ಹೊಸ ವರ್ಷದಲ್ಲಿ ಲಯ ಕಾಣುವರೇ ಸಿಂಧು?
Team Udayavani, Jan 7, 2020, 7:20 AM IST
ಕೌಲಾಲಂಪುರ: ಕಳೆದ ವರ್ಷದ ಪ್ರತಿಷ್ಠಿತ ಟೂರ್ನಿಗಳಲ್ಲಿ ಸತತವಾಗಿ ಸೋಲಿನ ಪ್ರದರ್ಶನ ನೀಡಿ ಬೇಸತ್ತಿರುವ ಪಿ.ವಿ. ಸಿಂಧು ವರ್ಷಾರಂಭದ ಮಲೇಶ್ಯ ಬ್ಯಾಡ್ಮಿಂಟನ್ ಟೂರ್ನಿಗೆ ಅಣಿಯಾಗಿದ್ದಾರೆ. ಇದು ಮಂಗಳ ವಾರದಿಂದ ಕೌಲಾಲಂಪುರದಲ್ಲಿ ಆರಂಭವಾಗಲಿದ್ದು, 2019ರ ಕಹಿಯನ್ನು ಮರೆಯುವ ಪ್ರದರ್ಶನ ನೀಡುವಲ್ಲಿ ಸಿಂಧು ಯಶಸ್ವಿಯಾಗುವರೇ ಎಂಬುದು ಭಾರತದ ಕ್ರೀಡಾಭಿಮಾನಿಗಳ ನಿರೀಕ್ಷೆ.
ಮಂಗಳವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 6ನೇ ರ್ಯಾಂಕಿಂಗ್ ಆಟಗಾರ್ತಿ ಸಿಂಧು ಎದುರಾಳಿ ರಶ್ಯದ ಎವೆYàನಿಯಾ ಕೊಸೆಟ್ಸ್ಕಾಯಾ. ಗೆಲುವಿನ ಓಟ ಮುಂದುವರಿಸಿದರೆ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ್ತಿ ತೈ ಜು ಯಿಂಗ್ ಎದುರಾಗುವ ಸಾಧ್ಯತೆ ಇದೆ.
ಬಾಸೆಲ್ನಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಿರೀಟ ಏರಿಸಿಕೊಂಡ ಸಿಂಧೂ, ಅನಂತರ ಇದೇ ಜೋಶ್ ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಟೋಕಿಯೊ ಒಲಿಂಪಿಕ್ಸ್ಗೆ ಇನ್ನೂ ಕೇವಲ 7 ತಿಂಗಳು ಬಾಕಿ ಇರುವುದರಿಂದ ಸಿಂಧೂ ಪಾಲಿಗೆ ಈ ಟೂರ್ನಿ ಮಹತ್ವದ್ದಾಗಿದ್ದು, ಕಳಪೆ ಫಾರ್ಮ್ನಿಂದ ಹೊರಬರಲು ಉತ್ತಮ ಅವಕಾಶವಾಗಿದೆ.
ಭಾರತದ ದೊಡ್ಡ ದಂಡು
ಭಾರತದ ಮತ್ತೋರ್ವ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಕಣದಲ್ಲಿದ್ದಾರೆ. ಸೈನಾ ಕೂಡ ಕಳೆದ ವರ್ಷ ಇಂಡೋನೇಶ್ಯ ಮಾಸ್ಟರ್ ಪ್ರಶಸ್ತಿ ಎತ್ತಿದ ಬಳಿಕ ಮಂಕಾಗುತ್ತ ಹೋಗಿದ್ದರು. ಇಲ್ಲಿ ಕ್ವಾಲಿಫೈಯರ್ ಆಟಗಾರ್ತಿಯನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.
ಉಳಿದಂತೆ ಕೆ. ಶ್ರೀಕಾಂತ್, ಪಿ. ಕಶ್ಯಪ್, ಬಿ. ಸಾಯಿ ಪ್ರಣೀತ್, ಸೌರಭ್ ವರ್ಮ, ಪುರುಷರ ಡಬಲ್ಸ್ ವಿಭಾಗದ ಭರವಸೆಯ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ -ಚಿರಾಗ್ ಶೆಟ್ಟಿ, ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಕೂಡ ವರ್ಷಾರಂಭದ ಟೂರ್ನಿಯಲ್ಲಿ ಗೆಲುವನ್ನು ಎದುರು ನೋಡುತ್ತಿದ್ದಾರೆ.
ಕಶ್ಯಪ್ ವರ್ಸಸ್ ಮೊಮೊಟ
ಪಿ. ಕಶ್ಯಪ್ ವಿಶ್ವದ ಅಗ್ರಮಾನ್ಯ ಆಟಗಾರ ಕೆಂಟೊ ಮೊಮೊಟ ಅವರನ್ನು ಮೊದಲ ಸುತ್ತಿನಲ್ಲೇ ಎದುರು ಹಾಕಿಕೊಳ್ಳಬೇಕಿದೆ. ಎಚ್.ಎಸ್. ಪ್ರಣಯ್ ಜಪಾನಿನ ಮತ್ತೂಬ್ಬ ಆಟಗಾರ ಕಾಂಟ ತ್ಸುನೆಯಾಮ ವಿರುದ್ಧ ಆಡಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ಗಾಗಿ ತಯಾರಿ ನಡೆಸಲು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಿಂದ ಹೊರಗುಳಿದಿರುವ ಕೆ. ಶ್ರೀಕಾಂತ್ 2ನೇ ಶ್ರೇಯಾಂಕದ ಚೊ ಟೀನ್ ಚೆನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಸಾಯಿ ಪ್ರಣೀತ್ ಅವರ ಎದುರಾಳಿ ಡೆನ್ಮಾರ್ಕ್ನ ರಾಸ್ಮಸ್ ಜಿಮೆR. ಸಮೀರ್ ವರ್ಮ ಥಾಯ್ಲೆಂಡ್ನ ಪಂಟಫೊನ್ ವಾಂಗ್ಚರೋನ್ ಅವರನ್ನು ಎದುರಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ