ಭಾರತದ ಮಾಜಿ ಫುಟ್ಬಾಲ್ ಆಟಗಾರ, ಒಲಿಂಪಿಕ್ಸ್‌ ಹೀರೋ ಸಮರ್ ಬ್ಯಾನರ್ಜಿ ನಿಧನ


Team Udayavani, Aug 20, 2022, 10:43 PM IST

ಭಾರತದ ಮಾಜಿ ಫುಟ್ಬಾಲ್ ಆಟಗಾರ, ಒಲಿಂಪಿಕ್ಸ್‌ ಹೀರೋ ಸಮರ್ ಬ್ಯಾನರ್ಜಿ ನಿಧನ

ಕೋಲ್ಕತಾ: ಭಾರತದ ಸ್ಟಾರ್‌ ಫುಟ್ಬಾಲಿಗ, ಒಲಿಂಪಿಕ್ಸ್‌ನಲ್ಲಿ ತಂಡವನ್ನು ಮುನ್ನಡೆಸಿದ ಸಮರ್‌ “ಬದ್ರೂ’ ಬ್ಯಾನರ್ಜಿ ಇನ್ನಿಲ್ಲ.92 ವರ್ಷದ ಅವರು ಶನಿವಾರ ನಿಧನ ಹೊಂದಿದರು.

ವೃದ್ದಾಪ್ಯದ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು “ಎಂ.ಆರ್‌. ಬಂಗುರ್‌ ಹಾಸ್ಪಿಟಲ್‌’ಗೆ ದಾಖಲಿಸಲಾಗಿತ್ತು. ಜುಲೈಯಲ್ಲಿ ಕೋವಿಡ್‌ ಪಾಸಿಟಿವ್‌ ಕೂಡ ಅಂಟಿಕೊಂಡಿತು.

“ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಸಮರ್‌ ಬ್ಯಾನರ್ಜಿ ಅವರನ್ನು ಎಸ್‌ಎಸ್‌ಕೆಎಂ ಹಾಸ್ಪಿಟಲ್‌ಗೆ ವರ್ಗಾಯಿಸಲಾಗಿತ್ತು. ರಾಜ್ಯ ಕ್ರೀಡಾ ಸಚಿವ ಅರುಪ್‌ ಬಿಸ್ವಾಸ್‌ ವಿಶೇಷ ಮುತುವರ್ಜಿ ವಹಿಸಿದ್ದರು. ನಮ್ಮೆಲ್ಲರ ನೆಚ್ಚಿನ “ಬದ್ರೂ ದಾ’ ಶನಿವಾರ ಬೆಳಗ್ಗೆ 2.10ರ ವೇಳೆಗೆ ಕೊನೆಯುಸಿರೆಳೆದರು’ ಎಂಬುದಾಗಿ ಮೋಹನ್‌ ಬಗಾನ್‌ ಕಾರ್ಯದರ್ಶಿ ದೇಬಶಿಷ್‌ ದತ್ತ ತಿಳಿಸಿದರು.

ಒಲಿಂಪಿಕ್ಸ್‌ ಹೀರೋ
1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಭಾರತದ ಫ‌ುಟ್‌ಬಾಲ್‌ ತಂಡವನ್ನು ಸೆಮಿಫೈನಲ್‌ ತನಕ ಮುನ್ನಡೆಸಿದ ಹಿರಿಮೆ ಸಮರ್‌ ಬ್ಯಾನರ್ಜಿ ಅವರದಾಗಿತ್ತು. ಅಂದು ಭಾರತಕ್ಕೆ ಕಂಚಿನ ಪದಕ ಸ್ವಲ್ಪದರಲ್ಲೇ ಕೈತಪ್ಪಿತ್ತು. ಬಲ್ಗೇರಿಯಾಕ್ಕೆ 0-3 ಗೋಲುಗಳಿಂದ ಶರಣಾಗಿ 4ನೇ ಸ್ಥಾನಿಯಾಯಿತು.

ಅಂದು ಸಯ್ಯದ್‌ ಅಬ್ದುಲ್ಲ ರಹೀಂ ಭಾರತ ತಂಡದ ಕೋಚ್‌ ಆಗಿದ್ದರು. ಪಿ.ಕೆ. ಬ್ಯಾನರ್ಜಿ, ನೆವೆಲ್ಲೆ ಡಿ’ಸೋಜ, ಜೆ. “ಕಿಟ್ಟು’ ಕೃಷ್ಣಸ್ವಾಮಿ ಅವರೆಲ್ಲ ಭಾರತದ ತಂಡದ ಪ್ರಮುಖರಾಗಿದ್ದರು.ಆ ತಿಥೇಯ ಆಸ್ಟ್ರೇಲಿಯವನ್ನು 4-2 ಗೋಲುಗಳಿಂದ ಬಗ್ಗುಬಡಿದದ್ದು ಭಾರತದ ಪರಾಕ್ರಮಕ್ಕೆ ಸಾಕ್ಷಿಯಾಗಿತ್ತು. ಡಿ’ಸೋಜ ಅವರ ಅಮೋಘ ಹ್ಯಾಟ್ರಿಕ್‌ ಈ ಪಂದ್ಯದ ಆಕರ್ಷಣೆ ಆಗಿತ್ತು. ಸೆಮಿಫೈನಲ್‌ನಲ್ಲಿ ಯುಗೋಸ್ಲಾವಿಯಾ 4-2 ಅಂತರದಿಂದ ಭಾರತವನ್ನು ಮಣಿಸಿತ್ತು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.