ಬೆಂಗಾಲ್‌ಗೆ ಬೋನಸ್‌ ಗೆಲುವು


Team Udayavani, Oct 2, 2017, 6:15 AM IST

PTI10_1_2017_000239B.jpg

ಚೆನ್ನೈ: ರವಿವಾರ ಸಾಗಿದ ರೋಚಕ ಪ್ರೊ ಕಬಡ್ಡಿ ಸೆಣಸಾಟದಲ್ಲಿ ಮಣಿಂದರ್‌ ಸಿಂಗ್‌ ಅವರ ಅದ್ಭುತ ಆಟ ದಿಂದ ಬೆಂಗಾಲ್‌ ವಾರಿಯರ್ ತಂಡ ಜೈಪುರ ಪಿಂಕ್‌ ಪ್ಯಾಂಥರ್ ತಂಡವನ್ನು 32-31 ಅಂಕಗಳಿಂದ ಸೋಲಿಸಿತು. ಮಣಿಂದರ್‌ ಅಂತಿಮ ರೈಡ್‌ನ‌ಲ್ಲಿ ಔಟಾದರೂ ಬೋನಸ್‌ ಅಂಕ ಗಳಿಸಿದ್ದರಿಂದ ಬೆಂಗಾಲ್‌ ಗೆಲುವಿನ ನಗೆ ಚೆಲ್ಲಿತು.

ಇಲ್ಲಿನ ಜವಹಾರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಣಸಾಟದಲ್ಲಿ ಎರಡೂ ತಂಡ ಗಳು ಗೆಲುವಿಗಾಗಿ ಶಕ್ತಿಮೀರಿ ಹೋರಾಡಿದವು. ಪಂದ್ಯ ಮುಗಿಯಲು ಒಂದು ನಿಮಿಷವಿರುವಾಗ ತುಷಾರ್‌ ಔಟ್‌ ಆದರು. ಇದರಿಂದ ಬೆಂಗಾಲ್‌ 31-30ರಿಂದ ಮುನ್ನಡೆ ಸಾಧಿಸಿತು. ಅಂತಿಮ ರೈಡ್‌ನ‌ಲ್ಲಿ ಮಣಿಂದರ್‌ ಅವರನ್ನು ಜೈಪುರ ಆಟಗಾರರು ಹಿಡಿದರೂ ಬೋನಸ್‌ ಅಂಕದ ಆಧಾರದಲ್ಲಿ ತೃತೀಯ ಅಂಪಾಯರ್‌ ಬೆಂಗಾಲ್‌ 32-31ರಿಂದ ಗೆಲುವು ಸಾಧಿಸಿದೆ ಎಂದು ಘೋಷಿಸಿದರು.

ಮಣಿಂದರ್‌ ಒಟ್ಟು 16 ಅಂಕ ಗಳಿಸಿ ಗೆಲುವಿನ ರೂವಾರಿ ಯಾಗಿ ಕಾಣಿಸಿಕೊಂಡರು. ಜೈಪುರದ ಪವನ್‌ ಕುಮಾರ್‌ 13 ಅಂಕ ಮತ್ತು ತುಷಾರ್‌ ಪಾಟೀಲ್‌ 6 ಅಂಕ ಗಳಿಸಿದರು.ಈ  ಗೆಲುವಿನಿಂದ ಬೆಂಗಾಲ್‌ 19 ಪಂದ್ಯಗಳಲ್ಲಿ 9ನೇ ಗೆಲುವು ದಾಖಲಿಸಿ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆ ಯಾಗುವುದನ್ನು ಖಚಿತಪಡಿಸಿತು. ಬೆಂಗಾಲ್‌ “ಬಿ’ ವಲಯ ದಲ್ಲಿ 2ನೇ ಸ್ಥಾನದಲ್ಲಿದೆ.

ಈ  ಪಂದ್ಯದಲ್ಲಿ ರೋಚಕ ಸೋಲು ಕಂಡರೂ ಜೈಪುರಕ್ಕೆ ಮುನ್ನಡೆಯುವ ಅವಕಾಶವಿದೆ. ಜೈಪುರ ಈವರೆಗೆ 15 ಪಂದ್ಯವನ್ನಾಡಿದೆ. ಇನ್ನು ಅದು ತವರಿನಲ್ಲಿ ಆಡುವ ಅವಕಾಶ ಹೊಂದಿದೆ. ತವರಿನಲ್ಲಿ ಗರಿಷ್ಠ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗಬಹುದು.

ಸಾಗಿತು ಸಮಬಲದ ಹೋರಾಟ
ಮೊದಲ ರೈಡ್‌ನ‌ಲ್ಲಿಯೇ ಪವನ್‌ ಕುಮಾರ್‌ ಜೈಪುರಕ್ಕೆ ಅಂಕ ತಂದುಕೊಟ್ಟರು. ಬೆಂಗಾಲ್‌ನ ಫೇವರಿಟ್‌ ರೈಡರ್‌ ಮಣಿಂದರ್‌ ತನ್ನ ಎರಡನೇ ಪ್ರಯತ್ನದಲ್ಲಿ ತಂಡದ ಅಂಕ ಖಾತೆ ತೆರೆದರು. 8ನೇ ನಿಮಿಷದಲ್ಲಿ ತುಷಾರ್‌ ಪಾಟೀಲ್‌ ಸೂಪರ್‌ ರೈಡ್‌ ಮೂಲಕ ಮೂರಂಕ ಗಳಿಸಿದ್ದರಿಂದ ಜೈಪುರ ಮೇಲುಗೈ ಸಾಧಿಸಿತು. ಮೊದಲ 13 ನಿಮಿಷ ಮುಗಿದಾಗ ಜೈಪುರ 9-6 ರಿಂದ ಮುನ್ನಡೆಯಲ್ಲಿತ್ತು.  ಆಬಳಿಕ ಎರಡೂ ತಂಡಗಳು ಸಮಬಲದ ಹೋರಾಟ ನೀಡುತ್ತ ಬಂದ ಕಾರಣ ಮೊದಲ ಅವಧಿಯ ಆಟ ಮುಗಿದಾಗ ಜೈಪುರ ಒಂದಂಕದ (12-11) ಮುನ್ನಡೆಯಲ್ಲಿತ್ತು.

ದ್ವಿತೀಯ ಅವಧಿ ಆರಂಭವಾಗಿ ಮೂರನೇ ನಿಮಿಷದಲ್ಲಿ ಬೆಂಗಾಲ್‌ ಆಲೌಟಾಯಿತು. ಬಳಿಕ ಮಣಿಂದರ್‌ ಮಿಂಚಿ ನಾಟ ಆಡಿ ಕೆಲವು ಅಂಕ ಗಳಿಸಿದ್ದರಿಂದ ಅಂಕ 20-21ರ ಸನಿಹಕ್ಕೆ  ಬಂದಿತ್ತು. ಅಂತಿಮ 7 ನಿಮಿಷವಿರುವಾಗ ಅಂಕ 22-22ರಿಂದ ಸಮಬಲಗೊಂಡಿತ್ತು. ಪಂದ್ಯ ಮುಗಿಯಲು 2 ನಿಮಿಷವಿರುವಾಗ ಜೈಪುರ ಆಲೌಟಾಯಿತು. ಇದರಿಂದ ಬೆಂಗಾಲ್‌ 29-30 ಅಂಕ ಗಳಿಸುವಂತಾಯಿತು. 

– ಶಂಕರನಾರಾಯಣ ಪಿ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.