಡರ್ ಗಳು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರಗಳೂ ಇಲ್ಲ. ಫೀಲ್ಡಿಂಗ್ ಸಮಯದಲ್ಲಿ ಅರಿಯದೆ ಹೀಗೆ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಆ ಜಾಗದಲ್ಲಿ ಬಾಲ್ ಬಾಯ್ ಅಥವಾ ಬೇರೆ ಯಾರೂ ಇರದೆ ಇದ್ದ ಕಾರಣ ಇದು ಗಮನಕ್ಕೆ ಬಂದಿರಲಿಲ್ಲ.

ನಿಯಮ ಏನು ಹೇಳುತ್ತದೆ?

ಎಂಸಿಸಿ ನಿಯಮ 19.3.2ರ ಪ್ರಕಾರ, ಬೌಂಡರಿ ಗುರುತು ಹಾಕುವ ಯಾವುದೇ ವಸ್ತು ನಿಗದಿತ ಸ್ಥಳಕ್ಕಿಂತ ದೂರವಿದ್ದರೆ ಆದಷ್ಟು ಶೀಘ್ರ ಅದನ್ನು ಸರಿಯಾದ ಜಾಗಕ್ಕೆ ತಂದಿರಿಸಬೇಕು. ಒಂದು ವೇಳೆ ನೆದರ್ಲ್ಯಾಂಡ್ ಬ್ಯಾಟರ್ ಹೊಡೆದ ಚೆಂಡು ನಿಗದಿತ ಸ್ಥಳ ಮತ್ತು ಕುಶನ್ ಇದ್ದ ಸ್ಥಳದ ನಡುವೆ ಬಿದ್ದರೆ ಅದನ್ನು ಬೌಂಡರಿ ಎಂದು ಪರಿಗಣಿಸಲಾಗುತ್ತದೆ. ಎಂಸಿಸಿ ನಿಯಮ 19.3.1 ಪ್ರಕಾರ ಮೂಲ ಸ್ಥಾನದಿಂದಲೇ ಬೌಂಡರಿಯನ್ನು ಪರಿಗಣಿಸಲಾಗುತ್ತದೆ.

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.