ಅನಾಮಿಕನೊಂದಿಗೆ ಎಂ.ಎಸ್. ಧೋನಿ ಲಗೇಜ್ ಅದಲು ಬದಲು
Team Udayavani, Dec 11, 2019, 3:57 PM IST
ಕೋಲ್ಕತ: ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಅತ್ಯಂತ ಅಪರೂಪದ ಘಟನೆ ಯೊಂದು ನಡೆದಿದೆ.
ಸೋಮವಾರ ಕೋಲ್ಕತ ನಿಲ್ದಾಣದಲ್ಲಿಳಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ, ವಿಚಿತ್ರ ಪ್ರಸಂಗ ಎದುರಿಸಿದ್ದರು.
ಧೋನಿಯ ಲಗೇಜ್ ಇನ್ನೊಬ್ಬ ಪ್ರಯಾಣಿಕನ ಕೈ ಸೇರಿತ್ತು. ಇನ್ನೊಬ್ಬ ಪ್ರಯಾಣಿಕನ ಲಗೇಜ್ ಧೋನಿ ಕೈ ಸೇರಿತ್ತು. ಇಬ್ಬರೂ ಲಗೇಜನ್ನು ಹಿಡಿದು ಹೊರ ನಡೆದಾಗಿತ್ತು. ಅಷ್ಟರಲ್ಲಿ ವಿಮಾನ ಯಾನ ಸಂಸ್ಥೆಗೆ ಎಡವಟ್ಟಾ ಗಿರುವುದು ಗೊತ್ತಾಗಿದೆ. ಅವರು ಕೂಡಲೇ ಇಬ್ಬರನ್ನೂ ಸಂಪರ್ಕಿಸಿ ಎಡವಟ್ಟನ್ನು ತಿಳಿಸಿದ್ದಾರೆ.
ಇಬ್ಬರ ಲಗೇಜ್ ತಡವಾಗಿ ಅವರ ಕೈಸೇರಿದೆ. ಈ ಘಟನೆಯಲ್ಲಿ ತನ್ನ ತಪ್ಪಿಲ್ಲ ಎಂದು ವಿಮಾನ ಯಾನ ಸಂಸ್ಥೆ ತಿಳಿಸಿದೆ. ಕೋಲ್ಕತ ವಿಮಾನ ನಿಲ್ದಾಣದ ಅಧಿಕಾರಿಗಳ ಕಣ್ತಪ್ಪಿನಿಂದ ಈ ಘಟನೆ ಸಂಭವಿಸಿರುವ ಶಂಕೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು
ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು
Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್ಗೆ ಬೆಂಬಲ ಎಂದ ನಾಯಕರು
Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ