ಅಪ್ರತಿಮ ಸಾಧನೆಗೆ ಅವಳಿ ಟ್ರೋಫಿಗಳ ಮೆರುಗು


Team Udayavani, Feb 26, 2018, 6:00 AM IST

AP2_25_2018_000008B.jpg

ಕೇಪ್‌ಟೌನ್‌: ಭಾರೀ ಕಠಿನ ಎಂದು ಭಾವಿಸಲಾಗಿದ್ದ ದಕ್ಷಿಣ ಆಫ್ರಿಕಾದ ಸುದೀರ್ಘ‌ ಕ್ರಿಕೆಟ್‌ ಪ್ರವಾಸವನ್ನು ಭಾರತ ನಿರೀಕ್ಷೆಗೂ ಮೀರಿದ ಯಶಸ್ಸಿನೊಂದಿಗೆ ಮುಗಿಸಿದೆ. ಹರಿಣಗಳ ನಾಡಿನಲ್ಲಿ ಇದೇ ಮೊದಲ ಬಾರಿಗೆ ಏಕದಿನ ಹಾಗೂ ಟಿ20 ಸರಣಿಗಳೆರಡನ್ನೂ ವಶಪಡಿಸಿಕೊಂಡದ್ದು ಟೀಮ್‌ ಇಂಡಿಯಾದ ಮಹತ್ವದ ಹಾಗೂ ಸ್ಮರಣೀಯ ಸಾಧನೆಯಾಗಿ ದಾಖಲಾಗಿದೆ. ಒಂದು ಟೆಸ್ಟ್‌ ಗೆಲುವು ಕೂಡ ಕೊಹ್ಲಿ ಪಡೆಯ ಹಿರಿಮೆಯನ್ನು ಸಾರುತ್ತದೆ.

ಕೇಪ್‌ಟೌನ್‌ ಟೆಸ್ಟ್‌ ಸೋಲಿನೊಂದಿಗೆ ಮೊದಲ್ಗೊಂಡ ಭಾರತದ ಈ ಪ್ರವಾಸ ಕೇಪ್‌ಟೌನ್‌ ಟಿ20 ಗೆಲುವಿನೊಂದಿಗೆ ಸಂಪನ್ನಗೊಂಡದ್ದೊಂದು ವಿಶೇಷ. ದಕ್ಷಿಣ ಆಫ್ರಿಕಾ 2 ಟೆಸ್ಟ್‌ ಹಾಗೂ ತಲಾ ಒಂದೊಂದು ಏಕದಿನ ಮತ್ತು ಟಿ20 ಪಂದ್ಯಗಳನ್ನು ಗೆದ್ದರೆ, ಭಾರತ ಒಂದು ಟೆಸ್ಟ್‌, 5 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿತು.

ಟಿ20: 7 ರನ್‌ ಗೆಲುವು
ಶನಿವಾರ ರಾತ್ರಿ ನಡೆದ ಅಂತಿಮ ಟಿ20 ಪಂದ್ಯವನ್ನು 7 ರನ್ನುಗಳಿಂದ ಗೆಲ್ಲುವ ಮೂಲಕ ಭಾರತ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು, ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 172 ರನ್‌ ಬಾರಿಸಿ ಸವಾಲೊಡ್ಡಿತು. ದಕ್ಷಿಣ ಆಫ್ರಿಕಾ ಕೊನೆಯ ಹಂತದಲ್ಲಿ ಸಿಡಿದು ನಿಂತರೂ 6ಕ್ಕೆ 165 ರನ್‌ ಮಾತ್ರ ಗಳಿಸಿ ಸರಣಿಯನ್ನು ಕಳೆದುಕೊಂಡಿತು.
ಚೇಸಿಂಗ್‌ ಇಷ್ಟಪಟ್ಟ ದಕ್ಷಿಣ ಆಫ್ರಿಕಾ ಆರಂಭದಿಂದಲೇ ಭಾರತದ ಬಿಗಿ ದಾಳಿಗೆ ಸಿಲುಕಿ ಒತ್ತಡಕ್ಕೊಳಗಾಯಿತು. 

ಕೊನೆಯ 3 ಓವರ್‌ಗಳಲ್ಲಿ 5 ವಿಕೆಟ್‌ಗಳಿಂದ 53 ರನ್‌ ತೆಗೆಯುವ ಕಠಿನ ಸವಾಲು ಎದುರಾಯಿತು. ಈ ಹಂತದಲ್ಲಿ ಮೊದಲ ಪಂದ್ಯವಾಡಲಿಳಿದಿದ್ದ ಜಾಂಕರ್‌ ಸಿಡಿದು ನಿಂತರು. ಶಾದೂìಲ್‌ ಠಾಕೂರ್‌ ಎಸೆದ 18ನೇ ಓವರಿನಲ್ಲಿ 18 ರನ್‌, ಬುಮ್ರಾ ಪಾಲಾದ 19ನೇ ಓವರಿನಲ್ಲಿ 16 ರನ್‌  ಸೋರಿಹೋಯಿತು. ಅಂತಿಮ ಓವರಿನಲ್ಲಿ ಆಫ್ರಿಕಾ ಗೆಲುವಿಗೆ 19 ರನ್‌ ಅಗತ್ಯ ಬಿತ್ತು. ಆದರೆ ಭುವನೇಶ್ವರ್‌ ಉತ್ತಮ ನಿಯಂತ್ರಣ ಸಾಧಿಸಿದರು. ಅಂತಿಮ ಎಸೆತದಲ್ಲಿ ಅಪಾಯಕಾರಿ ಜಾಂಕರ್‌ ವಿಕೆಟ್‌ ಕಿತ್ತು ಭಾರತದ ಸರಣಿ ಜಯವನ್ನು ಘೋಷಿಸಿದರು.

43 ರನ್‌ ಜತೆಗೆ ಒಂದು ವಿಕೆಟ್‌ ಕಿತ್ತ ಸುರೇಶ್‌ ರೈನಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರೆ, ಒಟ್ಟು 7 ವಿಕೆಟ್‌ ಹಾರಿಸಿದ ಭುವನೇಶ್ವರ್‌ ಕುಮಾರ್‌ ಸರಣಿಶ್ರೇಷ್ಠರಾಗಿ ಮೂಡಿಬಂದರು.

ಆಕ್ರಮಣಕಾರಿ ನೀತಿ
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಉಸ್ತುವಾರಿ ನಾಯಕ ರೋಹಿತ್‌ ಶರ್ಮ, “ಸೀಮಿತ ಓವರ್‌ಗಳ ಸರಣಿಯಲ್ಲಿ ನಾವು ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತ ಬಂದೆವು. ಎಷ್ಟೇ ಕಠಿನ ಸಂದರ್ಭದಲ್ಲೂ ಪಲಾಯನವಾದ ಮಾಡಲಿಲ್ಲ. ಒಂದು ತಂಡವಾಗಿ ಆಡಿದೆವು, ಕಾರ್ಯತಂತ್ರಗಳಲ್ಲಿ ಯಶಸ್ವಿಯಾದೆವು’ ಎಂದರು.

“ಅಂತಿಮ ಪಂದ್ಯಕ್ಕಾಗಿ ನಾವು ಕೆಲವು ಯೋಜನೆಗಳನ್ನು ರೂಪಿಸಿದ್ದೆವು. ಮುಖ್ಯವಾಗಿ ಪವರ್‌-ಪ್ಲೇ ಅವಧಿಯ ಮೊದಲ 6 ಓವರ್‌ಗಳಲ್ಲಿ ನಿಯಂತ್ರಣ ಸಾಧಿಸುವುದಾಗಿತ್ತು. ಇದು ಯಶಸ್ವಿಯಾಯಿತು. ನ್ಯೂ ಬಾಲ್‌ ಬೌಲರ್‌ಗಳಿಗೆ ಇದರ ಸಂಪೂರ್ಣ ಶ್ರೇಯಸ್ಸು ಸಲ್ಲುತ್ತದೆ. ಅನಂತರವೂ ನಾವು ಬಿಗಿ ದಾಳಿ ಮುಂದುವರಿಸಿದೆವು. ಸಹಜವಾಗಿಯೇ ರನ್‌ರೇಟ್‌ ಏರತೊಡಗಿತು. ಆಫ್ರಿಕಾದ ಮೇಲೆ ಒತ್ತಡ ಬಿತ್ತು. ನಮ್ಮದು ಪರಿಪೂರ್ಣ ಬೌಲಿಂಗ್‌ ಸಾಧನೆಯಾಗಿತ್ತು…’ ಎಂದರು.
ಭಾರತದ ಬ್ಯಾಟಿಂಗ್‌ ಬಗ್ಗೆ ಮಾತಾಡಿದ ರೋಹಿತ್‌, 

“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ 15 ರನ್ನುಗಳ ಕೊರತೆ ಕಾಡಿತು. ನಮ್ಮ ಆರಂಭವನ್ನು ಕಂಡಾಗ ಇನ್ನೂ ಹೆಚ್ಚಿನ ಮೊತ್ತ ದಾಖಲಾಗಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ನಿರೀಕ್ಷಿಸಿದಷ್ಟು ರನ್‌ ಬರಲಿಲ್ಲ’ ಎಂದರು.

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಎಲ್‌ಬಿಡಬ್ಲ್ಯು ಡಾಲ    11
ಶಿಖರ್‌ ಧವನ್‌    ರನೌಟ್‌    47
ಸುರೇಶ್‌ ರೈನಾ    ಸಿ ಬೆಹದೀìನ್‌ ಬಿ ಶಂಸಿ    43
ಮನೀಷ್‌ ಪಾಂಡೆ    ಸಿ ಮಿಲ್ಲರ್‌ ಬಿ ಡಾಲ    13
ಹಾರ್ದಿಕ್‌ ಪಾಂಡ್ಯ    ಸಿ ಕ್ಲಾಸೆನ್‌ ಬಿ ಮಾರಿಸ್‌21
ಎಂ.ಎಸ್‌. ಧೋನಿ    ಸಿ ಮಿಲ್ಲರ್‌ ಬಿ ಡಾಲ    12
ದಿನೇಶ್‌ ಕಾರ್ತಿಕ್‌    ಎಲ್‌ಬಿಡಬ್ಲ್ಯು ಮಾರಿಸ್‌    13
ಅಕ್ಷರ್‌ ಪಟೇಲ್‌    ಔಟಾಗದೆ    1
ಭುವನೇಶ್ವರ್‌ ಕುಮಾರ್‌    ಔಟಾಗದೆ    3
ಇತರ        8
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)        172
ವಿಕೆಟ್‌ ಪತನ: 1-14, 2-79, 3-111, 4-126, 5-151, 6-163, 7-168.
ಬೌಲಿಂಗ್‌:
ಕ್ರಿಸ್‌ ಮಾರಿಸ್‌        4-0-43-2
ಜೂನಿಯರ್‌ ಡಾಲ        4-0-35-3
ಜೆಪಿ ಡ್ಯುಮಿನಿ        3-0-22-0
ಆ್ಯಂಡಿಲ್‌ ಫೆಲುಕ್ವಾಯೊ        3-0-26-0
ತಬ್ರೈಜ್‌ ಶಂಸಿ        4-0-31-1
ಆರನ್‌ ಫ್ಯಾಂಗಿಸೊ        2-0-13-0
ದಕ್ಷಿಣ ಆಫ್ರಿಕಾ
ರೀಝ ಹೆಂಡ್ರಿಕ್ಸ್‌    ಸಿ ಧವನ್‌ ಬಿ ಭುವನೇಶ್ವರ್‌    7
ಡೇವಿಡ್‌ ಮಿಲ್ಲರ್‌    ಸಿ ಪಟೇಲ್‌ ಬಿ ರೈನಾ    24
ಜೆಪಿ ಡ್ಯುಮಿನಿ    ಸಿ ರೋಹಿತ್‌ ಬಿ ಠಾಕೂರ್‌    55
ಹೆನ್ರಿಚ್‌ ಕ್ಲಾಸೆನ್‌    ಸಿ ಭುವನೇಶ್ವರ್‌ ಬಿ ಪಾಂಡ್ಯ    7
ಕ್ರಿಸ್ಟಿಯಾನ್‌ ಜಾಂಕರ್‌    ಸಿ ರೋಹಿತ್‌ ಬಿ ಭುವನೇಶ್ವರ್‌    49
ಕ್ರಿಸ್‌ ಮಾರಿಸ್‌    ಬಿ ಬುಮ್ರಾ    4
ಫ‌ರ್ಹಾನ್‌ ಬೆಹದೀìನ್‌    ಔಟಾಗದೆ    15
ಇತರ        4
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)        165
ವಿಕೆಟ್‌ ಪತನ: 1-10, 2-45, 3-79, 4-109, 5-114, 6-165.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        4-0-24-2
ಜಸ್‌ಪ್ರೀತ್‌ ಬುಮ್ರಾ        4-0-39-1
ಶಾದೂìಲ್‌ ಠಾಕೂರ್‌        4-0-35-1
ಹಾರ್ದಿಕ್‌ ಪಾಂಡ್ಯ        4-0-22-1
ಸುರೇಶ್‌ ರೈನಾ        3-0-27-1
ಅಕ್ಷರ್‌ ಪಟೇಲ್‌        1-0-16-0
ಪಂದ್ಯಶ್ರೇಷ್ಠ: ಸುರೇಶ್‌ ರೈನಾ
ಸರಣಿಶ್ರೇಷ್ಠ: ಭುವನೇಶ್ವರ್‌ ಕುಮಾರ್‌

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.