“ಕುಂಬ್ಳೆ ಮುಂದುವರಿಯುವುದೇ ನಮ್ಮ ಬಯಕೆಯಾಗಿತ್ತು’
Team Udayavani, Dec 22, 2018, 11:11 AM IST
ವಿಶಾಖಪಟ್ಟಣ: “ಅನಿಲ್ ಕುಂಬ್ಳೆ ಅವರೇ ಟೀಮ್ ಇಂಡಿಯಾದ ಕೋಚ್ ಆಗಿ ಮುಂದುವರಿಯಬೇಕೆಂಬುದು ನಮ್ಮ ಬಯಕೆಯಾಗಿತ್ತು, ಆದರೆ ಅವರು ನಿವೃತ್ತಿಗೆ ಹೆಚ್ಚಿನ ಆಸಕ್ತಿ ತೋರಿದರು’ ಎಂಬುದಾಗಿ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ (ಸಿ.ಎ.ಸಿ.) ಸದಸ್ಯ, ಬ್ಯಾಟಿಂಗ್ ಲೆಜೆಂಡ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ “ಇಂಡಿಯಾ ಟುಡೇ ಸೌತ್ ಕಾನ್ಕ್ಲೇವ್’ ಸಮಾರಂಭದ ವೇಳೆ ಲಕ್ಷ್ಮಣ್ ಕಳೆದ ವರ್ಷದ ಕೋಚ್ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತಾಡಿದರು.
“ಕೊಹ್ಲಿ ಗೆರೆ ದಾಟಿದ್ದಾರೆ ಎಂದು ನನಗನಿಸದು. ಅನಿಲ್ ಕುಂಬ್ಳೆ ಅವರೇ ಭಾರತ ತಂಡದ ಕೋಚ್ ಆಗಿ ಮುಂದುವರಿಯಬೇಕು ಎಂದು ಸಿ.ಎ.ಸಿ. ಸದಸ್ಯರೆಲ್ಲರೂ ಬಯಸಿದ್ದರು. ಆದರೆ ಕುಂಬ್ಳೆ ಮಾತ್ರ ನಿವೃತ್ತಿಯೇ ಸರಿಯಾದ ಹೆಜ್ಜೆ ಎಂಬ ನಿರ್ಧಾರಕ್ಕೆ ಬಂದರು. ಇದೊಂದು ಕಹಿ ಅನುಭವವಾಗಿ ಉಳಿದಿದೆ’ ಎಂದು ಲಕ್ಷ್ಮಣ್ ಕಳೆದ ವರ್ಷದ ವಿದ್ಯಮಾನದ ಕುರಿತು ಹೇಳಿದರು.
ಲಕ್ಷ್ಮಣ್, ತೆಂಡುಲ್ಕರ್ ಮತ್ತು ಗಂಗೂಲಿ ಅವರನ್ನೊಳಗೊಂಡ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯೇ ಅನಿಲ್ ಕುಂಬ್ಳೆ ಅವರನ್ನು 2016ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್