ರೋಜರ್ ಕಪ್‌ ಟೆನಿಸ್‌: ರಫೆಲ್‌ ನಡಾಲ್‌, ಬಿಯಾಂಕಾ ಚಾಂಪಿಯನ್ಸ್‌

ಡ್ಯಾನಿಲ್‌ ಮೆಡ್ವಡೇವ್‌ಗೆ 3-6, 0-6 ಆಘಾತ ; ಬೆನ್ನಿನ ಸೆಳೆತದಿಂದ ಪಂದ್ಯ ತ್ಯಜಿಸಿದ ಸೆರೆನಾ ವಿಲಿಯಮ್ಸ್‌

Team Udayavani, Aug 13, 2019, 5:55 AM IST

NADAL

ಮಾಂಟ್ರಿಯಲ್‌/ಟೊರಂಟೊ: ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿದ ರಫೆಲ್‌ ನಡಾಲ್‌ ಮಾಂಟ್ರಿಯಲ್‌ನಲ್ಲಿ ನಡೆದ “ರೋಜರ್ ಕಪ್‌’ ಟೆನಿಸ್‌ ಕೂಟದ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

6-3, 6-0 ಸೆಟ್‌ಗಳಿಂದ ಜಯಭೇರಿ ಬಾರಿಸಿದ ನಡಾಲ್‌ ತನ್ನ “ಮಾಸ್ಟರ್ 1000′ ಪ್ರಶಸ್ತಿ ಗೆಲುವಿನ ದಾಖಲೆಯನ್ನು 35ಕ್ಕೆ ಏರಿಸಿದರು. ಇದು ವಿಶ್ವ ನಂ.1 ನೊವಾಕ್‌ ಜೊಕೋವಿಕ್‌ ಸಾಧನೆಗಿಂತ ಎರಡು ಹೆಚ್ಚು. ಜೊಕೋವಿಕ್‌ 33 ಬಾರಿ ಮಾಸ್ಟರ್ ಪ್ರಶಸ್ತಿ ಜಯಿಸಿದ್ದಾರೆ. ನಡಾಲ್‌ ಮಾಸ್ಟರ್ ಕೂಟದ ಪ್ರಶಸ್ತಿಯನ್ನು ಸತತ 2ನೇ ಬಾರಿ ಉಳಿಸಿಕೊಂಡಿರುವುದು ಇದೇ ಮೊದಲ ಸಲವಾಗಿದೆ.

ಉತ್ತಮ ನಿರ್ವಹಣೆಯ ಮೂಲಕ ಪಂದ್ಯ ಆರಂಭಿಸುವುದು ಅತೀ ಮುಖ್ಯ ಎಂದು 18 ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತ ನಡಾಲ್‌ ಹೇಳಿದರು.

“ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಕಳೆದ ವಾರ ಬಹಳಷ್ಟು ಪಂದ್ಯಗಳನ್ನು ಆಡಿದ್ದರು’ ಎಂದು ಎದುರಾಳಿ ಮೆಡ್ವಡೇವ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಮೆಡ್ವಡೇವ್‌ ಕಳೆದ ವಾರ ವಾಷಿಂಗ್ಟನ್‌ನ ಕೂಟದ ಫೈನಲ್‌ನಲ್ಲಿ ನಿಕ್‌ ಕಿರ್ಗಿಯೋಸ್‌ಗೆ ಶರಣಾಗಿದ್ದರು.

ಯುಎಸ್‌ ಓಪನ್‌ಗೆ ಪೂರ್ವಭಾವಿಯಾಗಿ ತನ್ನ ಸಿದ್ಧತೆ ಆರಂಭಿಸಿದ ಬಳಿಕ ನಡಾಲ್‌ ಕೇವಲ 3 ಹಾರ್ಡ್‌ಕೋರ್ಟ್‌ ಪಂದ್ಯಗಳನ್ನು ಆಡಿದ್ದರು. ಇಲ್ಲಿ ಸೆಮಿಫೈನಲ್‌ನಲ್ಲಿ ಅವರಿಗೆ ವಾಕ್‌ ಓವರ್‌ ಲಭಿಸಿತ್ತು.

ತವರಿನ ಸಾಧಕಿ ಆ್ಯಂಡ್ರಿಸ್ಕಾ ಬಿಯಾಂಕಾ
ಬೆನ್ನಿನ ಸೆಳೆತದಿಂದಾಗಿ ಸೆರೆನಾ ವಿಲಿಯಮ್ಸ್‌ ಡಬ್ಲ್ಯುಟಿಎ ಟೊರಂಟೊ ಟೆನಿಸ್‌ ಕೂಟದ ಫೈನಲ್‌ನಲ್ಲಿ ಕೇವಲ 4 ಗೇಮ್‌ ಆಡಿದ ಬಳಿಕ ಪಂದ್ಯ ತ್ಯಜಿಸಬೇಕಾಯಿತು. ಇದರಿಂದ ತವರಿನ ಆ್ಯಂಡ್ರಿಸ್ಕಾ ಬಿಯಾಂಕಾ ಮೊದಲ ಬಾರಿಗೆ ಪ್ರಶಸ್ತಿಯನ್ನೆತ್ತಿದ ಹೆಗ್ಗಳಿಕೆಗೆ ಪಾತ್ರರಾದರು.

ಫೈನಲ್‌ ಹೋರಾಟದಲ್ಲಿ 1-3 ಹಿನ್ನೆಡೆಯಲ್ಲಿದ್ದಾಗ ಸೆರೆನಾ ವೈದ್ಯಕೀಯ ಟೈಮ್‌ಔಟ್‌ ಪಡೆದುಕೊಂಡರು. ಆದರೆ ಒಂದು ನಿಮಿಷದ ಒಳಗಾಗಿ ಅಂಪಾಯರ್‌ ಸೆರೆನಾ ಪಂದ್ಯ ತ್ಯಜಿಸಿದ್ದಾರೆ‌ಂದು ಪ್ರಕಟಿಸಿದರು. ಹೀಗಾಗಿ ಸೆರೆನಾ ಅವರ ಫೈನಲ್‌ ಎದುರಾಳಿ ತವರಿನ 19ರ ಹರೆಯದ ಬಿಯಾಂಕಾ ಆ್ಯಂಡ್ರಿಸ್ಕಾ ಪ್ರಶಸ್ತಿ ಗೆದ್ದರು. ಇದು ಆ್ಯಂಡ್ರಿಸ್ಕಾ ಅವರ ವರ್ಷದ 2ನೇ ಪ್ರಶಸ್ತಿಯಾಗಿದೆ.

ನೋವಿನಿಂದಾಗಿ ಪೂರ್ತಿ ಫೈನಲ್‌ ಆಡುವುದು ಕಷ್ಟವೆಂದು ತಿಳಿದಿತ್ತು ಎಂದು ಪಂದ್ಯದ ಬಳಿಕ ಸೆರೆನಾ ನುಡಿದಿದ್ದಾರೆ.ಪಂದ್ಯ ನಿಂತ ಬಳಿಕ ಸೆರೆನಾ ಹತ್ತಿರ ತೆರಳಿದ ಆ್ಯಂಡ್ರಿಸ್ಕಾ, ಅವರನ್ನು ಆಲಂಗಿಸಿಕೊಂಡು ಭರವಸೆಯ ಮಾತು ಗಳನ್ನಾಡಿದರು. ಈ ವೇಳೆ ಸೆರೆನಾ ದುಃಖ ತಡೆಯಲಾಗದೇ ಕಣ್ಣೀರಿಟ್ಟರು. “ಕ್ಷಮಿಸಿ… ನನ್ನಿಂದ ಇವತ್ತು ಆಡಲು ಸಾಧ್ಯವಾಗಲಿಲ್ಲ’ ಎಂದು ಪ್ರೇಕ್ಷಕರತ್ತ ನೋಡುತ್ತ ಹೇಳಿದರು.

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.