ಬೆಂಗಳೂರು-ರಾಜಸ್ಥಾನ್ ಪಂದ್ಯ ರದ್ದು
Team Udayavani, May 1, 2019, 10:17 AM IST
ಬೆಂಗಳೂರು: ಭಾರೀ ಮಳೆಯಿಂದ ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಮಂಗಳವಾರದ ಐಪಿಎಲ್ ಪಂದ್ಯ ರದ್ದುಗೊಂಡಿದೆ. ಮಳೆಯಿಂದಾಗಿ 5 ಓವರ್ಗಳಿಗೆ ಸೀಮಿತವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ತಂಡವು 7 ವಿಕೆಟಿಗೆ 62 ರನ್ ಗಳಿಸಿತ್ತು.
ಶ್ರೇಯಸ್ ಗೋಪಾಲ್ ಸತತ ಮೂರು ಎಸೆತಗಳಲ್ಲಿ ಕೊಹ್ಲಿ, ಡಿ’ವಿಲಿಯರ್ ಮತ್ತು ಸ್ಟೋಯಿನಿಸ್ ಅವರ ವಿಕೆಟ್ ಹಾರಿಸಿ ಹ್ಯಾಟ್ರಿಕ್ ಸಾಧಿಸಿದ್ದರು. ಇದಕ್ಕುತ್ತರವಾಗಿ ರಾಜಸ್ಥಾನ್ ರಾಯಲ್ಸ್ ತಂಡವು 3.2 ಓವರ್ ತಲುಪಿದಾಗ ಮತ್ತೆ ಮಳೆ ಸುರಿಯಿತು. ಇದರಿಂದ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಈ ಹಂತದಲ್ಲಿ ರಾಜಸ್ಥಾನ್ ಒಂದು ವಿಕೆಟಿಗೆ 41 ರನ್ ಗಳಿಸಿತ್ತು.
ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮಳೆಯದೇ ಆಟ. ಟಾಸ್ ಗೆದ್ದು ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡರೂ ತುಸು ಹೊತ್ತಿನಲ್ಲೇ ಮಳೆ ಸುರಿಯಲಾರಂಭಿಸಿ ಆಟವನ್ನು ಮುಂದೂಡಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ