ಪ್ಲೇ ಆಫ್: ಒಂದು ಸ್ಥಾನಕ್ಕೆ ನಾಲ್ಕು ತಂಡಗಳ ರೇಸ್‌


Team Udayavani, Oct 5, 2021, 5:50 AM IST

ಪ್ಲೇ ಆಫ್: ಒಂದು ಸ್ಥಾನಕ್ಕೆ ನಾಲ್ಕು ತಂಡಗಳ ರೇಸ್‌

ಎಂಟು ಲೀಗ್‌ ಪಂದ್ಯಗಳು ಬಾಕಿ ಇರುವಾಗಲೇ 3 ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿರುವುದು 2021ನೇ ಐಪಿಎಲ್‌ ವೈಶಿಷ್ಟ್ಯ. ಚೆನ್ನೈ, ಡೆಲ್ಲಿ ಮತ್ತು ಬೆಂಗಳೂರು ಈ ಅದೃಷ್ಟಶಾಲಿಗಳು. ಹಾಗೆಯೇ ಒಂದು ತಂಡ ಕೂಟದಿಂದ ಹೊರಬಿದ್ದೂ ಆಗಿದೆ. ಈ ಸಂಕಟಕ್ಕೆ ಸಿಲುಕಿದ ತಂಡ ಹೈದರಾಬಾದ್‌. ಉಳಿದ ನಾಲ್ಕರಲ್ಲಿ ಒಂದು ತಂಡಕ್ಕಷ್ಟೇ ಪ್ಲೇ ಆಫ್ ಬಾಗಿಲು ತೆರೆಯಲಿದೆ. ಈ ಲಕ್ಕಿ ಟೀಮ್‌ ಯಾವುದಿರಬಹುದು, ಯಾರಿಗೆಷ್ಟು ಅವಕಾಶ ಲಭಿಸೀತು ಎಂಬ ಲೆಕ್ಕಾಚಾರ ಇಲ್ಲಿದೆ.

ಕೋಲ್ಕತಾ ನೈಟ್‌ರೈಡರ್:
13 ಪಂದ್ಯ, 12 ಅಂಕ
ನಾಲ್ಕರಲ್ಲಿ ಅತೀ ಹೆಚ್ಚಿನ ಅವಕಾಶ ಹೊಂದಿರುವ ತಂಡ ಕೆಕೆಆರ್‌. ಅದು 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಈ ಸ್ಥಾನ ಫಿಕ್ಸ್‌ ಆಗಬೇಕಾದರೆ ಉಳಿದ ಏಕಮಾತ್ರ ಪಂದ್ಯದಲ್ಲಿ ರಾಜಸ್ಥಾನ್‌ಗೆ ಸೋಲುಣಿಸಬೇಕಿದೆ. ಮಾರ್ಗನ್‌ಬಳಗ ರನ್‌ರೇಟ್‌ ಬಗ್ಗೆ ತಲೆ ಕೆಡಿಸಿಕೊಳ್ಳುವ ಯಾವ ಅಗತ್ಯವೂ ಇಲ್ಲ. ಉಳಿದೆಲ್ಲ ತಂಡಗಳು ಮೈನಸ್‌ನಲ್ಲಿದ್ದರೆ, ಕೆಕೆಆರ್‌ ಮಾತ್ರ ಪ್ಲಸ್‌ನಲ್ಲಿರುವುದೊಂದು ಪ್ಲಸ್‌ ಪಾಯಿಂಟ್‌. ಹೀಗಾಗಿ ಕೆಕೆಆರ್‌ ಸಣ್ಣ ಮಾರ್ಜಿನ್‌ನಲ್ಲಿ ಗೆದ್ದರೂ ಸಾಕು, ಪ್ಲೇ ಆಫ್ಪ್ರವೇಶಿಸಲಿದೆ.

ರಾಜಸ್ಥಾನ್‌ ರಾಯಲ್ಸ್‌:
12 ಪಂದ್ಯ, 10 ಅಂಕ
ರಾಜಸ್ಥಾನ್‌ ರಾಯಲ್ಸ್‌ ಕಳೆದ ಪಂದ್ಯದಲ್ಲಿ ಚೆನ್ನೈಯನ್ನು ಸೋಲಿಸುವ ಮೂಲಕ ರೇಸ್‌ನಲ್ಲಿ ಉಳಿದುಕೊಂಡಿದೆ. ಅದು 10 ಅಂಕ ಹೊಂದಿದ್ದು, ಇನ್ನೂ 2 ಪಂದ್ಯಗಳನ್ನು ಆಡಬೇಕಿದೆ. ಮುಂಬೈ ಮತ್ತು ಕೆಕೆಆರ್‌ ಎದುರಾಳಿಗಳು. ಈ ತಂಡಗಳೂ ಪ್ಲೇ ಆಫ್ ರೇಸ್‌ನಲ್ಲಿರುವುದರಿಂದ ಹೋರಾಟ ತೀವ್ರಗೊಳ್ಳಲಿದೆ. ಎರಡನ್ನೂ ಗೆದ್ದರೆ ಸ್ಯಾಮ್ಸನ್‌ ಬಳಗಕ್ಕೆ ಪ್ಲೇ ಆಫ್ ಬಾಗಿಲು ತೆರೆಯಲಿದೆ. ಅಕಸ್ಮಾತ್‌ ಅದು ಮುಂಬೈಗೆ ಶರಣಾದರೂ ಬಚಾವಾದೀತು, ಆದರೆ ಕೆಕೆಆರ್‌ ವಿರುದ್ಧ ಸೋಲಬಾರದು!

ಇದನ್ನೂ ಓದಿ:ಟಿ20 ವಿಶ್ವಕಪ್‌: ಶೇ. 70 ವೀಕ್ಷಕರಿಗೆ ಅವಕಾಶ

ಮುಂಬೈ ಇಂಡಿಯನ್ಸ್‌:
12 ಪಂದ್ಯ, 10 ಅಂಕ
ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಉಳಿದೆಲ್ಲ ತಂಡಗಳಿಗಿಂತ ಕೆಳ ಮಟ್ಟದಲ್ಲಿದೆ. ಆದರೆ ರಾಜಸ್ಥಾನದಂತೆ 2 ಪಂದ್ಯಗಳನ್ನು ಆಡುವ ಅವಕಾಶ ಹೊಂದಿದೆ. ಇದರಲ್ಲಿ ಒಂದು ಪಂದ್ಯವನ್ನು ರಾಜಸ್ಥಾನ್‌ ವಿರುದ್ಧವೇ ಆಡಬೇಕಿದೆ. ಇದನ್ನು ಗೆಲ್ಲುವುದು ಅತ್ಯಗತ್ಯ. ಇನ್ನೊಂದು ಎದುರಾಳಿ ಹೈದರಾಬಾದ್‌. ಎರಡನ್ನೂ ಗೆದ್ದರೆ ಅಂಕ 14ಕ್ಕೆ ಏರಲಿದೆ. ಆದರೆ ಅದು ರಾಜಸ್ಥಾನ್‌ ವಿರುದ್ಧ ಕೆಕೆಆರ್‌ನ ಸೋಲನ್ನು ಹಾರೈಸಬೇಕಿದೆ. ಹಾಗೆಯೇ ರನ್‌ರೇಟನ್ನೂ ಹೆಚ್ಚಿಸಿಕೊಳ್ಳಬೇಕಿದೆ.

ಪಂಜಾಬ್‌ ಕಿಂಗ್ಸ್‌:
13 ಪಂದ್ಯ, 10 ಅಂಕ
ಈ 4ರಲ್ಲಿ ಅತ್ಯಂತ ಕಠಿನ ಮಾರ್ಗದಲ್ಲಿ ಸಂಚರಿಸಬೇಕಿ ರುವ ತಂಡವೆಂದರೆ ಪಂಜಾಬ್‌ ಕಿಂಗ್ಸ್‌. ಅದು ಈಗಾಗಲೇ ಬಹುತೇಕ ನಿರ್ಗಮಿಸಿದೆ. ಆದರೂ ಕ್ಷೀಣ ಅವಕಾಶ ಇದೆ. ಅಂತಿಮ ಪಂದ್ಯದಲ್ಲಿ ಚೆನ್ನೈಯನ್ನು ಸೋಲಿಸುವ ಜತೆಗೇ ಉಳಿದ ಪಂದ್ಯಗಳ ಫ‌ಲಿತಾಂಶವನ್ನೂ ನಂಬಿ ಕೂರಬೇಕಿದೆ. ಇದೊಂದು ಜಿಗುಟು ಲೆಕ್ಕಾಚಾರ. ಮುಂಬೈ ರಾಜಸ್ಥಾನವನ್ನು ಮಣಿಸಬೇಕು, ರಾಜಸ್ಥಾನ್‌ ಕೋಲ್ಕತಾವನ್ನು ಸೋಲಿಸಬೇಕು, ಜತೆಗೆ ಮುಂಬೈಯನ್ನು ಹೈದರಾಬಾದ್‌ ಪರಾಭ ವಗೊಳಿಸಬೇಕು. ಆಗಷ್ಟೇ ಪಂಜಾಬ್‌ “ಕಿಂಗ್‌’ ಎನಿಸಲಿದೆ!

ಟಾಪ್ ನ್ಯೂಸ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.