ಪ್ರೊ ಕಬಡ್ಡಿ: ಬೆಂಗಾಲ್-ಗುಜರಾತ್ ಪಂದ್ಯ ಟೈ
ಆತಿಥೇಯರ ಸೋಲು ತಪ್ಪಿಸಿದ ರೈಡರ್ ಮಣಿಂದರ್
Team Udayavani, Sep 7, 2019, 9:43 PM IST
ಕೋಲ್ಕತ: ಕೊನೆಯ ನಿಮಿಷದಲ್ಲಿ ರೈಡಿಂಗ್ನಿಂದ ಮಣಿಂದರ್ ಸಿಂಗ್ (9 ಅಂಕ) ತಂದ ಎರಡು ಅಮೂಲ್ಯ ಅಂಕಗಳಿಂದಾಗಿ ಆತಿಥೇಯ ಬೆಂಗಾಲ್ ವಾರಿಯರ್ ತಂಡವು ಗುಜರಾತ್ ಫಾರ್ಚೂನ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 25-25 ಅಂಕಗಳ ರೋಚಕ ಟೈ ಸಾಧಿಸಿತು.
ಶನಿವಾರ ಪ್ರೊ ಕಬಡ್ಡಿ ಕೋಲ್ಕತ ಚರಣ ಆರಂಭದ ಮೊದಲ ದಿನದ ಪಂದ್ಯವಾಗಿತ್ತು. ಈ ಪಂದ್ಯದ ಆರಂಭದಿಂದಲೂ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಕೊನೆಯ ಕ್ಷಣದ ವರೆಗೆ ಈ ಹೋರಾಟ ಸಾಗಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿತ್ತು. ಪಂದ್ಯ ಮುಗಿಯಲು 1 ನಿಮಿಷ ಬಾಕಿ ಇದ್ದಾಗ ಗುಜರಾತ್ 25-23 ಅಂಕಗಳಿಂದ ಮುಂದಿತ್ತು. ಇನ್ನೇನು ಗೆಲುವು ಸಾಧಿಸಿಯೇ ಬಿಟ್ಟೆವು ಎನ್ನುವುದು ಗುಜರಾತ್ ಆತ್ಮವಿಶ್ವಾಸವಾಗಿತ್ತು. ಆದರೆ ಆತಿಥೇಯ ತಂಡದ ಮಣಿಂದರ್ ಶಾಕ್ ನೀಡಿದರು. ಅವರು ಸುನಿಲ್ ಕುಮಾರ್ ಹಾಗೂ ಪರ್ವೇಶ್ ಅವರನ್ನು ಔಟ್ ಮಾಡಿ ಬೆಂಗಾಲ್ ರೋಚಕ ಟೈ ಸಾಧಿಸುವಂತೆ ಮಾಡಿದರು. ಬೆಂಗಾಲ್ ಅಭಿಮಾನಿಗಳು ಕುಣಿದಾಡಿದರು.
ಬೆಂಗಾಲ್ ಪರ ಕೆ.ಪ್ರಪಂಜನ್ (4 ಅಂಕ) ಹಾಗೂ ಮೊಹಮ್ಮದ್ ನಬಿಭಕ್Ò (3 ಅಂಕ) ತಂದರು.
ಗುಜರಾತ್ ಪ್ರಬಲ ಸ್ಪರ್ಧೆ ನಡುವೆಯೂ ಮಂಡಿಯೂರಿತು. ರೈಡರ್ ಸಚಿನ್ (6 ಅಂಕ), ಸೋನು (6 ಅಂಕ) ಹಾಗೂ ಬದಲಿ ಆಟಗಾರನಾಗಿ ಕಣಕ್ಕಿಳಿದ ರೋಹಿತ್ ಗುಲಿಯಾ (5 ಅಂಕ) ತಂಡದ ಗೆಲುವಿಗಾಗಿ ಅವಿರತ ಶ್ರಮಿಸಿದರೂ ಫಾರ್ಚೂನ್ಜೈಂಟ್ಸ್ಗೆ ಗೆಲುವು ಒಲಿಯಲಿಲ್ಲ. ಪರ್ವೇಶ್ (1 ಅಂಕ) ಹಾಗೂ ಜಿ.ಬಿ.ಮೋರೆ (1 ಅಂಕ) ರಕ್ಷಣಾ ವಿಭಾಗದಲ್ಲಿ ಕಳಪೆ ಆಟ ನಿರ್ವಹಿಸಿದ್ದರಿಂದ ಗುಜರಾತ್ ಹಿನ್ನಡೆ ಅನುಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ