ತವರಿನಲ್ಲಿ ಬೆಂಗಾಲ್ ವಾರಿಯರ್ ಗರ್ಜನೆ
Team Udayavani, Dec 22, 2018, 11:07 AM IST
ಕೋಲ್ಕತಾ: ಶುಕ್ರವಾರದಿಂದ ಮೊದಲ್ಗೊಂಡ ಕೋಲ್ಕತಾ ಚರಣದ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ ಗೆಲುವಿನ ಆರಂಭ ಕಂಡುಕೊಂಡಿದೆ. ತೀವ್ರ ಪೈಪೋಟಿಯಿಂದ ಕೂಡಿದ ಮೊದಲ ಮುಖಾಮುಖೀಯಲ್ಲಿ ಬೆಂಗಾಲ್ ವಾರಿಯರ್ 27-24 ಅಂಕಗಳ ಅಂತರದಿಂದ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿದೆ.
ಇದು ಪ್ರಸಕ್ತ ಕೂಟದಲ್ಲಿ ಬೆಂಗಾಲ್ ಸಾಧಿಸಿದ 9ನೇ ಗೆಲುವು. ಮಾತ್ರವಲ್ಲ ಒಟ್ಟಾರೆ ಅಂಕವನ್ನು 53 ಹೆಚ್ಚಿಸಿಕೊಂಡು ನಾಕೌಟ್ ಹಂತದ ಭರವಸೆಯನ್ನು ಹೆಚ್ಚಿಸಿಕೊಂಡಿತು. ಈಗಗಲೇ ಹೊರಬಿದ್ದ ತಮಿಳ್ಗೆ ಈ ಸೋಲು ಗಾಯದ ಮೇಲೆ ಬರೆ ಎಳೆಯಿತು.
“ನೇತಾಜಿ ಒಳಾಂಗಣ ಕ್ರೀಡಾಂ ಗಣ’ದಲ್ಲಿ ನಡೆದ ಪಂದ್ಯದಲ್ಲಿ ಜಾಂಗ್ ಕುನ್ ಲೀ (12 ಅಂಕ), ಮಣಿಂದರ್ ಸಿಂಗ್ (7 ಅಂಕ) ಬೆಂಗಾಲ್ ಪರ ರೈಡಿಂಗ್ನಲ್ಲಿ ಮಿಂಚಿದರು. ರಾಣಾ ಸಿಂಗ್ (4 ಅಂಕ)ಅದ್ಭುತ ಟ್ಯಾಕಲ್ ಮೂಲಕ ತಲೈವಾಸ್ಗೆ ಸುಸ್ತು ಹೊಡೆಸಿದರು.
ತಮಿಳ್ ತಲೈವಾಸ್ ಪರ ಕನ್ನಡಿಗ ಸುಕೇಶ್ ಹೆಗ್ಡೆ (9 ಅಂಕ) ಮಿಂಚಿನ ರೈಡಿಂಗ್ ಪ್ರದರ್ಶಿಸಿದರು. ಆದರೆ ರಕ್ಷಣಾ ವಿಭಾಗದ ಭಾರೀ ವೈಫಲ್ಯ ತಲೈವಾಸ್ ಆಘಾತ ಅನುಭವಿಸಿತು. ನಾಯಕ ಅಜಯ್ ಠಾಕೂರ್ (5 ಅಂಕ) ಹಾಗೂ ಅತುಲ್ (4 ಅಂಕ) ರೈಡಿಂಗ್ನಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸಿದರು. ದಿನದ ಮತ್ತೂಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್ 35-20ರಿಂದ ತೆಲುಗು ಟೈಟಾನ್ಸ್ಗೆ ಸೋಲುಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್