ಪ್ರೊ ಕಬಡ್ಡಿಯಲ್ಲಿ ಹರ್ಯಾಣಿಗರದ್ದೇ ಆಟ!


Team Udayavani, Sep 12, 2017, 6:00 AM IST

Ban12091701Medn.jpg

ಸೋನೆಪತ್‌ (ಹರ್ಯಾಣ): ಒಂದೊಂದು ರಾಜ್ಯಗಳಿಗೆ ಒಂದೊಂದು ವಿಶೇಷ ಗುಣವಿರುತ್ತದೆ. ಭಾರತದ ಮಟ್ಟಿಗೆ ಹರ್ಯಾಣವೆಂದರೆ ಕ್ರೀಡಾಪಟುಗಳ ಕಣಜವೆಂದು ಹೇಳಬಹುದು. ಕಪಿಲ್‌ದೇವ್‌, ವಿಜೇಂದರ್‌ ಸಿಂಗ್‌, ವಿಕಾಸ್‌ ಕೃಷ್ಣನ್‌, ಸಾಕ್ಷಿ ಮಲಿಕ್‌ರಂತಹ ದಿಗ್ಗಜರನ್ನು ಹುಟ್ಟು ಹಾಕಿರುವ ಹರ್ಯಾಣ, ಪ್ರೊ ಕಬಡ್ಡಿ ಆಟಗಾರರ ಪೂರೈಕೆಯಲ್ಲಿ ಆಧಿಪತ್ಯ ಸ್ಥಾಪಿಸಿದೆ. ಪ್ರೊ ಕಬಡ್ಡಿಯಲ್ಲಿ ಆಡುತ್ತಿರುವ ಶೇ.70ರಷ್ಟು ಆಟಗಾರರು ಹರ್ಯಾಣದವರು, ಅದರಲ್ಲೂ ಸೋನೆಪತ್‌, ರೋಹrಕ್‌ ಆಸುಪಾಸುನವರು ಎಂದರೆ ನೀವು ನಂಬಲೇಬೇಕು.

ಪ್ರೊ ಕಬಡ್ಡಿಯಲ್ಲಿ ಹರ್ಯಾಣ ಮತ್ತು ಸೋನೆಪತ್‌ನ ಪ್ರಭಾವ ಅರ್ಥವಾಗಬೇಕೆಂದರೆ ಬೆಂಗಳೂರು ಬುಲ್ಸ್‌ ತಂಡದಲ್ಲಿನ ಆಟಗಾರರನ್ನು ಗಮನಿಸಬೇಕು. ಇಲ್ಲಿನ 12 ಆಟಗಾರರು ಹರ್ಯಾಣದವರು! ಇನ್ನುಳಿದಂತೆ ಇರುವ 11 ತಂಡಗಳಲ್ಲೂ ಹರ್ಯಾಣ ಆಟಗಾರರಿಗೆ ಗರಿಷ್ಠ ಸ್ಥಾನ ಮೀಸಲಾಗಿದೆ. ಭಾರತ ತಂಡದ ಹಾಲಿ ನಾಯಕ ಅನೂಪ್‌ ಕುಮಾರ್‌, ಮಾಜಿ ನಾಯಕ ರಾಕೇಶ್‌ ಕುಮಾರ್‌, ಉಪನಾಯಕ ಮಂಜೀತ್‌ ಚಿಲ್ಲರ್‌, ಬೆಂಗಳೂರು ಬುಲ್ಸ್‌ ನಾಯಕ ರೋಹಿತ್‌ ಕುಮಾರ್‌ ಇಂತಹ ಕಬಡ್ಡಿ ದಿಗ್ಗಜರೆಲ್ಲ ಹರ್ಯಾಣದವರೇ! ಇಷ್ಟು ಮಾತ್ರವಲ್ಲ ದೇಶದ ಕಬಡ್ಡಿ ರಾಜಧಾನಿ ಎಂದು ಕರೆಸಿಕೊಳ್ಳುವ ನಿಜಾಮ್‌ಪುರ ಇರುವುದೂ ಹರ್ಯಾಣದಲ್ಲೇ.

ಪ್ರಸ್ತುತ 5ನೇ ಆವೃತ್ತಿ ಪ್ರೊ ಕಬಡ್ಡಿಯ ಒಂದೆರಡು ತಂಡ ಹೊರತುಪಡಿಸಿ ಉಳೆದೆಲ್ಲ ತಂಡಗಳಲ್ಲಿ ಕನಿಷ್ಠವೆಂದರೂ 3 ಆಟಗಾರರು ಹರ್ಯಾಣ ಮೂಲದವರೇ ಆಗಿದ್ದಾರೆ. ಅಂದರೆ ಸದ್ಯ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ಶೇ.70ರಷ್ಟು ಮಂದಿ ಹರ್ಯಾಣದವರೇ ಆಗಿದ್ದಾರೆ. ಇನ್ನುಳಿದಂತೆ ಉಳಿದೆಲ್ಲ ರಾಜ್ಯಗಳ ಪಾಲು ಶೇ.30 ಮಾತ್ರ. ಕರ್ನಾಟಕದ ಬೆರಳೆಣಿಕೆಯಷ್ಟು ಆಟಗಾರರು ಮಾತ್ರ ಪ್ರೊದಲ್ಲಿ ಆಡುತ್ತಿದ್ದಾರೆನ್ನುವುದು ಗಮನಿಸಿದರೆ ಹರ್ಯಾಣದ ಮಹತ್ವ ಅರ್ಥವಾಗುತ್ತದೆ.

ಕುಸ್ತಿಯಿಂದಾಗಿ ಕಬಡ್ಡಿಗೆ ಬಲ
ಕಬಡ್ಡಿ ಒಂದು ರೀತಿ ಕುಸ್ತಿಯನ್ನು ಹೋಲುತ್ತದೆ. ಆದ್ದರಿಂದ ಕುಸ್ತಿ ಗೊತ್ತಿರುವವರಿಗೆ ಕಬಡ್ಡಿ ಸುಲಭ. ಗಮನಿಸಬೇಕಾದ ಸಂಗತಿಯೆಂದರೆ ಹರ್ಯಾಣ ಕುಸ್ತಿಗೂ ಖ್ಯಾತನಾಮ ರಾಜ್ಯ. ಹರ್ಯಾಣದ ಬಹುತೇಕ ಕಬಡ್ಡಿ ಆಟಗಾರರಿಗೆ ಕುಸ್ತಿ ಹಿನ್ನೆಲೆಯಿದೆಯಂತೆ. ಈ ಕುಸ್ತಿಪಟುಗಳಿಂದಾಗಿ ಕಬಡ್ಡಿಗೂ ಹೆಚ್ಚಿನ ಬಲ ಬಂದಿದೆ ಎಂದು ಮುಂಬೈ ಕೋಚ್‌ ರವಿ ಶೆಟ್ಟಿ ವಿಶ್ಲೇಷಿಸುತ್ತಾರೆ.

ಹರ್ಯಾಣದ ಜನ ಕ್ರೀಡೆಗಾಗಿ ತಮ್ಮ ಜೀವನವನ್ನೇ ಮೀಸಲಿಡುತ್ತಾರೆ. ನಿರುದ್ಯೋಗದ ಸಮಸ್ಯೆಯೂ ಇದರಲ್ಲಿದೆ. ಉದ್ಯೋಗವಿಲ್ಲದಿರುವುದರಿಂದ ಅಂತಹವರು ಕ್ರೀಡೆಯ ಕಡೆ ಗಮನ ಹರಿಸುತ್ತಾರೆ. ಬೆಳಗ್ಗೆ ಎದ್ದು ಒಂದು ಲೀಟರ್‌ ಹಾಲು ಕುಡಿದು, 10 ಮೊಟ್ಟೆ ತಿಂದು ಅಭ್ಯಾಸ ಆರಂಭಿಸುತ್ತಾರೆ. ಅಲ್ಲದೆ ಸೋನೆಪತ್‌ ಮುಂತಾದ ಕಬಡ್ಡಿ ಪ್ರಿಯ ಪ್ರದೇಶದ ಜನರಿಗೆ ಕುಡಿತ, ಜೂಜು, ಧೂಮಪಾನದಂತಹ ಚಟಗಳೇ ಇಲ್ಲ. ಕ್ರೀಡೆಯ ಮೇಲಿನ ಪ್ರೀತಿಯೇ ಇದಕ್ಕೆ ಕಾರಣವೆನ್ನುತ್ತಾರೆ ರವಿಶೆಟ್ಟಿ.

ಯಾವ ತಂಡದಲ್ಲಿ ಯಾರ್ಯಾರು?
ಬೆಂಗಾಲ್‌ ವಾರಿಯರ್:
ಸುರ್ಜಿತ್‌ ಸಿಂಗ್‌, ವೀರೇಂದ್ರ ಸಿಂಗ್‌, ದೀಪಕ್‌ ನರ್ವಾಲ್‌, ವಿನೋದ್‌, ವಿಕಾಸ್‌, ಕುಲದೀಪ್‌.
ಬೆಂಗಳೂರು ಬುಲ್ಸ್‌: ರೋಹಿತ್‌ ಕುಮಾರ್‌, ಸುಮಿತ್‌ ಸಿಂಗ್‌, ರವೀಂದರ್‌ ಪಾಹಲ್‌, ಅಜಯ್‌, ಸಚಿನ್‌ ಕುಮಾರ್‌, ಗುರ್ವಿಂದರ್‌, ಮಹೇಂದರ್‌ ಸಿಂಗ್‌, ಪ್ರದೀಪ್‌ ನರ್ವಾಲ್‌, ಕುಲದೀಪ್‌ ಸಿಂಗ್‌, ಅಂಕಿತ್‌ ಸಾಂಗ್ವಾನ್‌, ಅಮಿತ್‌, ಪ್ರೀತಮ್‌, ಸುನೀಲ್‌ ಜೈಪಾಲ್‌
ದಬಾಂಗ್‌ ಡೆಲ್ಲಿ: ರವಿ ದಲಾಲ್‌, ವಿಶಾಲ್‌, ಸುನೀಲ್‌, ವಿಪಿನ್‌ ಮಲಿಕ್‌, ಸತ್ಪಾಲ್‌ ಸಿಂಗ್‌
ಗುಜರಾತ್‌ ಜೈಂಟ್ಸ್‌: ರೋಹಿತ್‌ ಗುಲಿಯಾ, ಮಹಿಪಾಲ್‌ ನರ್ವಾಲ್‌, ಮನೋಜ್‌ ಕುಮಾರ್‌, ಪವನ್‌ ಕುಮಾರ್‌, ರಾಕೇಶ್‌ ನರ್ವಾಲ್‌
ಹರ್ಯಾಣ ಸ್ಟೀಲರ್ಸ್‌: ಸುರೇಂದ್ರ ನಾಡಾ, ಮೋಹಿತ್‌ ಚಿಲ್ಲರ್‌, ಸೋನು ನರ್ವಾಲ್‌, ಸುರ್ಜಿತ್‌ ಸಿಂಗ್‌, ದೀಪಕ್‌ ಕುಮಾರ್‌ ದಹಿಯಾ, ವಜೀರ್‌ ಸಿಂಗ್‌, ಪ್ರಮೋದ್‌ ನರ್ವಾಲ್‌, ವಿಕಾಸ್‌ ಕಾಂಡೋಲೆ, ಆಶೀಷ್‌ ಚೋಕರ್‌, ಕುಲದೀಪ್‌ ಸಿಂಗ್‌.
ಜೈಪುರ ಪಿಂಕ್‌ ಪ್ಯಾಂಥರ್ಸ್‌: ಜಸ್ವೀರ್‌ ಸಿಂಗ್‌, ಸೋಮ್‌ವೀರ್‌ ಶೇಖರ್‌, ರವೀಂದರ್‌ ಕುಮಾರ್‌.
ಪಾಟ್ನಾ ಪೈರೇಟ್ಸ್‌: ಪ್ರದೀಪ್‌ ನರ್ವಾಲ್‌, ವಿಜಯ್‌, ಪ್ರವೀಣ್‌ ಬಿರ್ವಾಲ್‌, ಮನೀಶ್‌, ಜವಾಹರ್‌, ವೀರೇಂದ್ರ ಸಿಂಗ್‌, ವಿನೋದ್‌ ಕುಮಾರ್‌.
ಪುನೇರಿ ಪಲ್ಟಾನ್ಸ್‌: ದೀಪಕ್‌ ಹೂಡಾ, ಸಂದೀಪ್‌ ನರ್ವಾಲ್‌, ನರೇಂದರ್‌ ಹೂಡಾ.ತಮಿಳ್‌ ತಲೈವಾಸ್‌: ಅಮಿತ್‌ ಹೂಡಾ, ರಾಜೇಶ್‌, ಸೋಮ್‌ಬೀರ್‌.
ತೆಲುಗು ಟೈಟಾನ್ಸ್‌: ಸೋಮ್‌ಬೀರ್‌, ರಾಕೇಶ್‌ ಕುಮಾರ್‌, ಅಮಿತ್‌ ಸಿಂಗ್‌, ವಿನೋದ್‌, ಮುನೀಶ್‌.
ಯುಪಿ ಯೋಧಾ: ರಾಜೇಶ್‌ ನರ್ವಾಲ್‌, ಗುರ್ವಿಂದರ್‌ ಸಿಂಗ್‌, ಸುರೇಂದರ್‌ ಸಿಂಗ್‌, ರೋಹಿತ್‌, ಗುಲ್ವಿàರ್‌ ಸಿಂಗ್‌.
ಯು ಮುಂಬಾ: ಅನೂಪ್‌ ಕುಮಾರ್‌, ಕುಲದೀಪ್‌ ಸಿಂಗ್‌, ದೀಪಕ್‌, ಜೋಗಿಂದರ್‌ ಸಿಂಗ್‌..

– ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

prahlad-joshi

Congress ಪಕ್ಷದಿಂದ ಅಂಬೇಡ್ಕರ್‌ಗೆ ಅಗೌರವ: ಸಚಿವ ಜೋಶಿ ಆರೋಪ

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tennis

ಇಟಾಲಿಯನ್‌ ಓಪನ್‌ ಟೆನಿಸ್‌ : ಜರ್ರಿ-ಜ್ವೆರೇವ್‌ ನಡುವೆ ಫೈನಲ್‌

1-IPL

CSK ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಆರ್ ಸಿಬಿ; ಪ್ರಶಂಸೆಗಳ ಸುರಿಮಳೆ

badminton

ಥಾಯ್ಲೆಂಡ್‌ ಓಪನ್‌ : ಪ್ರಶಸ್ತಿ ಸುತ್ತಿಗೆ ಚಿರಾಗ್‌-ಸಾತ್ವಿಕ್‌

1-sadasds

IPL ಚೆನ್ನೈ ಗೆ ಗೆಲ್ಲಲು 219 ರನ್ ಗಳ ಗುರಿ ಮುಂದಿಟ್ಟ ಆರ್ ಸಿಬಿ

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.