ಕುಂಬ್ಳೆ , ಕ್ರಿಕೆಟಿಗರ ನಡುವೆ ಬಿರುಕಿಲ್ಲ?
Team Udayavani, May 31, 2017, 10:26 AM IST
ಮುಂಬಯಿ: ಭಾರತ ಕ್ರಿಕೆಟ್ ತಂಡದ ಆಟಗಾರರು ಮತ್ತು ಮುಖ್ಯ ಕೋಚ್ ಅನಿಲ್ ಕುಂಬ್ಳೆ ನಡುವೆ ಬಿರುಕಿದೆ, ಆಟಗಾರರು ಬಿಸಿಸಿಐಗೆ ದೂರು ನೀಡಿದ್ದಾರೆ ಎಂದು ವರದಿ ಯೊಂದು ಹೇಳಿತ್ತು. ಮತ್ತೂಂದು ವರದಿ ಪ್ರಕಾರ ಬಿರುಕಿಲ್ಲ, ಭಿನ್ನಮತವಿದೆ ಎಂದು ಹೇಳಲಾಗಿದೆ.
ಕುಂಬ್ಳೆ ಅತ್ಯಂತ ಬಿಗಿ ವರ್ತನೆ ಹೊಂದಿದ್ದಾರೆ. ಆಟಗಾರರಿಗೆ ಸ್ವಾತಂತ್ರ್ಯವನ್ನೇ ನೀಡುವುದಿಲ್ಲ. ಇದರಿಂದ ಹಿರಿಯ ಮತ್ತು ಕಿರಿಯ ಕ್ರಿಕೆಟಿಗರು ಅಸಮಾಧಾನಕ್ಕೊಳಗಾಗಿದ್ದಾರೆ. ಬಿಸಿಸಿಐ ಹೊಸ ಕೋಚ್ಗೆ ಅರ್ಜಿ ಆಹ್ವಾನಿಸಲು ಇದೂ ಒಂದು ಕಾರಣ ಎನ್ನಲಾಗಿತ್ತು. ಆದರೆ ಈ ವರದಿಯನ್ನು ಅಲ್ಲಗಳೆದಿರುವ ಕೆಲ ಮೂಲಗಳು, ಸಣ್ಣಪುಟ್ಟ ಭಿನ್ನಾಭಿಪ್ರಾಯವಿದೆ. ಹಾಗಂತ ಬಿರುಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಅನಿಲ್ ಕುಂಬ್ಳೆ ವಿರುದ್ಧ ಬಿಸಿಸಿಐ ಸಿಟ್ಟಾ ಗಿದೆ. ಅವರು ಸಣ್ಣಪುಟ್ಟ ವಿಚಾರಗಳಿಗೂ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ಬಳಿ ತೆರಳುತ್ತಾರೆ. ಇದು ತಮ್ಮ ಅಧಿಕಾರಕ್ಕೆ ಗೌರವವಿಲ್ಲದಂತೆ ಮಾಡಿದೆ ಎನ್ನುವುದು ಬಿಸಿಸಿಐ ನಿಲುವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ