ಲಂಕಾ ನೆರವಿಗೆ ಸಂಗಕ್ಕರ ಧಾವಿಸಲಿ: ಗಂಗೂಲಿ
Team Udayavani, Aug 29, 2017, 12:34 PM IST
ಕೋಲ್ಕತಾ: ಶ್ರೀಲಂಕಾದ ಕ್ರಿಕೆಟ್ ಅವಸ್ಥೆಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾರ್ಗೋ ಪಾಯವೊಂದನ್ನು ಸೂಚಿಸಿದ್ದಾರೆ. ದ್ವೀಪ ರಾಷ್ಟ್ರದ ಮಹಾನ್ ಬ್ಯಾಟ್ಸ್ಮನ್ ಕುಮಾರ ಸಂಗಕ್ಕರ ತಮ್ಮ ನಿವೃತ್ತಿಯಿಂದ ಹಿಂದೆ ಸರಿದು ತಂಡದ ನೆರವಿಗೆ ನಿಲ್ಲಲಿ ಎಂದಿದ್ದಾರೆ.
“ಶ್ರೀಲಂಕಾದ ಇಂದಿನ ಕ್ರಿಕೆಟ್ ಸಂಕಟಕ್ಕೆ ಅಲ್ಲಿನ ಮಂಡಳಿ ಕೂಡಲೇ ಪರಿಹಾರ ವೊಂದನ್ನು ಒದಗಿಸಬೇಕಿದೆ. ಎವರ್
ಗ್ರೀನ್ ಬ್ಯಾಟಿಂಗ್ ಹೀರೋ ಕುಮಾರ ಸಂಗಕ್ಕರ ಅವರಲ್ಲಿ ನಿವೃತ್ತಿ ಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿ, ಕನಿಷ್ಠ ಒಂದು ವರ್ಷದ ಮಟ್ಟಿಗೆ ಅವರನ್ನು ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡುವಂತೆ ಮನ ಒಲಿಸಲಿ’ ಎಂದು ಸೌರವ್ ಗಂಗೂಲಿ ಸಲಹೆಯೊಂದನ್ನು ಮಾಡಿದ್ದಾರೆ. ಇಂಗ್ಲಿಷ್ ಕೌಂಟಿಯಲ್ಲಿ ಶತಕದ ಮೇಲೆ ಶತಕ ಬಾರಿಸುತ್ತಿರುವುದು ಸಂಗಕ್ಕರ ಅವರ ಪ್ರಚಂಡ ಬ್ಯಾಟಿಂಗ್ ಫಾರ್ಮ್ಗೆ ಸಾಕ್ಷಿಯಾಗಿದೆ.
2017ರ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡು ತ್ತಿರುವ ಶ್ರೀಲಂಕಾ ತಂಡ, ಜಿಂಬಾಬ್ವೆ ವಿರುದ್ಧ ತವರಿನಲ್ಲೇ ಮುಖಭಂಗ ಆನುಭವಿಸಿತ್ತು. ಭಾರತದ ವಿರುದ್ಧವೂ ಶೋಚನೀಯ ಪ್ರದರ್ಶನ ಮುಂದು ವರಿದಿದೆ. ಉಳಿದೆರಡು ಪಂದ್ಯಗಳನ್ನು ಗೆದ್ದರಷ್ಟೇ ಲಂಕಾ ವಿಶ್ವಕಪ್ಗೆ ನೇರ ಪ್ರವೇಶ ಪಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್