ಏಕದಿನ ಕ್ರಿಕೆಟ್‌ಗೆ ಮಲಿಕ್‌ ವಿದಾಯ

20 ವರ್ಷಗಳ ಸುದೀರ್ಘ‌ ಏಕದಿನ ಬಾಳ್ವೆ ಅಂತ್ಯ

Team Udayavani, Jul 7, 2019, 5:05 AM IST

malik

ಲಂಡನ್‌: ಪಾಕಿಸ್ಥಾನ ಕ್ರಿಕೆಟ್‌ ತಂಡದ ಯಶಸ್ವಿ ಆಲ್‌ರೌಂಡರ್‌ ಶೋಯಿಬ್‌ ಮಲಿಕ್‌ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಶುಕ್ರವಾರ ನಡೆದ ವಿಶ್ವಕಪ್‌ ಕ್ರಿಕೆಟ್‌ ಕೂಟದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನ 94 ರನ್ನುಗಳ ಗೆಲುವು ಸಾಧಿಸಿದ ಬಳಿಕ ಮಲಿಕ್‌ ತನ್ನ 20 ವರ್ಷಗಳ ಸುದೀರ್ಘ‌ ಬಾಳ್ವೆಯಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸಿದರು. 37ರ ಹರೆಯದ ಮಲಿಕ್‌ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಆಡಿಲ್ಲ. ಆದರೂ ಗೆಲುವಿನ ಸಂಭ್ರಮದ ಬಳಿಕ ಮೈದಾನ ತೊರೆಯುವ ವೇಳೆ ಪಾಕಿಸ್ಥಾನದ ಎಲ್ಲ ಆಟಗಾರರು ನಿಂತು ಗೌರವ ಸಲ್ಲಿಸಿದರು.

“ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವೆ ಎಂದು ಈ ಹಿಂದೆ ಹೇಳಿದ್ದೆ. ನಿವೃತ್ತಿ ಪ್ರಕಟಿಸಲು ನಾನಿಲ್ಲಿ ಇದ್ದೇನೆ. ನನ್ನನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಕೃತಜ್ಞತೆಗಳು. ಅವರೆಲ್ಲರನ್ನು ಇಷ್ಟಪಡುತ್ತೇನೆ’ ಎಂದು ಮಲಿಕ್‌ ಹೇಳಿದರು.

1999ರಲ್ಲಿ ಪದಾರ್ಪಣೆ
1999ರಲ್ಲಿ ವೆಸ್ಟ್‌ ಇಂಡೀಸ್‌ ತಂಡದೆದುರು ಆಡುವ ಮೂಲಕ ಶೋಯಿಬ್‌ ಮಲಿಕ್‌ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದಿದ್ದರು. ಈವರೆಗೆ 287 ಪಂದ್ಯಗಳನ್ನು ಆಡಿರುವ ಅವರು 9 ಶತಕ ಮತ್ತು 44 ಅರ್ಧ ಶತಕ ಸಹಿತ 7,534 ರನ್‌ ಪೇರಿಸಿದ್ದಾರೆ. ಆಲ್‌ರೌಂಡರ್‌ ಕೂಡ ಆಗಿರುವ ಅವರು 158 ವಿಕೆಟ್‌ ಉರುಳಿಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಮಲಿಕ್‌ 35 ಟೆಸ್ಟ್‌ ಪಂದ್ಯಗಳನ್ನಾಡಿದ್ದು 1,898 ರನ್‌ ಗಳಿಸಿದ್ದಾರೆ. 3 ಶತಕ ಮತ್ತು 8 ಅರ್ಧ ಶತಕ ಬಾರಿಸಿದ್ದಾರೆ. 111 ಟಿ20 ಪಂದ್ಯ ಆಡಿದ್ದು, 7 ಅರ್ಧ ಶತಕ ಸಹಿತ 2,263 ರನ್‌ ಗಳಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪಾಕಿಸ್ಥಾನದ ಉಸ್ತುವಾರಿ ನಾಯಕನಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.

ಶೋಯಿಬ್‌ ಮಲಿಕ್‌ ನಿವೃತ್ತಿಯ ನಿರ್ಧಾರ ಪ್ರಕಟಿಸಿದೊಡನೆ ಹಾಲಿ-ಮಾಜಿ ಕ್ರಿಕೆಟಿಗರನೇಕರು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ. ಅವರ ಏಕದಿನ ಸಾಧನೆಯನ್ನು ಕೊಂಡಾಡಿದ್ದಾರೆ.

ಗೌರವಯುತ ಆಟ: ಸಾನಿಯಾ ಟ್ವೀಟ್‌
“ಪ್ರತಿಯೊಂದು ಕತೆಗೂ ಅಂತ್ಯವಿದೆ. ಆದರೆ ಜೀವನದಲ್ಲಿ ಪ್ರತಿ ಯೊಂದು ಅಂತ್ಯವೂ ಹೊಸ ಆರಂಭವಾಗಿರುತ್ತದೆ. ನೀವು ನಿಮ್ಮ ದೇಶದ ಪರ 20 ವರ್ಷಗಳ ಸುದೀರ್ಘ‌ ಅವಧಿಯವರೆಗೆ ಗೌರವಯುತವಾಗಿ ಆಡಿದ್ದೀರಿ ಮತ್ತು ಆ ಗೌರವವನ್ನು ಮುಂದುವ ರಿಸಲಿದ್ದೀರಿ. ಕ್ರೀಡಾ ರಂಗದಲ್ಲಿ ನಿಮ್ಮ ಸಾಧನೆಯಿಂದ ನನಗೆ ಮತ್ತು ಇಝಾನ್‌ಗೆ ಹೆಮ್ಮೆ ಯಾಗುತ್ತಿದೆ’ ಎಂದು ಮಲಿಕ್‌ ಅವರ ಪತ್ನಿ, ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಟ್ವೀಟ್‌ ಮಾಡಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌: ಪಾಕಿಸ್ಥಾನ-ಬಾಂಗ್ಲಾದೇಶ
– 2014ರ ಬಳಿಕ ಪಾಕಿಸ್ಥಾನ ಮೊದಲ ಸಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿತು. ಪಾಕ್‌ ಕೊನೆಯ ಸಲ ಜಯಿಸಿದ್ದು 2014ರ ಏಶ್ಯ ಕಪ್‌ ಪಂದ್ಯಾವಳಿಯಲ್ಲಿ. ಇದು ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಪಾಕಿಗೆ ಒಲಿದ ಮೊದಲ ಜಯವೂ ಹೌದು.

– ಶಾಹೀನ್‌ ಅಫ್ರಿದಿ ವಿಶ್ವಕಪ್‌ ಪಂದ್ಯದಲ್ಲಿ 5 ಪ್ಲಸ್‌ ವಿಕೆಟ್‌ ಕಿತ್ತ ಅತೀ ಕಿರಿಯ ಬೌಲರ್‌ (19 ವರ್ಷ, 90 ದಿನ). ಈ ದಾಖಲೆ ಕೀನ್ಯಾದ ಕಾಲಿನ್ಸ್‌ ಒಬುಯ ಹೆಸರಲ್ಲಿತ್ತು. 2003ರಲ್ಲಿ ಶ್ರೀಲಂಕಾ ವಿರುದ್ಧ ಒಬುಯ 21 ವರ್ಷ, 212ನೇ ದಿನದಲ್ಲಿ ಈ ಸಾಧನೆಗೈದಿದ್ದರು. ಅಫ್ರಿದಿ ಏಕದಿನದಲ್ಲಿ 6 ವಿಕೆಟ್‌ ಉರುಳಿಸಿದ
4ನೇ ಕಿರಿಯ ಬೌಲರ್‌.

– ಅಫ್ರಿದಿ ಕೇವಲ 5 ಪಂದ್ಯಗಳಿಂದ 16 ವಿಕೆಟ್‌ ಕಿತ್ತರು. ಇದರೊಂದಿಗೆ ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಕಿರಿಯ ಬೌಲರ್‌ ಎನಿಸಿದರು. ಹಿಂದಿನ ದಾಖಲೆ ಅಬ್ದುಲ್‌ ರಜಾಕ್‌ ಹೆಸರಲ್ಲಿತ್ತು. 1999ರಲ್ಲಿ, 19ರ ಹರೆಯದಲ್ಲಿ ಅವರು 13 ವಿಕೆಟ್‌ ಉರುಳಿಸಿದ್ದರು.

– ಶಾಹೀನ್‌ ಅಫ್ರಿದಿ ವಿಶ್ವಕಪ್‌ನಲ್ಲಿ 6 ವಿಕೆಟ್‌ ಕಿತ್ತ ಪಾಕಿಸ್ಥಾನದ ಮೊದಲ ಬೌಲರ್‌. 2011ರಲ್ಲಿ ಕೀನ್ಯಾ ವಿರುದ್ಧ ಶಾಹಿದ್‌ ಅಫ್ರಿದಿ 16ಕ್ಕೆ 5 ವಿಕೆಟ್‌ ಉರುಳಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.

– ಶಕಿಬ್‌ ಅಲ್‌ ಹಸನ್‌ ವಿಶ್ವಕಪ್‌ ಗ್ರೂಪ್‌ ಹಂತದಲ್ಲಿ 600 ರನ್‌ ಬಾರಿಸಿದ ಮೊದಲ ಕ್ರಿಕೆಟಿಗ. 2003ರಲ್ಲಿ ಸಚಿನ್‌ ತೆಂಡುಲ್ಕರ್‌ 586 ರನ್‌ ಹೊಡೆದದ್ದು
ಹಿಂದಿನ ದಾಖಲೆ.

– ಇಮಾಮ್‌ ಉಲ್‌ ಹಕ್‌ ವಿಶ್ವಕಪ್‌ನಲ್ಲಿ ಶತಕ ಹೊಡೆದ ಪಾಕಿಸ್ಥಾನದ ಕಿರಿಯ ಕ್ರಿಕೆಟಿಗ (23 ವರ್ಷ, 205 ದಿನ). 1987ರಲ್ಲಿ ಶ್ರೀಲಂಕಾ ವಿರುದ್ಧ ಸಲೀಂ ಮಲಿಕ್‌ 24 ವರ್ಷ, 192ನೇ ದಿನದಲ್ಲಿ ಸೆಂಚುರಿ ಬಾರಿಸಿದ್ದು
ಹಿಂದಿನ ದಾಖಲೆ.

– ಬಾಬರ್‌ ಆಜಂ ವಿಶ್ವಕಪ್‌ ಕೂಟವೊಂದರಲ್ಲಿ ಅತ್ಯಧಿಕ ರನ್‌ ಬಾರಿಸಿದ ಪಾಕಿಸ್ಥಾನಿ ಆಟಗಾರ (8 ಇನ್ನಿಂಗ್ಸ್‌, 474). 1992ರಲ್ಲಿ ಜಾವೇದ್‌ ಮಿಯಾಂದಾದ್‌ 9 ಇನ್ನಿಂಗ್ಸ್‌ಗಳಿಂದ 437 ರನ್‌ ಹೊಡೆದ ದಾಖಲೆ ಪತನಗೊಂಡಿತು.

– ಮುಸ್ತಫಿಜುರ್‌ ರಹಮಾನ್‌ ಸತತ ವಿಶ್ವಕಪ್‌ ಪಂದ್ಯಗಳಲ್ಲಿ 5 ವಿಕೆಟ್‌ ಕಿತ್ತ 3ನೇ ಬೌಲರ್‌. ಗ್ಯಾರಿ ಗಿಲ್ಮೋರ್‌, ಅಶಾಂತ ಡಿ ಮೆಲ್‌ ಉಳಿದಿಬ್ಬರು.

– ಮುಸ್ತಫಿಜುರ್‌ 54 ಪಂದ್ಯಗಳಿಂದ 100 ವಿಕೆಟ್‌ ಪೂರ್ತಿಗೊಳಿಸಿದರು.

– ಈ ಪಂದ್ಯದಲ್ಲಿ ಅತ್ಯಧಿಕ 13 ವಿಕೆಟ್‌ಗಳು ಎಡಗೈ ಪೇಸ್‌ ಬೌಲರ್‌ಗಳ ಪಾಲಾದವು. ಇದು ಏಕದಿನ ದಾಖಲೆ.

– ಏಕದಿನ ಪಂದ್ಯವೊಂದರಲ್ಲಿ ಕೇವಲ 2ನೇ ಸಲ ಎಡಗೈ ಬೌಲರ್‌ಗಳಿಬ್ಬರು 5 ಪ್ಲಸ್‌ ವಿಕೆಟ್‌ ಕಿತ್ತರು. 2015ರ ವಿಶ್ವಕಪ್‌ ಗ್ರೂಪ್‌ ಪಂದ್ಯದಲ್ಲಿ ಮಿಚೆಲ್‌ ಸ್ಟಾರ್ಕ್‌, ಟ್ರೆಂಟ್‌ ಬೌಲ್ಟ್ ಈ ಸಾಧನೆ ಮಾಡಿದ್ದರು.

– ಮಶ್ರಫೆ ಮೊರ್ತಜ ಏಕದಿನ ಸರಣಿ/ಪಂದ್ಯಾವಳಿಯಲ್ಲಿ ಅತ್ಯಂತ ಕಳಪೆ ಬೌಲಿಂಗ್‌ ಸರಾಸರಿ ದಾಖಲಿಸಿದರು (361.00, ಕನಿಷ್ಠ 50 ಓವರ್‌ ಮಾನದಂಡ). 56 ಓವರ್‌ಗಳಲ್ಲಿ 361 ರನ್ನಿತ್ತು ಒಂದು ವಿಕೆಟ್‌ ಉರುಳಿಸಿದ್ದಷ್ಟೇ ಮೊರ್ತಜ ಸಾಧನೆ. 1996ರ “ಟೈಟಾನ್‌ ಕಪ್‌’ ಟೂರ್ನಿಯಲ್ಲಿ ಜಾವಗಲ್‌ ಶ್ರೀನಾಥ್‌ 258 ರನ್ನಿತ್ತು ಒಂದು ವಿಕೆಟ್‌ ಉರುಳಿಸಿದ್ದು ಹಿಂದಿನ ಕಳಪೆ ಸರಾಸರಿ ಆಗಿತ್ತು.

– ವಿಶ್ವಕಪ್‌ನಲ್ಲಿ ಪರಾಭವಗೊಂಡ ಪಂದ್ಯಗಳಲ್ಲಿ ಅತ್ಯಧಿಕ 642 ರನ್‌ ಬಾರಿಸಿದ ದಾಖಲೆಯನ್ನು ಶಕಿಬ್‌ ಅಲ್‌ ಹಸನ್‌ ಸರಿದೂಗಿಸಿದರು. ಸಚಿನ್‌ ತೆಂಡುಲ್ಕರ್‌ ಕೂಡ ಪರಾಜಿತ 16 ಪಂದ್ಯಗಳಲ್ಲಿ ಇಷ್ಟೇ ರನ್‌ ಹೊಡೆದಿದ್ದಾರೆ.

– ಶಕಿಬ್‌ ವಿಶ್ವಕಪ್‌ ಕೂಟವೊಂದರಲ್ಲಿ 600 ರನ್‌ ಜತೆಗೆ 10 ಪ್ಲಸ್‌ ವಿಕೆಟ್‌ (11) ಕಿತ್ತ ಮೊದಲ ಆಲ್‌ರೌಂಡರ್‌.

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.