ಟೀಕೆಗೆ ವಿನಯ್ ತಿರುಗೇಟು
Team Udayavani, Apr 12, 2018, 7:00 AM IST
ಚೆನ್ನೈ: ಕೆಕೆಆರ್ ವೇಗದ ಬೌಲರ್, ರಾಜ್ಯದ ವಿನಯ್ ಕುಮಾರ್ ಈಗ ಅಭಿಮಾನಿಗಳ ಟೀಕಾ ಪ್ರಹಾರಕ್ಕೆ ಸಿಕ್ಕಿದ್ದಾರೆ. ಆದರೆ ಅವರು ಅದಕ್ಕೆ ಹೆದರಿ ಕುಳಿತಿಲ್ಲ. ಬದಲಿಗೆ ಟ್ವೀಟ್ ಮೂಲಕ ಅದಕ್ಕೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ನಡೆದ ಚೆನ್ನೈ- ಕೋಲ್ಕತಾ ಐಪಿಎಲ್ ಪಂದ್ಯದ ವೇಳೆ ವಿನಯ್ ಕುಮಾರ್ ದುಬಾರಿಯಾಗಿದ್ದರು. ಅಂತಿಮ ಓವರ್ ಎಸೆದ ಅವರು 19 ರನ್ ನೀಡಿ ಚೆನ್ನೈ ಗೆಲ್ಲಲು ಕಾರಣವಾಗಿದ್ದರು. ಇದರಿಂದ ಅಭಿಮಾನಿಗಳು ವಿನಯ್ ಅವರನ್ನು ಟೀಕಿಸಿ ವ್ಯಂಗ್ಯ ಸಾಲುಗಳನ್ನು ಹರಿಬಿಟ್ಟಿದ್ದರು.
ಇದನ್ನು ಗಂಭೀರವಾಗಿಯೇ ಪರಿಗಣಿಸಿರುವ ವಿನಯ್ ಕುಮಾರ್, “ಇದು ಕೇವಲ ಒಂದು ಮಾತ್ರ ಅಭಿಮಾನಿಗಳೇ. ಆರಾಮಾಗಿರಿ. ಆರ್ಸಿಬಿ ವಿರುದ್ಧ 9 ರನ್ಗಳನ್ನು ಉಳಿಸಿ ಕೊಟ್ಟಿದ್ದಾಗ, ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್ಗಳನ್ನು ನನ್ನ ಬೌಲಿಂಗ್ ಮೂಲಕವೇ ಉಳಿಸಿಕೊಟ್ಟಿದ್ದಾಗ ನೀವೆಲ್ಲ ಎಲ್ಲಿದ್ದಿರಿ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ವಿನಯ್ ಮಂಗಳವಾರ ತೀವ್ರ ವೈಫಲ್ಯ ಕಂಡಿದ್ದರು. 3.5 ಓವರ್ ಎಸೆದಿದ್ದ ಅವರು ಒಟ್ಟು 65 ರನ್ ಕೊಟ್ಟಿದ್ದರು. 4 ಓವರ್ನಲ್ಲಿ ಕ್ರಮವಾಗಿ 14, 16, 16, 19 ರನ್ ಬಿಟ್ಟುಕೊಟ್ಟಿದ್ದು ಕೆಕೆಆರ್ಗೆ ದುಬಾರಿಯಾಗಿ ಪರಿಣಮಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ