ಸುಶೀಲ್- ಪ್ರವೀಣ್ ನಡುವೆ ಕದನ
Team Udayavani, Jan 10, 2018, 1:14 PM IST
ನವದೆಹಲಿ: ಒಲಿಂಪಿಕ್ಸ್ನಲ್ಲಿ ಒಂದು ಬೆಳ್ಳಿ, ಒಂದು ಕಂಚು ಗೆದ್ದಿರುವ ಕುಸ್ತಿತಾರೆ ಸುಶೀಲ್ ಕುಮಾರ್ ಮತ್ತು ಕಾಮನ್ ವೆಲ್ತ್ ಚಿನ್ನ ವಿಜೇತ ಪ್ರವೀಣ್ ರಾಣಾ ನಡುವೆ ರೋಚಕ ಕುಸ್ತಿಪಂದ್ಯವೊಂದಕ್ಕೆ ವೇದಿಕೆ ನಿರ್ಮಾಣವಾಗಿದೆ. ಜ.9ರಿಂದ 24ರವರೆಗೆ ನಡೆಯಲಿರುವ ಪ್ರೊ ಕುಸ್ತಿ ಲೀಗ್ನಲ್ಲಿ ಈ ಪಂದ್ಯ ನಡೆಯಲಿದೆ. ಇದಕ್ಕೆ ಯಾಕೆ ಇಷ್ಟು ಮಹತ್ವವೆಂಬ ಪ್ರಶ್ನೆಯೆ? ಈ ಇಬ್ಬರ ನಡುವೆ ಇತ್ತೀಚೆಗಷ್ಟೆ ಭಾರೀ ಗಲಾಟೆಯಾಗಿತ್ತು. ಒಬ್ಬರು ಇನ್ನೊಬ್ಬರ ಮೇಲೆ ಆಕ್ರೋಶದ ಕಿಡಿಗಳನ್ನು ಹಾರಿಸಿದ್ದರು.
ಪ್ರವೀಣ್ ರಾಣಾ ಒಂದು ಹೆಜ್ಜೆ ಮುಂದೆ ಹೋಗಿ, ಕ್ಯಾನ್ಸರ್ ಪೀಡಿತ ತನ್ನ ತಾಯಿಗಾಗಿ ಸುಶೀಲ್ ಕುಮಾರ್ರನ್ನು ಸೋಲಿಸಿಯೇ ತೀರುತ್ತೇನೆಂದು ಶಪಥ ಮಾಡಿದ್ದರು. ಇದಕ್ಕೆಲ್ಲ ಕಾರಣವೂ ಇದೆ. ಇತ್ತೀಚೆಗಷ್ಟೇ ಈ ವರ್ಷದ ಕಾಮನ್ವೆಲ್ತ್ ಗೇಮ್ಸ್ಗೆ ಅರ್ಹತಾ ಕುಸ್ತಿ ಪಂದ್ಯ ನಡೆದಿತ್ತು. ಆ ವೇಳೆ ಪ್ರವೀಣ್ ರಾಣಾರನ್ನು ಸುಶೀಲ್ ಕುಮಾರ್ ಸೋಲಿಸಿದ್ದರು. ಪಂದ್ಯ ಮುಗಿದ ನಂತರ ಸುಶೀಲ್ ಕುಮಾರ್ ಬೆಂಬಲಿಗರು ಪ್ರವೀಣ್ ರಾಣಾ ಮೇಲೆ ಹಲ್ಲೆ ನಡೆಸಿದ್ದರು. ಆಗ ಪ್ರತಿಕ್ರಿಯಿಸಿದ್ದ ಸುಶೀಲ್, ತಾನು ತಪ್ಪಿತಸ್ಥ ಎಂದು ಸಾಬೀತುಪಡಿಸಿದರೆ ಕುಸ್ತಿಯಿಂದಲೇ ನಿವೃತ್ತನಾಗುವುದಾಗಿ ತಿಳಿಸಿದ್ದರು. ಇದಕ್ಕೆ ಪ್ರವೀಣ್ ರಾಣಾ ಉತ್ತರಿಸಿ, ತನ್ನ ತಾಯಿಗೆ ಸುಶೀಲ್ ಬೆಂಬಲಿಗರು ತನ್ನ ಮೇಲೆ ಹಲ್ಲೆ ನಡೆಸಿರುವುದು ನೋವು ತರಿಸಿದೆ. ಆಕೆ ಕ್ಯಾನ್ಸರ್ ಪೀಡಿತೆ. ಅಂತಹ ತಾಯಿ ನೊಂದುಕೊಂಡಿರುವುದರಿಂದ ಸುಶೀಲ್ ಕುಮಾರ್ರನ್ನು ಸೋಲಿಸಿಯೇ ತೀರುತ್ತೇನೆಂದು ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಪ್ರಸ್ತುತ ಪ್ರೊ ಕುಸ್ತಿ ಲೀಗ್ ಪಂದ್ಯ ಭಾರೀ ಮಹತ್ವ ಪಡೆದುಕೊಂಡಿದೆ. ಜ.21ರಂದು ಸುಶೀಲ್ ಅವರ ಡೆಲ್ಲಿ ಸುಲ್ತಾನ್ಸ್ ಮತ್ತು ರಾಣಾ ಅವರ ವೀರ್ ಮರಾಠಾಸ್ ನಡುವೆ ದೆಹಲಿಯಲ್ಲಿಯೇ ಪಂದ್ಯ ನಡೆಯಲಿದೆ. ಆಗ ತೀವ್ರ ಕದನ ಕುತೂಹಲವನ್ನು ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ