ಮನ್ಪ್ರೀತ್, ಶ್ರೀಜೇಶ್ಗೆ ವಿಶ್ರಾಂತಿ
ಒಲಿಂಪಿಕ್ ಹಾಕಿ ಟೆಸ್ಟ್ ಸರಣಿ
Team Udayavani, Jul 26, 2019, 5:00 AM IST
ಹೊಸದಿಲ್ಲಿ: ಮುಂಬರುವ “ಒಲಿಂಪಿಕ್ ಟೆಸ್ಟ್ ಹಾಕಿ ಕೂಟ’ಕ್ಕೆ ಭಾರತ ತಂಡದ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಸೇರಿದಂತೆ 5 ಮಂದಿಗೆ ವಿಶ್ರಾಂತಿ ನೀಡಲಾಗಿದೆ. ಕೋಚ್ ಗ್ರಹಾಂ ರೀಡ್ ತಂಡವನ್ನು ಪ್ರಕಟಿಸುವ ವೇಳೆ ತಿಳಿಸಿದರು.
ಮನ್ಪ್ರೀತ್ ಸಿಂಗ್ ಅನು ಪಸ್ಥಿತಿಯಲ್ಲಿ ಹರ್ಮನ್ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆ ಸಲಿದ್ದಾರೆ. ಮನ್ದೀಪ್ ಸಿಂಗ್ ಅವರಿಗೆ ಉಪ ನಾಯಕತ್ವ ನೀಡಲಾಗಿದೆ. ರೂಪಿಂ ದರ್ ಪಾಲ್ ಸಿಂಗ್, ಬೀರೇಂದ್ರ ಲಾಕ್ರಾ, ಆಕಾಶ್ದೀಪ್ ಸಿಂಗ್ ವಿಶ್ರಾಂತಿ ಪಡೆದ ಇತರರು. ಈ ಪಂದ್ಯಾವಳಿ ಆಗಸ್ಟ್ 17ರಿಂದ 21ರ ವರೆಗೆ ನಡೆಯಲಿದೆ.
ಎಸ್.ವಿ. ಸುನೀಲ್ ವಾಪಸ್
ಕರ್ನಾಟಕದ ಅನುಭವಿ ಸ್ಟ್ರೈಕರ್ ಎಸ್.ವಿ. ಸುನೀಲ್ ತಮ್ಮ ಮೊಣಕಾಲಿನ ಸಮಸ್ಯೆಯಿಂದ ಸಂಪೂರ್ಣ ಗುಣಮು ಖರಾಗಿದ್ದು, ಮತ್ತೆ ತಂಡವನ್ನು ಸೇರಿ ಕೊಂಡಿದ್ದಾರೆ. ಗೋಲ್ ಕೀಪರ್ ಶ್ರೀಜೇಶ್ ಸ್ಥಾನಕ್ಕೆ ಯುವ ಆಟಗಾ ರರಾದ ಕೃಷ್ಣ ಬಹಾದ್ದೂರ್ ಪಾಠಕ್ ಮತ್ತು ಸೂರಜ್ ಕರ್ಕೆರ ಅವರನ್ನು ಆಯ್ಕೆ ಮಾಡಲಾಗಿದೆ.
ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಲು ಇದೊಂದು ಉತ್ತಮ ಅವಕಾಶ ಎಂಬುದು ರೀಡ್ ಅಭಿಪ್ರಾಯ. ಆಶಿಷ್ ಟೋಪ್ನೊ, ಶಮ್ಶೆàರ್ ಸಿಂಗ್ ಇದೇ ಮೊದಲ ಸಲ ಭಾರತ ತಂಡವನ್ನು ಪ್ರವೇಶಿಸಿದ್ದಾರೆ.
ಭಾರತ ಹಾಕಿ ತಂಡ
ಹರ್ಮನ್ಪ್ರೀತ್ ಸಿಂಗ್ (ನಾಯಕ), ಕೃಷ್ಣ ಬಹಾದ್ದೂರ್ ಪಾಠಕ್, ಸೂರಜ್ ಕರ್ಕೆರ, ಗುರ್ಜಿಂದರ್ ಸಿಂಗ್, ಕೊಥಜಿತ್ ಸಿಂಗ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮ, ವಿವೇಕ್ ಸಾಗರ್ ಪ್ರಕಾಶ್, ಜಸ್ಕರಣ್ ಸಿಂಗ್, ಮನ್ದೀಪ್ ಸಿಂಗ್, ಗುರುಸಾಹಿಬ್ಜೀತ್ ಸಿಂಗ್, ನೀಲಂ ಸಂಜೀಪ್, ಜರ್ಮನ್ಪ್ರೀತ್ ಸಿಂಗ್, ವರುಣ್ ಕುಮಾರ್, ಆಶಿಷ್ ಟೋಪ್ನೊ, ಎಸ್.ವಿ. ಸುನೀಲ್, ಗುರ್ಜಂತ್ ಸಿಂಗ್, ಶಮ್ಶೆàರ್ ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ