ಪ್ರೊ ಕಬಡ್ಡಿ: “ಬಿ’ ವಲಯದಲ್ಲಿ ತೀವ್ರ ಪೈಪೋಟಿ


Team Udayavani, Dec 11, 2018, 6:00 AM IST

d-135.jpg

ವಿಶಾಖಪಟ್ಟಣ: ಕಳೆದ ಎರಡು ತಿಂಗಳಿಂದ ವಿವಿಧ ತಾಣಗಳಲ್ಲಿ ಸಾಗುತ್ತಿರುವ ಪ್ರೊ ಕಬಡ್ಡಿ ಆರನೇ ಆವೃತ್ತಿ ಅಂತಿಮ ಹಂತದತ್ತ ಸಾಗುತ್ತಿದೆ. ಇಷ್ಟರವರೆಗೆ 105 ಪಂದ್ಯಗಳು ಮುಗಿದಿದ್ದು ಲೀಗ್‌ ಹಂತದಲ್ಲಿ ಇನ್ನು ಕೇವಲ 27 ಪಂದ್ಯಗಳು ನಡೆಯಲಿವೆ. “ಎ’ ಬಣದಲ್ಲಿ ಯು ಮುಂಬಾ ಮತ್ತು ಕಳೆದ ಬಾರಿಯ ಫೈನಲಿಸ್ಟ್‌ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 70 ಪ್ಲಸ್‌ ಅಂಕ ಗಳಿಸುವ ಮೂಲಕ ಪ್ಲೇ ಆಫ್ಗೇರುವುದನ್ನು ಖಚಿತಪಡಿಸಿದೆ. ಆದರೆ “ಬಿ’ ಬಣದಲ್ಲಿ ಇಷ್ಟರ ವರೆಗೆ ಯಾವುದೇ ತಂಡ ಪ್ಲೇ ಆಫ್ಗೆ ತೇರ್ಗಡೆಯಾಗುವುದನ್ನು ಖಚಿತಪಡಿಸಿಲ್ಲ.

ಪ್ರತಿಯೊಂದು ತಂಡವೂ ಲೀಗ್‌ ಹಂತದಲ್ಲಿ 22 ಪಂದ್ಯಗಳನ್ನು ಆಡಬೇಕಾಗಿದೆ. ಹೆಚ್ಚಿನೆಲ್ಲ ತಂಡಗಳಿಗೆ ಇನ್ನು ನಾಲ್ಕು ಅಥವಾ ಐದು ಪಂದ್ಯಗಳು ಬಾಕಿ ಉಳಿದಿವೆ. ಹಾಗಾಗಿ ಮಂಗಳವಾರದಿಂದ ನಡೆಯುವ ಪ್ರತಿಯೊಂದು ಪಂದ್ಯವೂ ತೀವ್ರ ಸೆಣಸಾಟದಿಂದ ಸಾಗುವ ನಿರೀಕ್ಷೆಯಿದೆ. ಮಂಗಳವಾರದ ಮೊದಲ ಪಂದ್ಯದಲ್ಲಿ ಸದ್ಯ “ಎ’ ಬಣದಲ್ಲಿ ಅಗ್ರಸ್ಥಾನದಲ್ಲಿರುವ ಯು ಮುಂಬಾ ತಂಡವು ಮೂರನೇ ಸ್ಥಾನಿ ದಬಾಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳಿಗೆ ಇನ್ನು ಮೂರು ಪಂದ್ಯ ಬಾಕಿ ಉಳಿದಿದೆ. 77 ಅಂಕ ಹೊಂದಿರುವ ಯು ಮುಂಬಾ ತಂಡ ಅಗ್ರಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ಗೆಲುವು ಸಾಧಿಸಲು ಗರಿಷ್ಠ ಪ್ರಯತ್ನ ನಡೆಸಲಿದೆ. ಯಾಕೆಂದರೆ ವಲಯದ ಅಗ್ರಸ್ಥಾನ ಪಡೆದ ತಂಡ ಪ್ಲೇ ಆಫ್ನ ಪಂದ್ಯದಲ್ಲಿ ಗೆದ್ದರೆ ನೇರ ಫೈನಲಿಗೇರುವ ಅವಕಾಶವಿದೆ. ಇದೇ ವೇಳೆ ಸದ್ಯ 19 ಪಂದ್ಯಗಳಿಂದ 60 ಅಂಕ ಗಳಿಸಿರುವ ದಬಾಂಗ್‌ ಡೆಲ್ಲಿ ತಂಡ ಮೂರನೇ ತಂಡವಾಗಿ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆಯಿದೆ. ಯಾಕೆಂದರೆ ಬಣದ ನಾಲ್ಕನೇ ಸ್ಥಾನಿ ಪುನೇರಿ ಪಲ್ಟಾನ್ಸ್‌ ಕೇವಲ 47 ಅಂಕ ಹೊಂದಿದೆ ಮತ್ತು ಅದಕ್ಕೆ ಕೇವಲ 2 ಪಂದ್ಯ ಬಾಕಿ ಉಳಿದಿವೆ.

“ಬಿ” ವಲಯ 
“ಎ” ವಲಯವನ್ನು ಗಮನಿಸಿದರೆ “ಬಿ’ ವಲಯದಲ್ಲಿ ಎಲ್ಲ ತಂಡಗಳು ಬಲಿಷ್ಠವಾಗಿವೆೆ. ಇಷ್ಟರ ವರೆಗೆ ಯಾವುದೇ ತಂಡ ಪ್ಲೇ ಆಫ್ಗೆ ತೇರ್ಗಡೆಯಾಗಿರುವುದನ್ನು ಖಚಿತಪಡಿಸಿಲ್ಲ. ಸದ್ಯ ಆಡಿದ 17 ಪಂದ್ಯಗಳಿಂದ 59 ಅಂಕ ಪಡೆದಿರುವ ಬೆಂಗಳೂರು ಬುಲ್ಸ್‌ ಅಗ್ರಸ್ಥಾನದಲ್ಲಿದ್ದರೆ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವು 51 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ತೆಲುಗು ಟೈಟಾನ್ಸ್‌ ಮೂರನೇ ಮತ್ತು ಬೆಂಗಾಲ್‌ ವಾರಿಯರ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಈ ನಾಲ್ಕು ತಂಡಗಳಿಗೆ ಪ್ಲೇ ಆಫ್ಗೆ ತೇರ್ಗಡೆಯಾಗಲು ಉಜ್ವಲ ಅವಕಾಶವಿದೆ. ಮಾತ್ರವಲ್ಲದೇ ವಲಯದ ಅಗ್ರಸ್ಥಾನ ಪಡೆಯಲು ಎಲ್ಲ ನಾಲ್ಕು ತಂಡಗಳು ತೀವ್ರ ಪೈಪೋಟಿ ನಡೆಸುವುದು ಗ್ಯಾರಂಟಿ. ಈ ನಾಲ್ಕು ಬಲಿಷ್ಠ ತಂಡಗಳಲ್ಲಿ ಒಂದು ತಂಡ ಹೊರಬೀಳಲೇ ಬೇಕಾಗಿದೆ. ಯಾವ ತಂಡವೆಂಬುದು ಕಾದು ನೋಡಬೇಕಾಗಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.