ಭಾರತಕ್ಕೆ ಜಯದ ಬೆಳಕು


Team Udayavani, Nov 5, 2018, 6:00 AM IST

pti1142018000200a.jpg

ಕೋಲ್ಕತಾ: ಭಾನುವಾರ ಆರಂಭವಾದ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಿಣುಕಾಡಿ ಗೆದ್ದಿದೆ. ಗೆಲ್ಲಲು 110 ರನ್‌ಗಳ ಸುಲಭ ಗುರಿ ಪಡೆದರೂ ಅದನ್ನು ಬೆನ್ನತ್ತಲು 5 ವಿಕೆಟ್‌ ಕಳೆದುಕೊಂಡಿತು. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಮೊದಲ ಪಂದ್ಯದಲ್ಲಿ ಗೆಲ್ಲುವುದು ಅನುಮಾನವೇ ಆಗಿತ್ತು!

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 109 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಭಾರತ 17.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸಿತು.

ಒದ್ದಾಡಿದ ಭಾರತ: ಗೆಲುವಿಗೆ ಕೇವಲ 110 ರನ್‌ ಗಳಿಸಬೇಕಾದ ಅಗತ್ಯ ಹೊಂದಿದ್ದ ಭಾರತ ಅದನ್ನು ಗಳಿಸಲು ಪರದಾಡಿತು. 45 ರನ್‌ಗಳಾಗುವಾಗ 4 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ರೋಹಿತ್‌, ಧವನ್‌, ರಾಹುಲ್‌, ರಿಷಭ್‌ ಅಲ್ಪಮೊತ್ತಕ್ಕೆ ಹೊರ ನಡೆದರು. ಅನಂತರ ಜೊತೆಗೂಡಿದ ಮನೀಶ್‌ ಪಾಂಡೆ, ದಿನೇಶ್‌ ಕಾರ್ತಿಕ್‌ 38 ರನ್‌ ಜೊತೆಯಾಟವಾಡಿದರು. ಮನೀಶ್‌ ನಂತರ ಬ್ಯಾಟ್‌ ಹಿಡಿದು ಬಂದ ಕೃಣಾಲ್‌ ಪಾಂಡ್ಯ ಪದಾರ್ಪಣೆ ಪಂದ್ಯದಲ್ಲೇ ಮಿಂಚಿ 21 ರನ್‌ ಗಳಿಸಿದರು. ಕಾರ್ತಿಕ್‌ ಅಜೇಯ 31 ರನ್‌ ಗಳಿಸಿ ತಂಡದ ಸೋಲನ್ನು ತಪ್ಪಿಸಿದರು.

ವಿಂಡೀಸ್‌ ಕುಸಿತ: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ ಅದಕ್ಕೆ ಸರಿಯಾದ ಫ‌ಲ ಪಡೆಯಿತು. ವಿಂಡೀಸ್‌ನ ಯಾವುದೇ ಬ್ಯಾಟ್ಸ್‌ಮನ್‌ಗಳು ಭಾರತದ ದಾಳಿಗೆ ಸೆಡ್ಡು ಹೊಡೆದು ನಿಲ್ಲದ ಪರಿಣಾಮ ಆ ತಂಡ ಕುಸಿತ ಅನುಭವಿಸಿತು. ವಿಂಡೀಸ್‌ ತಂಡದ ಭರವಸೆಯ ಆಟಗಾರರಾದ ಶೈ ಹೋಪ್‌, ಶಿಮ್ರನ್‌ ಹೆಟ್‌ಮೈರ್‌, ಕೈರನ್‌ ಪೊಲಾರ್ಡ್‌, ಕಾರ್ಲೋಸ್‌ ಬ್ರಾತ್‌ವೇಟ್‌ ಸಂಪೂರ್ಣ ವಿಫ‌ಲರಾದರು. ವಿಂಡೀಸ್‌ ಪರ ಸ್ವಲ್ಪವಾದರೂ ಉತ್ತಮವಾಗಿ ಆಡಿದ್ದು ಫ್ಯಾಬಿಯನ್‌ ಅಲೆನ್‌ ಮಾತ್ರ. ಅವರು 20 ಎಸೆತಗಳಲ್ಲಿ 4 ಬೌಂಡರಿ ಸಹಿತ 27 ರನ್‌ಗಳಿಸಿದರು. ಕಡೆಯಲ್ಲಿ ಕೀಮೊ ಪೌಲ್‌ 15 ರನ್‌ ಗಳಿಸಿ ರನ್‌ ಗತಿ ಏರಿಸಲು ಯತ್ನಿಸಿದರೂ ಅದಕ್ಕೆ ಭಾರತೀಯ ಬೌಲರ್‌ಗಳು ಅವಕಾಶ ನೀಡಲಿಲ್ಲ. ಭಾರತದ ಪರ ಕುಲದೀಪ್‌ ಯಾದವ್‌ 13 ರನ್‌ ನೀಡಿ 3 ವಿಕೆಟ್‌ ಪಡೆದು ಮಿಂಚಿದರು.

ಕೃಣಾಲ್‌, ಖಲೀಲ್‌ ಪಾದಾರ್ಪಣೆ
ಭಾರತದ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸಹೋದರ ಕೃಣಾಲ್‌ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಭಾನುವಾರ ಅವರು ಟಿ20 ಮೂಲಕ ಅಂತಾರಾಷ್ಟ್ರೀಯ ಜೀವನ ಪ್ರವೇಶಿಸಿದರು. ಇನ್ನು ವೇಗಿ ಖಲೀಲ್‌ ಅಹ್ಮದ್‌ಗೂ ಇದು ಮೊದಲ ಟಿ20 ಪಂದ್ಯ. ಆದರೆ ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಈಗಾಗಲೇ ಆಡಿದ್ದಾರೆ.

ವಿಂಡೀಸ್‌ 20 ಓವರ್‌, 109/8
ಶೈ ಹೋಪ್‌ ರನೌಟ್‌    14
ದಿನೇಶ್‌ ರಾಮಿªನ್‌ ಸಿ ಕಾರ್ತಿಕ್‌ ಬಿ ಉಮೇಶ್‌    02
ಶಿಮ್ರನ್‌ ಹೆಟ್‌ಮೈರ್‌ ಸಿ ಕಾರ್ತಿಕ್‌ ಬಿ ಬುಮ್ರಾ    10
ಕೈರನ್‌ ಪೊಲಾರ್ಡ್‌ ಸಿ ಪಾಂಡೆ ಬಿ ಪಾಂಡ್ಯ    14
ಡ್ಯಾರೆನ್‌ ಬ್ರಾವೊ ಸಿ ಧವನ್‌ ಬಿ ಕುಲದೀಪ್‌    05
ರೋವ¾ನ್‌ ಪೊವೆಲ್‌ ಸಿ ಕಾರ್ತಿಕ್‌ ಬಿ ಕುಲದೀಪ್‌    04
ಕಾರ್ಲೋಸ್‌ ಬ್ರಾತ್‌ವೇಟ್‌ ಎಲ್ಬಿ ಕುಲದೀಪ್‌    04
ಫ್ಯಾಬಿಯನ್‌ ಅಲೆನ್‌ ಸಿ ಉಮೇಸ್‌ ಬಿ ಖಲೀಲ್‌    27
ಕೀಮೊ ಪೌಲ್‌ ಅಜೇಯ    15
ಖಾರಿ ಪಿಯರ್‌    ಅಜೇಯ    09
ಇತರೆ    5
ವಿಕೆಟ್‌ ಪತನ: 1-16, 2-22, 3-28, 4-47, 5-49, 6-56, 7-63, 8-87.
ಬೌಲಿಂಗ್‌
ಉಮೇಶ್‌ ಯಾದವ್‌    4    0    36    1
ಖಲೀಲ್‌ ಅಹ್ಮದ್‌    4    1    16    1
ಜಸಿøàತ್‌ ಬುಮ್ರಾ    4    0    27    1
ಕೃಣಾಲ್‌ ಪಾಂಡ್ಯ    4    0    15    1
ಕುಲದೀಪ್‌ ಯಾದವ್‌    4    0    13    3

ಭಾರತ 17.5 ಓವರ್‌, 110/5
ರೋಹಿತ್‌ ಶರ್ಮ ಸಿ ರಾಮಿªನ್‌ ಬಿ ಥಾಮಸ್‌    6
ಶಿಖರ್‌ ಧವನ್‌ ಬಿ ಥಾಮಸ್‌    3
ಕೆ.ಎಲ್‌.ರಾಹುಲ್‌ ಸಿ ಬ್ರಾವೊ    16
ರಿಷಭ್‌ ಪಂತ್‌ ಸಿ ಬ್ರಾವೊ ಬಿ ಬ್ರಾತ್‌ವೇಟ್‌    01
ಮನೀಶ್‌ ಪಾಂಡೆ ಸಿ ಮತ್ತು ಬಿ ಪಿಯರ್‌    19
ದಿನೇಶ್‌ ಕಾರ್ತಿಕ್‌ ಅಜೇಯ    31
ಕೃಣಾಲ್‌ ಪಾಂಡ್ಯ ಅಜೇಯ    21
ಇತರೆ    13
ವಿಕೆಟ್‌ ಪತನ: 1-7, 2-16, 3-35, 4-45, 5-83
ಬೌಲಿಂಗ್‌
ಒಶಾನೆ ಥಾಮಸ್‌    4    0    21    2
ಕೀಮೊ ಪೌಲ್‌    3.5    0    30    0
ಬ್ರಾತ್‌ವೇಟ್‌    4    1    11    2
ಖಾರಿ ಪಿಯರ್‌    4    0    16    1
ಕೈರನ್‌ ಪೊಲಾರ್ಡ್‌    1    0    12    0
ಫ್ಯಾಬಿಯನ್‌ ಅಲೆನ್‌    1    0    11    0

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.