ಮುಂದಿನ ಪಂದ್ಯ ನಾನೇ ಗೆಲ್ಲಿಸುವೆ: ಪಂತ್‌


Team Udayavani, May 10, 2019, 6:10 AM IST

PANTH

ವಿಶಾಖಪಟ್ಟಣ: ಕೊನೆಗೂ ಡೆಲ್ಲಿ ಐಪಿಎಲ್ ನಾಕೌಟ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಬುಧವಾರ ರಾತ್ರಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿ ದ್ವಿತೀಯ ಕ್ವಾಲಿಫೈಯರ್‌ ಹಣಾಹಣಿಗೆ ಸಜ್ಜಾಗಿದೆ. ಇಬ್ಬರು ಎಡಗೈ ಆಟಗಾರರಾದ ಪೃಥ್ವಿ ಶಾ ಮತ್ತು ರಿಷಭ್‌ ಪಂತ್‌ ಡೆಲ್ಲಿ ಗೆಲುವಿನ ರೂವಾರಿಗಳಾಗಿ ಮೂಡಿಬಂದರು.

ಧನಾತ್ಮಕ ಮನಸ್ಥಿತಿ ಅಗತ್ಯ

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ರಿಷಭ್‌ ಪಂತ್‌, ‘ಇಂಥ ಕಠಿನ ಟ್ರ್ಯಾಕ್‌ನಲ್ಲಿ ಒಮ್ಮೆ ಸೆಟ್ ಆದಿರೆಂದರೆ ನೀವು ಪಂದ್ಯಕ್ಕೆ ಗೆಲುವಿನ ಮುಕ್ತಾಯ ಹಾಡಬೇಕಾಗುತ್ತದೆ. ನಾನೂ ಇದೇ ಹಾದಿಯಲ್ಲಿದ್ದೆ. ಆದರೆ ಕೊನೆಯ ಹಂತದಲ್ಲಿ ಎಡವಿದೆ. ಆದರೆ ಮುಂದಿನ ಸಲ ನಾನೇ ಕೊನೆಯ ತನಕ ನಿಂತು ತಂಡವನ್ನು ಗೆಲ್ಲಿಸುವೆ. ಇದಕ್ಕೆ ಧನಾತ್ಮಕ ಮನಸ್ಥಿತಿ ಅಗತ್ಯ. ಆದರೆ ನಮ್ಮ ಮನಸ್ಥಿತಿ ನಕಾರಾತ್ಮಕವಾಗಿದ್ದರೆ ಏನೂ ಉಪಯೋಗವಿಲ್ಲ’ ಎಂದರು.

162 ರನ್‌ ಚೇಸಿಂಗ್‌ ವೇಳೆ ಡೆಲ್ಲಿಗೆ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿದ್ದರು. ಬಳಿಕ ರಿಷಭ್‌ ಪಂತ್‌ ಬಿರುಸಿನ ಆಟದ ಮೂಲಕ ನೆರವಿಗೆ ನಿಂತರು. ಕೊನೆಯ ಹಂತದಲ್ಲಿ ರನ್‌ರೇಟ್ ಹೆಚ್ಚುತ್ತಿದ್ದಾಗ ಬಾಸಿಲ್ ಥಂಪಿ ಅವರ 18ನೇ ಓವರ್‌ನಲ್ಲಿ 22 ರನ್‌ ಬಾರಿಸುವ ಮೂಲಕ ಡೆಲ್ಲಿಯನ್ನು ಮೇಲೆತ್ತಿದರು. ಗೆಲುವಿಗೆ ಇನ್ನೇನು 5 ರನ್‌ ಬೇಕಿದ್ದಾಗ ಪಂತ್‌ ವಿಕೆಟ್ ಉರುಳಿತು. ಕೊನೆಯಲ್ಲಿ ಕೀಮೊ ಪೌಲ್ ಆಕರ್ಷಕ ಬೌಂಡರಿ ಮೂಲಕ ಡೆಲ್ಲಿ ಗೆಲುವು ಸಾರಿದರು.

ರಿಷಭ್‌ ಪಂತ್‌ ಕೇವಲ 21 ಎಸೆತಗಳಿಂದ 49 ರನ್‌ ಸಿಡಿಸಿದರು. 5 ಸಿಕ್ಸರ್‌, 2 ಬೌಂಡರಿ ಈ ಪಂದ್ಯಶ್ರೇಷ್ಠ ಇನ್ನಿಂಗ್ಸಿನ ಆಕರ್ಷಣೆಯಾಗಿತ್ತು.

ಆಕ್ರಮಣ ಬ್ಯಾಟಿಂಗ್‌ ಅನಿವಾರ್ಯ

‘ಟಿ20 ಕ್ರಿಕೆಟ್‌ನಲ್ಲಿ 20 ಎಸೆತಗಳಿಂದ 40 ರನ್‌ ಅಗತ್ಯವಿದೆ ಎನ್ನುವಾಗ ನೀವು ಬೌಲರ್‌ಗಳ ಮೇಲೆ ಆಕ್ರಮಣ ಮಾಡಲೇಬೇಕಾಗುತ್ತದೆ. ಬೌಲರ್‌ ಯಾರು ಎಂಬ ಬಗ್ಗೆ ನಾನು ಚಿಂತಿಸುವುದಿಲ್ಲ. ಅಂಥ ಹೊಡೆತಗಳು ನಮಗೆ ಆಯಾಚಿತವಾಗಿ ಅಭ್ಯಾಸವಾಗಿರುತ್ತವೆ. ಇದು ಕಠಿನ ಅಭ್ಯಾಸದ ಫ‌ಲ. ಇಂದು ನಾನು ಭಾರೀ ಬಿರುಸಿನ ಹೊಡೆತಕ್ಕೇನೂ ಮುಂದಾಗಲಿಲ್ಲ. ಚೆಂಡನ್ನು ಎಚ್ಚರಿಕೆಯಿಂದ ಗಮನಿಸಿ ಉತ್ತಮ ಟೈಮಿಂಗ್ಸ್‌ ಮೂಲಕ ಬಡಿದಟ್ಟಿದೆ’ ಎಂದು ಪಂತ್‌ ತಮ್ಮ ಆಟದ ರೀತಿಯನ್ನು ಬಣ್ಣಿಸಿದರು.

ತಂಡವಿರಿಸಿದ ವಿಶ್ವಾಸಕ್ಕೆ ಋಣಿ: ಶಾ

ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದ ಪೃಥ್ವಿ ಶಾ, ತಂಡ ತನ್ನ ಮೇಲಿರಿಸಿದ ವಿಶ್ವಾಸಕ್ಕೆ ಋಣಿ ಎಂಬುದಾಗಿ ಹೇಳಿದ್ದಾರೆ. ‘ನನ್ನ ಇಂದಿನ ಸಾಧನೆಯನ್ನು ಇಡೀ ತಂಡಕ್ಕೆ ಅರ್ಪಿಸುವೆ. ಕಳೆದ ಕೆಲವು ಪಂದ್ಯಗಳಲ್ಲಿ ನಾನು ತೀವ್ರ ರನ್‌ ಬರಗಾಲದಲ್ಲಿದ್ದೆ. ಆದರೂ ತಂಡ ನನ್ನ ಮೇಲೆ ನಂಬಿಕೆ ಇರಿಸಿತು. ಇದನ್ನು ಉಳಿಸಿಕೊಳ್ಳುವಂಥ ಪ್ರದರ್ಶನವೊಂದನ್ನು ನೀಡಬೇಕಿತ್ತು. ಇಂದು ಇದು ಸಾಧ್ಯವಾಗಿದೆ. ಎಲ್ಲ ಸಹಾಯಕ ಸಿಬಂದಿಗೆ, ಆಟಗಾರರಿಗೆ ಮತ್ತು ತರಬೇತುದಾರರಿಗೆ ಕೃತಜ್ಞತೆಗಳು. ನಾನು ನರ್ವಸ್‌ ಆಗಿದ್ದರೂ ಕೋಚಿಂಗ್‌ ಸಿಬಂದಿ ಹುರಿದುಂಬಿಸಿದರು’ ಎಂದು ಪೃಥ್ವಿ ಶಾ ಹೇಳಿದರು. ಪೃಥ್ವಿ ಶಾ ಗಳಿಕೆ 38 ಎಸೆತಗಳಿಂದ 56 ರನ್‌. ಇದರಲ್ಲಿ 6 ಬೌಂಡರಿ, 2 ಸಿಕ್ಸರ್‌ ಸೇರಿತ್ತು.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.