ಹಾಂಕಾಂಗ್ ಓಪನ್: ಕಶ್ಯಪ್ ಪತನ; ಸಿಂಧು, ಸೈನಾ, ಪ್ರಣಯ್ ಮುನ್ನಡೆ
Team Udayavani, Nov 23, 2017, 10:14 AM IST
ಕೌಲೂನ್: ಭಾರತದ ಶಟ್ಲರ್ಗಳಾದ ಪಿವಿ ಸಿಂಧು, ಸೈನಾ ನೆಹ್ವಾಲ್ ಮತ್ತು ಎಚ್ಎಸ್ ಪ್ರಣಯ್ ಅವರು ಹಾಂಕಾಂಗ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ. ಇದೇ ವೇಳೆ ಪಾರುಪಳ್ಳಿ ಕಶ್ಯಪ್ ಮತ್ತು ವನಿತೆಯರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಸೋತು ಹೊರಬಿದ್ದಿದ್ದಾರೆ.
ದ್ವಿತೀಯ ಶ್ರೇಯಾಂಕದ ಸಿಂಧು 4 ಲಕ್ಷ ಡಾಲರ್ ಬಹುಮಾನ ನಿಧಿಯ ಈ ಕೂಟದ ಮೊದಲ ಸುತ್ತಿನಲ್ಲಿ ಹಾಂಕಾಂಗ್ನ ಅರ್ಹತಾ ಆಟಗಾರ್ತಿ ಲಿಯುಂಗ್ ಯುಯೆಟ್ ಯೀ ಅವರನ್ನು 21-18, 21-10 ಗೇಮ್ಗಳಿಂದ ಉರುಳಿಸಿದರೆ ಸೈನಾ ಕಠಿನ ಹೋರಾಟದಲ್ಲಿ ಡೆನ್ಮಾರ್ಕ್ನ ಮೆಟ್ಟೆ ಪೌಲ್ಸೆನ್ ಅವರನ್ನು 21-19, 23-21 ಗೇಮ್ಗಳಿಂದ ಕೆಡಹಿದರು.
ವಿಶ್ವ ಚಾಂಪಿಯನ್ಶಿಪ್ನ ಕಂಚು ವಿಜೇತೆ ಸೈನಾ ಮುಂದಿನ ಸುತ್ತಿನಲ್ಲಿ ಪ್ರಬಲ ಎದುರಾಳಿ ಎಂಟನೇ ಶ್ರೇಯಾಂಕದ ಚೀನದ ಚೆನ್ ಯುಫೆಯಿ ಅವರ ಸವಾಲನ್ನು ಎದುರಿಸಲಿದ್ದಾರೆ.
ಪ್ರಣಯ್ ದ್ವಿತೀಯ ಸುತ್ತಿಗೆ
ಪುರುಷರ ಸಿಂಗಲ್ಸ್ನಲ್ಲಿ ಪ್ರಣಯ್ ಅವರು ಹಾಂಕಾಂಗ್ನ ಹು ಯುನ್ ಅವರನ್ನು 19-21, 21-17, 21-15 ಗೇಮ್ಗಳಿಂದ ಸೋಲಿಸಿದರೆ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಮೊದಲ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. ಒಂದು ತಾಸು ಮತ್ತು 9 ನಿಮಿಷಗಳ ಹೋರಾಟದಲ್ಲಿ ಅವರು ಕೊರಿಯದ ಲೀ ಡಾಂಗ್ ಕೆಯುನ್ ಅವರಿಗೆ 21-15, 9-21, 20-22 ಗೇಮ್ಗಳಿಂದ ಶರಣಾದರು. ಇನ್ನೊಂದು ಪಂದ್ಯದಲ್ಲಿ ಸೌರಭ್ ಇಂಡೋನೇಶ್ಯದ ಟಾಮಿ ಸುಜಿಯಾರ್ಟೊ ಅವರಿಗೆ 15-21, 8-21 ಗೇಮ್ಗಳಿಂದ ಸುಲಭವಾಗಿ ಸೋತರು.
ವನಿತೆಯರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಅವರು ಗೆಲುವು ದಾಖಲಿಸಲು ಶಕ್ತಿಮೀರಿ ಪ್ರಯತ್ನಿಸಿದರು. ಆದರೆ ಚೀನದ ಹುವಾಂಗ್ ಡಾಂಗ್ಪಿಂಗ್ ಮತ್ತು ಲಿ ವೆನ್ಮೆಯಿ ಅವರಿಗೆ ಅಂತಿಮವಾಗಿ 21-11, 19-21, 21-19 ಗೇಮ್ಗಳಿಂದ ಸೋತು ಹೊರಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ