ಟೆನಿಸ್‌ ದೊರೆ ಫೆಡರರ್‌ ವಿರುದ್ಧ ಭಾರತದ ಸುಮಿತ್‌


Team Udayavani, Aug 25, 2019, 5:12 AM IST

Untitled-1

ನ್ಯೂಯಾರ್ಕ್‌: ಭಾರತದ 22ರ ಹರೆಯದ ಯುವ ಟೆನಿಸಿಗ ಸುಮಿತ್‌ ನಾಗಲ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಲ್ಲಿ “ಕನಸಿನ ಪದಾರ್ಪಣೆ’ಯ ಖುಷಿಯಲ್ಲಿದ್ದಾರೆ. ಯುಎಸ್‌ ಓಪನ್‌ ಅರ್ಹತಾ ಸುತ್ತು ದಾಟಿ ಬಂದ ನಾಗಲ್‌, ಸೋಮವಾರ ಪ್ರಧಾನ ಸುತ್ತಿನ ಮೊದಲ ಪಂದ್ಯ ಆಡಲಿದ್ದಾರೆ. ಇಲ್ಲಿ ಅವರು “ಟೆನಿಸ್‌ ದೇವರು’ ರೋಜರ್‌ ಫೆಡರರ್‌ ಅವರನ್ನು ಎದುರಿಸಲಿದ್ದಾರೆ ಎಂಬುದು ಈ ಹೊತ್ತಿನ ಕುತೂಹಲ!

ಭಾರತದ ಮತ್ತೋರ್ವ ಭರವಸೆಯ ಆಟಗಾರ ಪ್ರಜ್ಞೆàಶ್‌ ಗುಣೇಶ್ವರನ್‌ ಕೂಡ ಯುಎಸ್‌ ಓಪನ್‌ ಪ್ರಧಾನ ಸುತ್ತಿಗೆ ನೆಗೆದಿದ್ದು, ಇಲ್ಲಿ ರಶ್ಯದ ಇನ್‌ಫಾರ್ಮ್ ಆಟಗಾರ ಡ್ಯಾನಿಲ್‌ ಮೆಡ್ವಡೇವ್‌ ವಿರುದ್ಧ ಸೆಣಸಲಿದ್ದಾರೆ.

ಇದರೊಂದಿಗೆ 1998ರ ಬಳಿಕ ಭಾರತದ ಇಬ್ಬರು ಆಟಗಾರರು ಗ್ರ್ಯಾನ್‌ಸ್ಲಾಮ್‌ ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಂತಾಯಿತು. ಅಂದಿನ ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ಆಡಿದ್ದರು.

“ಟೆನಿಸ್‌ ಗಾಡ್‌’ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಬ್ರಝಿಲ್‌ನ ಜೊ ಮಿನೆಜಸ್‌ ವಿರುದ್ಧ ಕೊನೆಯ ಸುತ್ತಿನಲ್ಲಿ ಸೆಣಸುತ್ತಿರುವಾಗ, ತಾನಿಲ್ಲಿ ಗೆದ್ದರೆ 20 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ, “ಗ್ಲೋಬಲ್‌ ಸೂಪರ್‌ಸ್ಟಾರ್‌’ ರೋಜರ್‌ ಫೆಡರರ್‌ ಅವರನ್ನು ಎದುರಿಸುವ ಬಗ್ಗೆ ಸುಮಿತ್‌ ನಾಗಲ್‌ ಬಹುಶಃ ಕಲ್ಪಿಸಿಯೂ ಇರಲಿಕ್ಕಿಲ್ಲ. ಆದರೀಗ “ಟೆನಿಸ್‌ ಗಾಡ್‌’ ವಿರುದ್ಧ ಆಡುವ ಕನಸು ನನಸಾಗುವ ಮಹಾ ಸಂಭ್ರಮದಲ್ಲಿದ್ದಾರೆ ನಾಗಲ್‌!

ಮಿನೆಜಸ್‌ ವಿರುದ್ಧ 5-7 ಅಂತರದಿಂದ ಮೊದಲ ಸೆಟ್‌ ಕಳೆದುಕೊಂಡ ನಾಗಲ್‌, ಉಳಿದೆರಡು ಸೆಟ್‌ಗಳನ್ನು 6-4, 6-3ರಿಂದ ಗೆದ್ದು ಪ್ರಧಾನ ಸುತ್ತಿಗೆ ನೆಗೆದರು. ಇದರೊಂದಿಗೆ ಈ ದಶಕದಲ್ಲಿ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಸ್ಪರ್ಧೆಯ ಪ್ರಧಾನ ಸುತ್ತಿಗೆ ಪ್ರವೇಶ ಪಡೆದ ಭಾರತದ 5ನೇ ಟೆನಿಸಿಗನೆನಿಸಿದರು. ಉಳಿದವರೆಂದರೆ ಸೋಮ್‌ದೇವ್‌ ದೇವ್‌ವರ್ಮನ್‌, ಯುಕಿ ಭಾಂಬ್ರಿ, ಸಾಕೇತ ಮೈನೇನಿ, ಪ್ರಜ್ಞೆàಶ್‌ ಗುಣೇಶ್ವರನ್‌.

ವಿಶ್ವ ರ್‍ಯಾಂಕಿಂಗ್‌ನಲ್ಲಿ 190ನೇ ಸ್ಥಾನದಲ್ಲಿರುವ ಸುಮಿತ್‌ ನಾಗಲ್‌ ಜೂನಿಯರ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಭಾರತದ 6ನೇ ಟೆನಿಸಿಗನೂ ಆಗಿದ್ದಾರೆ. 2015ರ ವಿಂಬಲ್ಡನ್‌ ಬಾಲಕರ ಡಬಲ್ಸ್‌ ನಲ್ಲಿ ಅವರು ವಿಯೆಟ್ನಾಮ್‌ನ ನಾಮ್‌ ಹಾಂಗ್‌ಲಿ ಜತೆಗೂಡಿ ಪ್ರಶಸ್ತಿ ಜಯಿಸಿದ್ದರು. ಹರ್ಯಾಣದ ಜಜ್ಜರ್‌ನವರಾದ ಸುಮಿತ್‌ ನಾಗಲ್‌, 2017ರಲ್ಲಿ ಬೆಂಗಳೂರಿನಲ್ಲಿ ಚಾಲೆಂಜರ್‌ ಪ್ರಶಸ್ತಿ ಗೆದ್ದ ಬಳಿಕ ಯಾವುದೇ ಮಹತ್ತರ ಸಾಧನೆಗೈದಿಲ್ಲ.

ಪಂದ್ಯದ ಸಮಯ
ನಾಗಲ್‌-ಫೆಡರರ್‌ ನಡುವಿನ ಪಂದ್ಯ ಭಾರತೀಯ ಕಾಲಮಾನದಂತೆ ಮಂಗಳವಾರ ಬೆಳಗ್ಗೆ 5.45ಕ್ಕೆ, ಪ್ರಜ್ಞೆàಶ್‌-ಮೆಡ್ವಡೇವ್‌ ಪಂದ್ಯ ಸೋಮವಾರ ರಾತ್ರಿ 9.45ಕ್ಕೆ ಆರಂಭವಾಗಲಿದೆ. ಆದರೆ ಇದು ಅಧಿಕೃತ ಸಮಯವಲ್ಲ. ಇದಕ್ಕೂ ಮೊದಲಿನ ಪಂದ್ಯಗಳು ವಿಳಂಬಗೊಂಡರೆ ಈ ಸ್ಪರ್ಧೆಗಳೂ ತಡವಾಗಿ ಆರಂಭವಾಗಲಿವೆ.

ಆರ್ಥರ್‌ ಆ್ಯಶ್‌ ಸ್ಟೇಡಿಯಂನಲ್ಲಿ ಟೆನಿಸ್‌ ಸ್ಟಾರ್‌ ರೋಜರ್‌ ಫೆಡರರ್‌ ಅವರನ್ನು ಎದುರಿಸುವುದೇ ಒಂದು ಮಹಾನ್‌ ಅವಕಾಶ. ಅವರು ಟೆನಿಸ್‌ನ ದೇವರು. ನಾನೀಗ ಸೂಪರ್‌ ಹ್ಯಾಪ್ಪಿ. ಈ ಸ್ಪರ್ಧೆಯನ್ನು ಭಾರೀ ಕುತೂಹಲದಿಂದ ಎದುರು
ನೋಡುತ್ತಿದ್ದೇನೆ.
-ಸುಮಿತ್‌ ನಾಗಲ್‌

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.