ದ್ವಿತೀಯ ಸುತ್ತಿಗೆ ಕಶ್ಯಪ್ ಪ್ರವೇಶ
Team Udayavani, Nov 14, 2018, 8:43 AM IST
ಕೌಲೂನ್: ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಪಾರುಪಳ್ಳಿ ಕಶ್ಯಪ್ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ನ ಮೊದಲ ಪಂದ್ಯದಲ್ಲಿ ಕಶ್ಯಪ್ ಥಾಯ್ಲೆಂಡ್ನ ಹು ಜೆನ್-ಹೊ ಅವರನ್ನು 21-7, 12-21, 21-18 ಗೇಮ್ಗಳಿಂದ ಸೋಲಿ ಸಿದರು. ಮೊದಲ ಗೇಮ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಶ್ಯಪ್ ಅವರು ಜೆನ್ ಹೊ ಅವರಿಗೆ ಹೆಚ್ಚಿನ ಅವಕಾಶ ನೀಡದೆ 21-7 ಅಂಕಗಳಿಂದ ಗೆದ್ದರು. 2ನೇ ಗೇಮ್ನಲ್ಲಿ ಹಿಡಿತ ಸಾಧಿಸಿಕೊಂಡ ಜೆನ್-ಹೊ ಸತತ ಅಂಕಗಳನ್ನು ಗಳಿಸಿ ಕಶ್ಯಪ್ಗೆ ಆಘಾತ ನೀಡಿದರು. ನಿರ್ಣಾಯಕ ಗೇಮ್ನಲ್ಲಿ ಎಚ್ಚರಿಕೆಯ ಆಟವಾಡಿದ ಕಶ್ಯಪ್ 3 ಅಂಕಗಳ ಅಂತರದಿಂದ ಜಯಿಸಿ ಮುಂದಿನ ಸುತ್ತಿಗೆ ಕಾಲಿಟ್ಟರು.
ಮಿಶ್ರ ಜೋಡಿಗೆ ಜಯ
ಮಿಶ್ರ ಡಬಲ್ಸ್ ವಿಭಾಗದ ಆರಂಭಿಕ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಅಶ್ವಿನಿ ಪೊನ್ನಪ್ಪ ಜೋಡಿ ಥಾಯ್ಲೆಂಡ್ನ ವಾಂಗ್ ಚಿನ್ ಲಿನ್-ಲೀ ಚೈನ್ ಸಿನ್ ವಿರುದ್ಧ 21-16, 19-21, 21-14 ಗೇಮ್ಗಳ ಅಂತರದಿಂದ ಜಯಿಸಿದೆ. ಆರಂಭಿಕ ಗೇಮ್ನಲ್ಲಿ ಅತ್ಯುತ್ತಮ ಆಟವಾಡಿದ ಭಾರತದ ಜೋಡಿ 2ನೇ ಗೇಮ್ನಲ್ಲಿ ಮುಗ್ಗರಿಸಿತು. ಆದರೆ ಅಂತಿಮ ಗೇಮ್ ಅನ್ನು 7 ಅಂಕಗಳ ಅಂತರದಿಂದ ತಮ್ಮದಾಗಿಸಿಕೊಂಡು ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟರು.
ಇಂದು ಸೈನಾ, ಸಿಂಧುಗೆ ಸವಾಲು
ವನಿತಾ ಸಿಂಗಲ್ಸ್ ವಿಭಾಗದ ಪಂದ್ಯಗಳು ಬುಧವಾರ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್ಗಳಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಭಾಗವಹಿಸಲಿದ್ದಾರೆ. ಸತತ ಟೂರ್ನಿಗಳಲ್ಲಿ ಮುಗ್ಗರಿಸುತ್ತಿರುವ ಸಿಂಧುಗೆ ಮತ್ತೂಮ್ಮೆ ಸವಾಲು ಎದುರಾಗಿದೆ. ಆರಂಭಿಕ ಪಂದ್ಯದಲ್ಲಿ ಸಿಂಧು ಥಾಯ್ಲೆಂಡ್ನ ನಿತ್ಚಾವೊನ್ ಜಿಂಡಾಪೊಲ್ ಅವರನ್ನು ಎದುರಿಸಲಿದ್ದಾರೆ. ಸೈನಾ ನೆಹ್ವಾಲ್ ಜಪಾನ್ನ ಅಕಾನೆ ಯಮಗುಚಿ ಅವರ ವಿರುದ್ಧ ಆಡಲಿದ್ದಾರೆ. ವನಿತಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ- ಸಿಕ್ಕಿ ಎನ್. ರೆಡ್ಡಿ ಮೊದಲ ಪಂದ್ಯ ಆಡಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪಾರುಪಳ್ಳಿ ಕಶ್ಯಪ್ ತನ್ನ 2ನೇ ಪಂದ್ಯದಲ್ಲಿ ಇಂಡೋನೇಶ್ಯದ ಆ್ಯಂತೋನಿ ಸಿನಿಸುಖ ಗಿಟ್ಟಿಂಗ್ ಅವರನ್ನು ಎದುರಿಸಿದರೆ, ಕೆ. ಶ್ರೀಕಾಂತ್ ಆರಂಭಿಕ ಪಂದ್ಯದಲ್ಲಿ ಆತಿಥೇಯ ನಾಡಿನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರ ವಿರುದ್ಧ ಆಡಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್. ಬಿ ಹಾಗೂ ಸಮೀರ್ ವರ್ಮ ಕೂಡ ಈ ಕೂಟದಲ್ಲಿ ಆಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ