Mangaluru; ಅಖಿಲ ಭಾರತ ಚೆಸ್: ರಾಜ್ಯದ ಆಗಸ್ಟಿನ್ಗೆ ಪ್ರಶಸ್ತಿ
Team Udayavani, Oct 22, 2023, 11:40 PM IST
ಮಂಗಳೂರು: ದ.ಕ. ಚೆಸ್ ಅಸೋಸಿಯೇಶನ್ ಆಯೋಜಿಸಿದ ಅಖಿಲ ಭಾರತ ಫಿಡೆ ಶ್ರೇಯಾಂಕಿತರ ಚೆಸ್ ಪಂದ್ಯಾವಳಿಯಲ್ಲಿ ಕರ್ನಾಟಕದ ಆಗಸ್ಟಿನ್ ಅವರು ತಮಿಳುನಾಡಿನ ಐಎಂ ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ಸೋಲಿಸುವ ಮೂಲಕ ಅಗ್ರಸ್ಥಾನ ಗಳಿಸಿದರು.
ತೆಲಂಗಾಣದ ನಾಗಸಾಯಿ ಸಾರ್ಥಕ್ ಕರಣಮ್ ಅವರು ಮಹಾರಾಷ್ಟ್ರದ ಇಂದರ್ಜೀತ್ ಮಹೀಂದ್ರಕರ್ ವಿರುದ್ಧ ಸೋಲನು ಭವಿಸಿದರೆ, ಕೇರಳದ ಸಾರ್ಷ ಬೇಕರ್ ಅವರು ತಮಿಳುನಾಡಿನ ಕೆ. ರಾಹುಲ್ ಅವರಿಗೆ ಶರಣಾದರು.
ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಡಿಜಿಎಂ ಶ್ರೀಕಾಂತ್, ಮಂಗಳೂರು ಸಹಾಯಕ ಪೊಲೀಸ್ ಆಯುಕ್ತ ಪಿ.ಎ. ಹೆಗ್ಡೆ, ಮನಪಾ ವಿಪಕ್ಷ ನಾಯಕ ಪ್ರವೀಣಚಂದ್ರ ಆಳ್ವ, ಬೆಟ್ಟ ಜಯರಾಂ ಭಟ್, ಡಾ| ಅಮರಶ್ರೀ ಅಮರನಾಥ ಶೆಟ್ಟಿ, ಪ್ರಭಾಕರ ಶ್ರೀಯಾನ್, ವಿಜಯ ವಿಷ್ಣು ಮಯ್ಯ, ನಾರಾಯಣ ಎಲ್, ದ.ಕ. ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ, ಗೌರವಾಧ್ಯಕ್ಷ ಸುನಿಲ್ ಆಚಾರ್, ಪೂರ್ಣಿಮ ಆಳ್ವ, ವಾಣಿ ಪಣಿಕ್ಕರ್, ರಮ್ಯ ಎಸ್. ರೈ, ಸತ್ಯಪ್ರಸಾದ್ ಮೊದಲಾದವರಿದ್ದರು.