- Monday 16 Dec 2019
ಮನ್ಪ್ರೀತ್, ಶ್ರೀಜೇಶ್ಗೆ ವಿಶ್ರಾಂತಿ
ಒಲಿಂಪಿಕ್ ಹಾಕಿ ಟೆಸ್ಟ್ ಸರಣಿ
Team Udayavani, Jul 26, 2019, 5:00 AM IST
ಹೊಸದಿಲ್ಲಿ: ಮುಂಬರುವ “ಒಲಿಂಪಿಕ್ ಟೆಸ್ಟ್ ಹಾಕಿ ಕೂಟ’ಕ್ಕೆ ಭಾರತ ತಂಡದ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಸೇರಿದಂತೆ 5 ಮಂದಿಗೆ ವಿಶ್ರಾಂತಿ ನೀಡಲಾಗಿದೆ. ಕೋಚ್ ಗ್ರಹಾಂ ರೀಡ್ ತಂಡವನ್ನು ಪ್ರಕಟಿಸುವ ವೇಳೆ ತಿಳಿಸಿದರು.
ಮನ್ಪ್ರೀತ್ ಸಿಂಗ್ ಅನು ಪಸ್ಥಿತಿಯಲ್ಲಿ ಹರ್ಮನ್ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆ ಸಲಿದ್ದಾರೆ. ಮನ್ದೀಪ್ ಸಿಂಗ್ ಅವರಿಗೆ ಉಪ ನಾಯಕತ್ವ ನೀಡಲಾಗಿದೆ. ರೂಪಿಂ ದರ್ ಪಾಲ್ ಸಿಂಗ್, ಬೀರೇಂದ್ರ ಲಾಕ್ರಾ, ಆಕಾಶ್ದೀಪ್ ಸಿಂಗ್ ವಿಶ್ರಾಂತಿ ಪಡೆದ ಇತರರು. ಈ ಪಂದ್ಯಾವಳಿ ಆಗಸ್ಟ್ 17ರಿಂದ 21ರ ವರೆಗೆ ನಡೆಯಲಿದೆ.
ಎಸ್.ವಿ. ಸುನೀಲ್ ವಾಪಸ್
ಕರ್ನಾಟಕದ ಅನುಭವಿ ಸ್ಟ್ರೈಕರ್ ಎಸ್.ವಿ. ಸುನೀಲ್ ತಮ್ಮ ಮೊಣಕಾಲಿನ ಸಮಸ್ಯೆಯಿಂದ ಸಂಪೂರ್ಣ ಗುಣಮು ಖರಾಗಿದ್ದು, ಮತ್ತೆ ತಂಡವನ್ನು ಸೇರಿ ಕೊಂಡಿದ್ದಾರೆ. ಗೋಲ್ ಕೀಪರ್ ಶ್ರೀಜೇಶ್ ಸ್ಥಾನಕ್ಕೆ ಯುವ ಆಟಗಾ ರರಾದ ಕೃಷ್ಣ ಬಹಾದ್ದೂರ್ ಪಾಠಕ್ ಮತ್ತು ಸೂರಜ್ ಕರ್ಕೆರ ಅವರನ್ನು ಆಯ್ಕೆ ಮಾಡಲಾಗಿದೆ.
ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಲು ಇದೊಂದು ಉತ್ತಮ ಅವಕಾಶ ಎಂಬುದು ರೀಡ್ ಅಭಿಪ್ರಾಯ. ಆಶಿಷ್ ಟೋಪ್ನೊ, ಶಮ್ಶೆàರ್ ಸಿಂಗ್ ಇದೇ ಮೊದಲ ಸಲ ಭಾರತ ತಂಡವನ್ನು ಪ್ರವೇಶಿಸಿದ್ದಾರೆ.
ಭಾರತ ಹಾಕಿ ತಂಡ
ಹರ್ಮನ್ಪ್ರೀತ್ ಸಿಂಗ್ (ನಾಯಕ), ಕೃಷ್ಣ ಬಹಾದ್ದೂರ್ ಪಾಠಕ್, ಸೂರಜ್ ಕರ್ಕೆರ, ಗುರ್ಜಿಂದರ್ ಸಿಂಗ್, ಕೊಥಜಿತ್ ಸಿಂಗ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮ, ವಿವೇಕ್ ಸಾಗರ್ ಪ್ರಕಾಶ್, ಜಸ್ಕರಣ್ ಸಿಂಗ್, ಮನ್ದೀಪ್ ಸಿಂಗ್, ಗುರುಸಾಹಿಬ್ಜೀತ್ ಸಿಂಗ್, ನೀಲಂ ಸಂಜೀಪ್, ಜರ್ಮನ್ಪ್ರೀತ್ ಸಿಂಗ್, ವರುಣ್ ಕುಮಾರ್, ಆಶಿಷ್ ಟೋಪ್ನೊ, ಎಸ್.ವಿ. ಸುನೀಲ್, ಗುರ್ಜಂತ್ ಸಿಂಗ್, ಶಮ್ಶೆàರ್ ಸಿಂಗ್.
ಈ ವಿಭಾಗದಿಂದ ಇನ್ನಷ್ಟು
-
ಮುಂಬೈ: ಆಟದ ಬದ್ಧತೆಯಲ್ಲಿ ಕ್ರಿಕೆಟ್ ನ ವಿರಾಟ್ ಕೊಹ್ಲಿ ಮತ್ತು ಫುಟ್ ಬಾಲ್ ನ ಕ್ರಿಸ್ಟಿಯಾನೋ ರೊನಾಲ್ಡೋ ಸರಿಸಮಾನರು ಎಂದು ಕ್ರಿಕೆಟ್ ಲೆಜೆಂಡ್ ಬ್ರಿಯಾನ್ ಲಾರಾ...
-
ಕೋಲ್ಕತ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಡಿ.19ರಂದು ಆಟಗಾರರ ಹರಾಜು ನಡೆಯಲಿದೆ. ಒಟ್ಟಾರೆ 332 ಕ್ರಿಕೆಟಿಗರು ಹರಾಜಿನಲ್ಲಿದ್ದಾರೆ....
-
ನವದೆಹಲಿ: ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್ .ರಾಹುಲ್ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ...
-
ಪರ್ತ್: ಇಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ 296 ರನ್ನುಗಳ ಭಾರೀ ಅಂತರದಿಂದ ನ್ಯೂಜಿಲ್ಯಾಂಡನ್ನು ಮಣಿಸಿದೆ. ಇದರೊಂದಿಗೆ ಆಡಿದ...
-
ಟೋಕಿಯೊ: ಇನ್ನು 7 ತಿಂಗಳಲ್ಲಿ ಜರಗಲಿರುವ 2020ರ ಟೋಕಿಯೊ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದ, 60 ಸಾವಿರ ಆಸನ ಸಾಮರ್ಥ್ಯದ ನ್ಯೂ ನ್ಯಾಶನಲ್ ಒಲಿಂಪಿಕ್ ಕ್ರೀಡಾಂಗಣವನ್ನು...
ಹೊಸ ಸೇರ್ಪಡೆ
-
ಮಂಗಳೂರು: ದೆಹಲಿಯಲ್ಲಿ ಜಾಮಿಮಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ...
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾನುವಾರ ಸಂಜೆ ಜಾಮೀಯಾ ಮಿಲ್ಲಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳ ಹಿಂಸಾಚಾರದ ಟ್ವೀಟ್ ಗೆ ಬಾಲಿವುಡ್ ಸ್ಟಾರ್...
-
ನವದೆಹಲಿ: ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜಾಗತಿಕ ಗಮನ ಸೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ), ಇದೀಗ ಮತ್ತೂಂದು...
-
ಗೌಹಾತಿ: ಪೌರತ್ವ ಹಕ್ಕು ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಸ್ಸಾಂ ರಾಜಧಾನಿ ಗೌಹಾತಿ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಪ್ರತಿಭಟನೆಯ ಬಿಸಿ ನಿಧಾನವಾಗಿ...
-
ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇನ್ನು ನಾಲ್ಕು ತಿಂಗಳೊಳಗೆ ಆಕಾಶದೆತ್ತರದಷ್ಟು ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್...